ಕಂದಾಯ ಸಚಿವ ಕೃಷ್ಣ ಭೈರೇಗೌಡರವರಿಗೆ “ಸಮರ್ಥ ಯುವ ನೇತಾರ” ಎಂಬ ಬಿರುದು

‌ನಂದಿನಿ ಮೈಸೂರು

ಮೈಸೂರು ನಗರಕ್ಕೆ ಕರ್ನಾಟಕ ರಾಜ್ಯದ ಮಾನ್ಯ ಕಂದಾಯ ಸಚಿವರಾದ ಶ್ರೀ ಕೃಷ್ಣ ಭೈರೇಗೌಡ ಸಚಿವರಾದ ನಂತರ ಪ್ರಥಮ ಬಾರಿಗೆ ಮೈಸೂರಿಗೆ ಆಗಮಿಸಿದ ಸಂದರ್ಭದಲ್ಲಿ ಮೈಸೂರು ನಗರ (ಜಿಲ್ಲಾ) ಕಾಂಗ್ರೆಸ್ ಪ್ರಚಾರ ಸಮಿತಿ ವತಿಯಿಂದ “ಸಮರ್ಥ ಯುವ ನೇತಾರ” ಎಂಬ ಬಿರುದನ್ನು ನೀಡುವ ಮೂಲಕ ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ಚಾಮರಾಜ ಕ್ಷೇತ್ರದ ಶಾಸಕರಾದ ಕೆ.ಹರೀಶಗೌಡರವರು, ಸಾಹುಕಾರ ಚೆನ್ನಯ್ಯ ಬ್ಲಾಕ್ ಅಧ್ಯಕ್ಷರಾದ ಜಿ.ಎನ್. ಮಂಜುನಾಥ್, ಪ್ರಚಾರ ಸಮಿತಿ ಅಧ್ಯಕ್ಷರಾದ ರಘು ರಾಜೇ ಅರಸ್ ಉಪಾಧ್ಯಕ್ಷರಾದ ಲತಾ ರಂಗನಾಥ್, ಪದ್ಮನಾಭನ್, ಚಾಮರಾಜ ಕ್ಷೇತ್ರದ ಜಗದೀಶ್ ಆರ್, ಕೆ ಆರ್ ಕ್ಷೇತ್ರ ಅಧ್ಯಕ್ಷರಾದ ಯೋಗೇಶ್, ಉಮೇಶ್ ,ಹೇಮಂತ್ ಕುಮಾರ್,ಸಂತೋಷ್, ಚಂದ್ರಶೇಖರ್ ಇನ್ನು ಮುಂತಾದವರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *