ನಿವೃತ್ತಿ ಶಿಕ್ಷಕಿ ಜಿ ಪುಷ್ಪಾವತಿ ಬೀಳ್ಕೊಡುಗೆ

 

ಮೈಸೂರು:31 ಆಗಸ್ಟ್ 2021

ಪವಿತ್ರವಾದ ಶಿಕ್ಷಕ ವೃತ್ತಿಯನ್ನು 38 ವರ್ಷಗಳ ಕಾಲ ನಡೆಸಿಕೊಂಡು ಬಂದು ಸಾವಿರಾರು ಮಕ್ಕಳ ಬಾಳಿಗೆ ಬೆಳಕು ನೀಡಿರುವ ಶಿಕ್ಷಕಿ
ಜಿ ಪುಷ್ಪಾವತಿ ಅವರ ಸೇವೆ ಸ್ಮರಣೀಯ ಎಂದು ಅಕ್ಕನ ಬಳಗ ಶಾಲೆಯ ಹಿರಿಯ ಸದಸ್ಯರಾದ ಮಂಗಳಾ ಮುದ್ದುಮಾದಪ್ಪ ಅಭಿಪ್ರಾಯಪಟ್ಟರು.

ತ್ಯಾಗರಾಜ ರಸ್ತೆಯಲ್ಲಿರುವ ಅಕ್ಕನ ಬಳಗ ಶಾಲೆಯ ಶಿಕ್ಷಕಿ
ಜಿ ಪುಷ್ಪಾವತಿ 38ವರ್ಷಗಳ ಕಾಲ ಸೇವೆಯನ್ನು ಸಲ್ಲಿಸಿ ನಿವೃತ್ತಿ ಗೊಳ್ಳುತ್ತಿರುವ ಶಿಕ್ಷಕಿ ಜಿ ಪುಷ್ಪಾವತಿ ಅವರನ್ನು ಅಕ್ಕನ ಬಳಗ ಶಾಲಾ ಶಿಕ್ಷಕರ ಸಂಘ ಹಾಗೂ ಶಾಲೆಯ ಹಳೆಯ ವಿದ್ಯಾರ್ಥಿಗಳು ಮತ್ತು ಪದಾಧಿಕಾರಿಗಳು ಸನ್ಮಾನಿಸಿ ಬೀಳ್ಕೊಟ್ಟ ಸಂದರ್ಭದಲ್ಲಿ ಅವರು ಮಾತನಾಡುತ್ತಿದ್ದರು. ಎಲ್ಲಾ ವೃತ್ತಿಗಳಿಗಿಂತಲೂ ಶಿಕ್ಷಕ ವೃತ್ತಿ ಶ್ರೇಷ್ಠವಾಗಿದೆ. ಸಮಾಜ ಕಟ್ಟುವ ಇಂತಹ ಕಾಯಕದ ಯೋಗ ಎಲ್ಲಗಿಗೂ ಸಿಗುವುದಿಲ್ಲ , ಅಂತಹ ವೃತ್ತಿ ಘನತೆಗೆ ಕುತ್ತಾಗದಂತೆ 38 ವರ್ಷ ಸಲ್ಲಿಸಿರುವ ಸೇವೆ ಸದಾ ಜೀವನದಲ್ಲಿ ಸ್ಮರಿಸುವಂತಹ ಎಂದು ತಿಳಿಸಿದರು.

ಕೋವಿಡ್‌ನಿಂದಾಗಿ ಶಾಲೆಗೆ ಮಕ್ಕಳು ಬರುತ್ತಿಲ್ಲ ಎಂಬ ಕೊರಗು ಶಿಕ್ಷಕರನ್ನು ಕಾಡುತ್ತಿದೆ . ಆನ್‌ಲೈನ್ ಕ್ಲಾಸ್ ಎಂದಿಗೂ ಕಲಿಕೆಗೆ ಪೂರಕವಾಗದು ಎಂದ ಅವರು , ಗ್ರಾಮೀಣ ಮಕ್ಕಳ ಶೈಕ್ಷಣಿಕ ಹಿನ್ನಡೆಯನ್ನು ಮತ್ತೆ ಸರಿದಾರಿಗೆ ತರುವ ಹೊಣೆ ನಮ್ಮ ಶಿಕ್ಷಕರ ಮೇಲಿದ್ದು , ಬೇಗ ಕೋವಿಡ್ ಮಹಾಮಾರಿ ತೊಲಗಲಿ ಎಂದು ಪ್ರಾರ್ಥಿಸೋಣ ಎಂದರು.

ಇದೇ ಸಂದರ್ಭದಲ್ಲಿ ಪರಮಪೂಜ್ಯ ಇಳೈ ಆಳ್ವಾರ್ ಸ್ವಾಮೀಜಿ ,ವಿವಿಯ ಸಮಾಜ ಸೇವಕರಾದ ಕೆ ರಘುರಾಂ ವಾಜಪೇಯಿ ,ಮಾಜಿ ನಗರ ಪಾಲಿಕಾ ಸದಸ್ಯರಾದ ಎಂ ಡಿ ಪಾರ್ಥಸಾರಥಿ ,
ಕಡಕೊಳ ಜಗದೀಶ್ ,ಕೃಷ್ಣ ರಾಜ್ಯದ ಸಹಕಾರಿ ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಬಸಪ್ಪ ,ಕಡಕೊಳ ಜಗದೀಶ್ ,ಕಾರ್ಯದರ್ಶಿ
ಲೀಲಾ ಸತೀಶ್ ಚಂದ್ರ ,ಗೌರಮ್ಮಣಿ,ಮುಖ್ಯ ಶಿಕ್ಷಕಿ ಸುಗುಣಾವತಿ ,ಉದ್ಯಮಿ ವಾಸುದೇವ ಮೂರ್ತಿ ,ಹರೀಶ್ ನಾಯ್ಡು ,ಎಸ್ ಎನ್ ರಾಜೇಶ್ ಮಂಜುನಾಥ್ ,ನವೀನ್ ಕೆಂಪಿ ,ಸುಚೀಂದ್ರ ,ಹಾಗೂ ಇನ್ನಿತರರು ಹಾಜರಿದ್ದರು

Leave a Reply

Your email address will not be published. Required fields are marked *