ಗ್ಯಾಂಗ್ ರೇಪ್ ಕೇಸ್ ಪೋಲೀಸರಿಗೆ ತನಿಖಾ ಪಾಠ ಹೇಳಿಕೊಟ್ಟ ಸಿದ್ದು ಮೇಷ್ಟ್ರು

 

 

ಮೈಸೂರು:1 ಸೆಪ್ಟೆಂಬರ್ 2021

ನ@ದಿನಿ

ಮೈಸೂರು: ಮಾಜಿ ಸಿಎಂ ಸಿದ್ದರಾಮಯ್ಯ ಇಂದು ಮೈಸೂರಿನಲ್ಲಿ ಗ್ಯಾಂಗ್ ರೇಪ್ ಘಟನೆ ನಡೆದ ಸ್ಥಳ ಪರಿಶೀಲಿಸಿದ ನಂತರ ಸಿದ್ದರಾಮಯ್ಯ ನವರ ಪ್ರಶ್ನೆಗಳಿಗೆ  ಪೊಲೀಸ್ ಆಧಿಕಾರಿ ಐಓ ರವಿಶಂಕರ್ ತಬ್ಬಿಬ್ಬಾಗಿದ್ದಾರೆ.

ಸ್ಥಳ ಪರಿಶೀಲನೆ ವೇಳೆ ಪೊಲೀಸರಿಗೆ ಸಿದ್ದರಾಮಯ್ಯ ತನಿಖಾ ಪಾಠ ಮಾಡಿದ್ರು.

ನೀನು ಎಷ್ಟು ತಿಂಗಳಾಯ್ತಯ್ಯ ಡ್ಯೂಟಿಗೆ ಬಂದು. ಈ ಘಟನೆ ನಡೆದ ಸ್ಥಳ ಮೂಡಾಗೆ ಸೇರುತ್ತೋ ಅರಣ್ಯ ಪ್ರದೇಶವೋ!ಯಾರಿಗೆ ಸೇರುತ್ತೆ ಅನ್ನೋದೆ ಗೋತ್ತಿಲ್ಲಾ ನಿನಗೆ ಇಲ್ಲಿಂದ ರಿಂಗ್ ರಸ್ತೆ ಎಷ್ಟು ದೂರು ಬರುತ್ತೆ ಹೇಳು. ಸಿದ್ದು ಪ್ರಶ್ನೆಗೆ ಹಿರಿಯ ಅಧಿಕಾರಿಗಳ ಮುಖ ನೋಡಿದ ರವಿಶಂಕರ್‌ಗೆ ಅವರ ಮುಖ ಏನು ನೋಡುತ್ತಿ ಹೇಳು ಎಂದ ಸಿದ್ದರಾಮಯ್ಯ ಕೇಳಿದರು.

ಇಲ್ಲಿಗೆ ಹುಡುಗ ಹುಡುಗಿ ಬರುತ್ತಾರೆ ಅಂತ ಗೊತ್ತೇನೆಯ್ಯ ನೀನು ಎಷ್ಟು ಸಾರಿ ಈ ಜಾಗಕ್ಕೆ ಬಂದಿದ್ದಿ. ಗರುಡಾ ವಾಹನ ಇಲ್ಲಿಗೆ ಬರುತ್ತವಾ. ಐಓ ರವಿಶಂಕರ್ ಗೆ ಸಿದ್ದರಾಮಯ್ಯ ಪ್ರಶ್ನೆಗಳ ಸುರಿಮಳೆ. ಇಲ್ಲಿಂದ ರಿಂಗ್ ರಸ್ತೆಗೆ ಎಷ್ಟು ಕಿಲೋಮೀಟರ್.
ಒಂದುವರೆ ಕಿಲೋಮೀಟರ್? ಇನ್ನ ಅದೆಲ್ಲ ಅಳತೆ ಮಾಡಿಲ್ವಯ್ಯ. ಕೋರ್ಟ್‌ನಲ್ಲಿ ಕೇಳಿದ್ರೆ ಏನ್ ಹೇಳ್ತಿಯಯ್ಯ.
ಇದೆಲ್ಲ ರೆಡಿ ಮಾಡಿಕೊಳ್ಳಬೇಕಲ್ವ. ಇನ್ಸ್ಪೆಕ್ಟರ್ ರವಿಶಂಕರ್ ಗೆ ಸಿದ್ದರಾಮಯ್ಯ ಫುಲ್ ಕ್ಲಾಸ್ ತೆಗೆದುಕೊಂಡರು.

ನೀವೆಲ್ಲ ಹೇಳಿಕೊಟ್ಟಿಲ್ವಯ್ಯ ಎಂದು ಡಿಸಿಪಿಗೆ ಕೇಳಿದ ಸಿದ್ದರಾಮಯ್ಯ. ಅಬ್ಯೂಚುಯಲ್ ಅಫೆಂಡರ್ಸ್ ಅಂದ್ರೆ ಗೊತ್ತೇನಯ್ಯ.
ಐಓ ರವಿಶಂಕರ್ ಗೆ ಸಿದ್ದರಾಮಯ್ಯ ಪ್ರಶ್ನೆ. ಉತ್ತರ ಹೇಳದಿದ್ದಾಗ ಸಿದ್ದರಾಮಯ್ಯರಿಂದಲೇ ಉತ್ತರ. ಅಂಗಂದ್ರೆ ಪದೇ ಪದೇ ತಪ್ಪು ಮಾಡುವವರು ಅಂತ. ಅವರು ಮೈಸೂರಲ್ಲಿ ಹಿಂದೆ ತಪ್ಪು ಮಾಡಿದ್ರ. ಸಿದ್ದು ಪ್ರಶ್ನೆಗೆ ಮಧ್ಯ ಪ್ರವೇಶ ಮಾಡಿ ಉತ್ತರ ಕೊಟ್ಟ ಡಿಸಿಪಿ ಪ್ರದೀಪ್ ಗುಂಟಿ.ಅವರಲ್ಲಿ ಒಬ್ಬ ಗಂಧದ ಕಳ್ಳ. ಕೇಸ್ ಆಗಿಲ್ವ ಎಂದ ಸಿದ್ದರಾಮಯ್ಯ.ಇಲ್ಲ ಸರ್ ಕೇಸ್ ಆಗಿತ್ತು ಎಂದ ಡಿಸಿಪಿ ಪ್ರದೀಪ್ ಗುಂಟಿ .ಜಾಮೀನು ಮೇಲೆ ಬಂದಿದ್ರ ಎಂದ ಸಿದ್ದು ನಂತರ ಪೊಲೀಸರಿಗೆ ಸಿದ್ದರಾಮಯ್ಯ ಪಾಠ ಮಾಡಿದರು.

Leave a Reply

Your email address will not be published. Required fields are marked *