ಭಾರತ್ ನ್ಯೂಸ್ ಟಿವಿ ಸಹಾಯ ಅಭಿಯಾನಕ್ಕೆ ಸ್ಪಂದಿಸಿದ ಪೆಟ್ರೋಲ್ ಬಂಕ್ ಯುವಕ: 1 ದಿನದ ಸಂಬಳ ನೀಡಿ ಮಾನವೀಯತೆ ಮೆರೆದ ಶಿವು

 

ಸರಗೂರು:17 ಅಕ್ಟೋಬರ್ 2021

ನ@ದಿನಿ

                    ಸೆಪ್ಟೆಂಬರ್ 24 ರಂದು ಭಾರತ್ ನ್ಯೂಸ್ ಟಿವಿ ಎರಡೂ ಕಿಡ್ನಿ ವೈಫಲ್ಯವಾಗಿ ಚಿಕಿತ್ಸೆಗೆ ಸಹಾಯಕ್ಕೆ ಅಂಗಲಾಚುತ್ತಿ ಬಡ ಯುವಕ ರಾಮಚಂದ್ರ ರವರ ಸುದ್ದಿ ಬಿತ್ತರಿಸಿತ್ತು.  ಬಳಿಕ ಪೆಟ್ರೋಲ್ ಬಂಕ್ ಅಲ್ಲಿ ಕೆಲಸ ಮಾಡುವ ಶಿವು ಅವರು ತನ್ನ ಒಂದು ದಿನದ ಸಂಬಳವನ್ನು ನೀಡಿ ಮಾನವೀಯತೆ ಮೆರೆದಿದ್ದಾರೆ.

 

                    ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಅವರು ಸರಗೂರು ಸಮೀಪದ ಹಳೇಹೆಗ್ಗುಡಿಲು ಗ್ರಾಮದ ರಾಮಚಂದ್ರ ಎಂಬ ಯುವಕನಿಗೆ ಎರಡೂ ಕಿಡ್ನಿ ವೈಫಲ್ಯವಾಗಿದ್ದು, ಈ ಹಿನ್ನೆಲೆ ಇಡೀ ಕುಟುಂಬವೀಗ ಸಂಕಷ್ಟದಲ್ಲಿ ದಿನ ದೂಡುವ ಪರಿಸ್ಥಿತಿ ನಿರ್ಮಾಣವಾಗಿದೆ.

                       ಕುಟುಂಬದ ಪರಿಸ್ಥಿತಿ ಅರಿತು ನಾನು ನನ್ನ ಒಂದು ದಿನದ ಸಂಬಳ ನೀಡಿದ್ದೇನೆ.ನಾನು ಪ್ರಸ್ತುತ ಪೆಟ್ರೋಲ್ ಬಂಕ್ ಅಲ್ಲಿ ಕೆಲಸ ಮಾಡುತ್ತಿರುವೇ, ನಾನು ಬಡ ಕುಟುಂಬದವನೇ ಅದರಿಂದ ಬಡ ಕುಟುಂಬದವರ ಪರಿಸ್ಥಿತಿ ಹೇಗೆ ಎಂಬುದನ್ನು ಅರಿತು ನಾನು ಇಂದು ಚಿಕ್ಕದಾದ ಸಹಾಯ ಮಾಡಿದ್ದೇನೆ.

                       ರಾಮಚಂದ್ರ ಎಂಬ ಯುವಕನ ಕುಟುಂಬದವರು ಸುಮಾರು 70 ಕಿ ಮೀ ದೂರ ಇರುವ ಮೈಸೂರಿಗೆ ಹೋಗಿ ಡಯಾಲಿಸಿಸ್ ಮಾಡಿಸಿಕೊಂಡು ಬರುತ್ತಿದ್ದಾರೆ. ದಯವಿಟ್ಟು ಇವರಿಗೆ ಹತ್ತಿರ ಇರುವ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಮಾಡಿಸಲು ಜನಪ್ರತಿನಿಧಿಗಳು ಮುಂದಾಗಬೇಕು ಎಂದು ಮನವಿ ಮಾಡಿದರು.

                        ಆಪರೇಷನ್ಗೆ ಸುಮಾರು 12 ಲಕ್ಷ ರೂ. ಆಗತ್ಯವಿದೆ. ಅದನ್ನು ಭರಿಸಲು ಆ ಕುಟುಂಬಕ್ಕೆ ಶಕ್ತಿ ಇಲ್ಲ. ಹೀಗಾಗಿ ಯುವಕ ದಾನಿಗಳ ಬಳಿ ಸಹಾಯ ಕೋರಿದ್ದು, ನನ್ನ ಜೀವ ಉಳಿಸಿ ಎಂದು ಅಂಗಲಾಚುತ್ತಿದ್ದಾನೆ. ಆದ್ದರಿಂದ ಆ ಯುವಕನಿಗೆ ಸಹಾಯಸ್ತ ಚಾಚುವವರು ಮುಂದೆ ಬರಬೇಕು ಎಂದು ಕೋರಿದರು.

ಭಾರತ್ ನ್ಯೂಸ್ ಟಿವಿ ಸಹಾಯ ಅಭಿಯಾನ

ನೀವು ಒಂದ್ರೂಪಾಯಿ ಆದ್ರೂ ಸಹಾಯ ಮಾಡಿದ್ರೇ ಬಡ ಯುವಕ ಜೀವ ಉಳಿಯಬಹುದೇನೂ ಸಹಾಯ ಮಾಡುವವರು ಕೆಳಗಿನ ಖಾತೆಗೆ ಹಣವನ್ನು ನೀಡಬಹುದು.

Name :Ramachandra . canara bank Saraguru branch. account number 4343101011813. Ifsc code :CNRB0004343

Leave a Reply

Your email address will not be published. Required fields are marked *