ಮುರುಡಗಳ್ಳಿಯಲ್ಲಿ ಡಾ.ಬಿ‌ಆರ್.ಅಂಬೇಡ್ಕರ್ ಜಯಂತಿ ಪ್ರಯುಕ್ತ ಉಚಿತ ಆರೋಗ್ಯ ತಪಾಸಣಾ ಶಿಬಿರ, ಅನ್ನ ಸಂತರ್ಪಣೆ

ಮೈಸೂರು:14 ಏಪ್ರಿಲ್ 2022

ನಂದಿನಿ ಮೈಸೂರು

ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕ ಸಂಘ ಮತ್ತು
ಮುರುಡಗಳ್ಳಿ ಯೂತ್ಸ್ ವತಿಯಿಂದ ಸಂವಿಧಾನ ಶಿಲ್ಪಿ ಡಾ.ಬಿ‌ಆರ್. ಅಂಬೇಡ್ಕರ್ ರವರ ಜಯಂತಿ ಪ್ರಯುಕ್ತ ಉಚಿತ ಆರೋಗ್ಯ ತಪಾಸಣಾ ಶಿಬಿರ, ಅನ್ನ ಸಂತರ್ಪಣೆ ಹಾಗೂ ದೀಪೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿದ್ದರು.

ಮೈಸೂರಿನ ಮುರುಡಗಳ್ಳಿಯ ಮುಖಂಡರು, ಯುವಕರು ಸೇರಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಮುರುಡಗಳ್ಳಿ ಗ್ರಾಮದ ಜನತೆಯ ಆರೋಗ್ಯದ ದೃಷ್ಟಿಯಿಂದ
ತಾಲ್ಲೂಕು ವೈಧ್ಯಾದಿಕಾರಿಗಳ ಸಹಯೋಗದೊಂದಿಗೆ ಉಚಿತ ಆರೋಗ್ಯ ಶಿಬಿರವನ್ನು ‌ಆಯೋಜಿಸಲಾಗಿತ್ತು.ಸುಮಾರು 150 ಕ್ಕೂ ಹೆಚ್ಚು ಮಂದಿ ಆರೋಗ್ಯ ಶಿಬಿರವನ್ನು ಸದುಪಯೋಗಪಡಿಸಿಕೊಂಡರು.

ಕಾರ್ಯಕ್ರಮದಲ್ಲಿ ಮಹೇಶ್ ,
ಕೆ ಶಿವಕುಮಾರ್,
ಅಂಕಣ್ಣ, ಸಿದ್ದಪ್ಪ, ಪುಟ್ಟ ಮಾದಯ್ಯ , ಚಂದ್ರಶೇಖರ್ ಸೇರಿದಂತೆ ಊರಿನ ಮುಖಂಡರು ಭಾಗಿಯಾಗಿದ್ದರು .

Leave a Reply

Your email address will not be published. Required fields are marked *