ನಾಳೆ ಕೆ.ಹೆಚ್.ರಾಮಯ್ಯರವರ ಸಂಸ್ಮರಣಾ ಕಾರ್ಯಕ್ರಮ:ಯಮುನಾ

 

ಮೈಸೂರು:4 ಅಕ್ಟೋಬರ್ 2021

ನ@ದಿನಿ

                              ದಿ.5 ರಂದು ಕೆ.ಹೆಚ್.ರಾಮಯ್ಯರವರ ಸಂಸ್ಮರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಒಕ್ಕಲಿಗರ ವಿಕಾಸ ವೇದಿಕೆ,ಒಕ್ಕಲಿಗರ ಮೀಸಲಾತಿ ಹೋರಾಟ ಸಮಿತಿ ಅಧ್ಯಕ್ಷೆ ಯಮುನಾ ಮಾಹಿತಿ ನೀಡಿದರು.

                           ಜಲದರ್ಶಿನಿಯಲ್ಲಿ ಸುದ್ದಿಗೋಷ್ಟೀ ಉದ್ದೇಶಿಸಿ ಮಾತನಾಡಿದ ಅವರು ಸಮಾಜಕ್ಕೆ ರಾಮಯ್ಯರವರ ಕೊಡುಗೆ ಅಪಾರ.ವಿಕಾಸ ವೇದಿಕೆ ಸ್ಥಾಪಿಸಿ 10 ವರ್ಷ ಪೂರ್ಣಗೊಂಡಿದೆ.ಕಳೆದ ಹತ್ತು ವರ್ಷದಿಂದ ಪ್ರತಿ ರಾಮಯ್ಯರವರ ಸಂಸ್ಮರಣಾ ಕಾರ್ಯಕ್ರಮ ಆಯೋಜಿಸುತ್ತಾ ಬಂದಿದೆ.ಅಂತೆಯೇ ನಾಳೆ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಕೆ.ಹೆಚ್.ರಾಮಯ್ಯರವರ ಸಮಾಧಿ ಬಳಿ ಸಂಸ್ಮರಣಾ ಕಾರ್ಯಕ್ರಮ ಜರುಗಲಿದೆ.ಒಕ್ಕಲಿಗರಲ್ಲದೇ ಎಲ್ಲಾ ಜನಾಂಗದವರು ಕೂಡ ಕಾರ್ಯಕ್ರಮಕ್ಕೆ ಕೈಜೋಡಿಸಿದ್ದಾರೆ.ಅಧ್ಯಕ್ಷ
ಕೆ.ಎಸ್.ಕೃಷ್ಣ,ಮಹಾನಗರ ಪಾಲಿಕೆ ಸದಸ್ಯ ಕೆ.ವಿ.ಶ್ರೀಧರ್,ವಿದ್ವಾಂಸರಾದ ಪ್ರೋ.ಕೆ.ಎಸ್.ಭಗವಾನ್,ಮಂಜು,ನಂದೀಶ್,ಡಾ.ಹನಿಯೂರು ಚಂದ್ರೇಗೌಡ ಸೇರಿದಂತೆ ಗಣ್ಯರು ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ವೇದಿಕೆಯ ಗೌರವಾಧ್ಯಕ್ಷ ಹೆಚ್.ಕೆ.ರಾಮು,ಜಿ.ಮಂಜು,
ಒಕ್ಕಲಿಗ ಸಂಘದ ಖಜಾಂಚಿ ಸುಶೀಲಾನಂಜಪ್ಪ ಹಾಜರಿದ್ದರು.

Leave a Reply

Your email address will not be published. Required fields are marked *