ಡಾ.ಬಿಆರ್ ಅಂಬೇಡ್ಕರ್ ಹಿಂದುಳಿದ ವರ್ಗಗಳ ಹಕ್ಕಿಗಾಗಿ ತಮ್ಮ ಇಡೀ ಜೀವನ ಮುಡಿಪಾಗಿಟ್ಟ ಶ್ರೇಷ್ಠ ವ್ಯಕ್ತಿ:ಸಬ್ ಇನ್ಸ್ಪೆಕ್ಟರ್ ಎಸ್. ಯು.  ಬಸವರಾಜು

ಬೈಲಕುಪ್ಪೆ :15 ಏಪ್ರಿಲ್ 2022

ರಾಜೇಶ್

ಭಾರತದ ಸಂವಿಧಾನ ರಚನೆಯಲ್ಲಿ ಅಂಬೇಡ್ಕರ್ ಅವರ ಪಾತ್ರ ಮಹತ್ವವಾಗಿದ್ದು, ಹಾಗೂ ಸಮಾಜದಲ್ಲಿ ಹಿಂದುಳಿದ ವರ್ಗಗಳ ಹಕ್ಕಿಗಾಗಿ ತಮ್ಮ ಇಡೀ ಜೀವನವನ್ನು ಮುಡಿಪಾಗಿಟ್ಟ ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರು ಶ್ರೇಷ್ಠ ವ್ಯಕ್ತಿ ಎಂದು, ಸಬ್ ಇನ್ಸ್ಪೆಕ್ಟರ್ ಎಸ್. ಯು.  ಬಸವರಾಜು ಹೇಳಿದರು.

131ನೇ ಅಂಬೇಡ್ಕರ್ ಜಯಂತೋತ್ಸವ ದಂದು ಬೈಲಕುಪ್ಪೆ ಆರಕ್ಷಕ ಠಾಣೆಯಲ್ಲಿ ಅವರು ಮಾತನಾಡಿದರು.

ಅಪರಾಧ ವಿಭಾಗದ ಸಬ್ ಇನ್ಸ್ಪೆಕ್ಟರ್ ವಿಜಯೇಂದ್ರ ,ಸಿಬ್ಬಂದಿಗಳಾದ ಸಿದ್ದರಾಜು, ರವಿ, ದೇವರಾಜು, ಅಶೋಕ,ಜಯಕುಮಾರ್, ನಂದೀಶ್, ಶಿವಣ್ಣ, ಶತ್ರುಜ್ಞ, ತ್ರೀಣೇಶ್, ಮಹಾದೇವ , ಮಹಿಳಾ ಸಿಬ್ಬಂದಿ ಸೌಮ್ಯ ಪ್ರಿಯ ಇದ್ದರು.

Leave a Reply

Your email address will not be published. Required fields are marked *