ಶುರುವಾಯ್ತು 414 ನೇ ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ-2023 ದಸರಾ ಗಜ ಪಯಣಕ್ಕೆ ಚಾಲನೆ ಮೈಸೂರಿನತ್ತ ಹೆಜ್ಜೆ ಹಾಕಿದ 9 ಆನೆಗಳು

 

ನಂದಿನಿ ಮೈಸೂರು

414 ನೇ ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ 2023 ಆರಂಭ | ದಸರಾ ಗಜ ಪಯಣಕ್ಕೆ ಚಾಲನೆ

ವಿಶ್ವವಿಖ್ಯಾತ ನಾಡ ಹಬ್ಬ ಮೈಸೂರು ದಸರಾ 2023 ಚಿನ್ನದ ಅಂಬಾರಿ ಹೊತ್ತು ಸಾಗುವ ಅಭಿಮನ್ಯು ನೇತೃತ್ವದ 9 ಆನೆಗಳು ಅರಮನೆ ನಗರಿ ಕಡೆ ಇಂದು ಹೆಜ್ಜೆ ಹಾಕಿದವು. ಗಜ ಪಯಣ ದಲ್ಲಿ ಅಭಿಮನ್ಯು ಸೇರಿದಂತೆ ಅರ್ಜುನ, ಭೀಮ, ಗೋಪಿ, ಧನಂಜಯ, ವರಲಕ್ಷ್ಮಿ, ವಿಜಯ, ಮಹೇಂದ್ರ ಹಾಗೂ ಕಂಜನ್ ಆನೆಗಳು ಮೈಸೂರಿಗೆ ಆಗಮಿಸಲಿವೆ.

ವೀರನ ಹೊಸಹಳ್ಳಿಯಲ್ಲಿ
ಬಳಿ 9:45 ರಿಂದ 10:15 ನಡುವೆ ಸಲ್ಲುವ ತುಲಾ ಶುಭ ಲಗ್ನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಚಿವರಾದ ಡಾ. ಹೆಚ್ ಸಿ ಮಹದೇವಪ್ಪ ಅವರು ದಸರಾ ಗಜ ಪಯಣಕ್ಕೆ ಪೂಜೆ ಸಲ್ಲಿಸಿ ಆನೆಗಳಿಗೆ ಕಬ್ಬು ತಿನ್ನಿಸಿ ದಸರಾ ಮೊದಲ ಕಾರ್ಯಕ್ರಮಕ್ಕೆ
ಚಾಲನೆ ನೀಡಿದರು.

ಮಹಿಳೆಯರಿಂದ ಪೂರ್ಣ ಕುಂಭ ,ವೀರಗಾಸೆ,ಪೂಜಾಕುಣಿತ ಸೇರಿದಂತೆ ವಿವಿಧ ಕಲಾ ತಂಡಗಳು ಗಜಪಯಣಕ್ಕೆ ಮತ್ತಷ್ಟು ಮೆರಗು ನೀಡಿತು.

ಆನೆಗಳ ಪರಿಚಯ

– ಅಭಿಮನ್ಯು:
ವಯಸ್ಸು : ೪೪ ವರ್ಷ
ಎತ್ತರ : ೨.೬೬ ಮೀಟರ್
ಕಾಡಾನೆಯನ್ನು ಹಿಡಿದು ಪಳಗಿಸುವ ಹಾಗೂ ಚಿಕಿತ್ಸೆ ನೀಡುವ ಕಾರ್ಯದಲ್ಲಿ ನೈಪುಣ್ಯತೆ ಪಡೆದಿರುವ ಅಭಿಮನ್ಯು ಎಂತಹ ಬಲಿಷ್ಠ ಆನೆಯನ್ನು ಕೂಡ ಎದುರಿಸಿ ಹಿಡಿತದಲ್ಲಿಡುವ ಸಾಮರ್ಥ್ಯ ಹೊಂದಿದೆ. ಕೂಂಬಿಂಗ್ ಕಾರ್ಯದಲ್ಲಿ ನಿಪುಣ.

– ಮಹೇಂದ್ರ
ವಯಸ್ಸು: ೪೦ ವರ್ಷ
ಅಂದಾಜು ತೂಕ‌ : ೩೧೫೦ ಕೆಜಿ
ಎತ್ತರ : ೨.೭೪ ಮೀಟರ್
ಉದ್ದ : ೩.೨೫ ಮೀಟರ್
ಈ ಆನೆಯು ಕಳೆದ ಐದು ವರ್ಷಗಳ ಹಿಂದೆ ರಾಮನಗರ ಸಮೀಪದ ಅರಣ್ಯದಲ್ಲಿ ಸೆರೆಹಿಡಿದು ಪಳಗಿಸಿದ್ದ ಆನೆಯಾಗಿದ್ದು, ಎರಡನೇ ಬಾರಿಗೆ ದಸರಾ ಮಹೋತ್ಸವದಲ್ಲಿ ಭಾಗವಹಿಸುತ್ತಿದೆ.

– ಗೋಪಿ
ವಯಸ್ಸು: ೪೧ ವರ್ಷ
ಎತ್ತರ : ೨.೯ ಮೀಟರ್
ಉದ್ದ : ೩.೪೧ ಮೀಟರ್
ತೂಕ‌ : ೩೭೧೯ ಕೆಜಿ
ಈ ಆನೆಯನ್ನು ‌೧೯೯೩ರಲ್ಲಿ ಸಾಲೆಕೊಪ್ಪ‌ ಅರಣ್ಯದಲ್ಲಿ ಸೆರೆಹಿಡಿದು ಪಳಗಿಸಲಾಗಿದೆ. ಕಳೆದ ಎಂಟು ವರ್ಷಗಳಿಂದ ದಸರಾ ಮಹೋತ್ಸವದಲ್ಲಿ ಭಾಗವಹಿಸುತ್ತಿದೆ. ೨೦೧೫ರಿಂದ ಅರಮನೆ ಪೂಜ ವಿಧಾನಗಳಲ್ಲಿ ಭಾಗವಹಿಸುತ್ತಿದೆ.

– ಧನಂಜಯ
ವಯಸ್ಸು : ೪೪
ಎತ್ತರ: ೨.೯೨ ಮೀಟರ್
ಉದ್ದ: ೩.೯೪ ಮೀಟರ್
ತೂಕ : ೪೦೫೦ ಕೆಜಿ
ಈ ಆನೆಯನ್ನು 2013ರಲ್ಲಿ ಹಾಸನ ಜಿಲ್ಲಾ ವ್ಯಾಪ್ತಿಯಲ್ಲಿ ಸೆರೆಹಿಡಿಯಲಾಗಿದ್ದು‌ ಕಳೆದ‌ ಎರಡು ವರ್ಷಗಳಿಂದ ದಸರಾ ಮಹೋತ್ಸವದಲ್ಲಿ ಭಾಗವಹಿಸುತ್ತಿದೆ.

– ವಿಜಯ
ವಯಸ್ಸು: 64 ವರ್ಷ
ತೂಕ‌ : ೩೨೫೦
ಎತ್ತರ : ೨.೨೯ ಮೀಟರ್
ಉದ್ದ : ೩ ಮೀಟರ್
ಈ ಆನೆಯು ಬಹಳ ಸಾಧು ಸ್ವಭಾವಾದಗಿದ್ದು, 1965ರಲ್ಲಿ‌ ದುಬಾರೆ ಅರಣ್ಯ ಪ್ರದೇಶದಲ್ಲಿ ಸೆರೆ ಹಿಡಿಯಲಾಗಿತ್ತು. ಕಳೆದ 14 ವರ್ಷಗಳಿಂದ ದಸರಾ ಮಹೋತ್ಸವದಲ್ಲಿ ಕುಮ್ಕಿ ಆನೆಯಾಗಿ ಭಾಗವಹಿಸುತ್ತಿದೆ.

– ವರಲಕ್ಷ್ಮಿ
ವಯಸ್ಸು : ೨೨ ವರ್ಷ
ತೂಕ‌ : ೨೫೪೦ ಕೆಜಿ
ಎತ್ತರ : ೨.೯೨ ಮೀಟರ್
ಉದ್ದ : ೨.೦೫ ಮೀಟರ್
ಈ ಆನೆಯು ಕಳೆದ ಮೂರು ವರ್ಷಗಳಿಂದ ದಸರಾ ಮಹೋತ್ಸವದಲ್ಲಿ ಕುಮ್ಕಿ ಆನೆಯಾಗಿ ಭಾಗವಹಿಸುತ್ತಿದೆ.

– ಭೀಮ
ವಯಸ್ಸು : ೨೩ ವರ್ಷ
ಎತ್ತರ : ೨.೮೭ ಮೀಟರ್
ಉದ್ದ : ೩.೦೬ ಮೀಟರ್
ತೂಕ: ೩೫೦೦ ಕೆಜಿ
ಈ ಆನೆ ೨೦೧೭ರಿಂದ ದಸರಾ ಮಹೋತ್ಸವದಲ್ಲಿ ಭಾಗವಹಿಸುತ್ತಿದೆ. ಅಂಬಾರಿ ಹೊರಲು ಸಮರ್ಥ ಎನಿಸಿಕೊಂಡಿದ್ದಾನೆ. ದಂತ ಹಾಗೂ ದೇಹ ರಚನೆ ಅತ್ಯದ್ಭುತವಾಗಿದ್ದು, ಸಮತಟ್ಟಾದ ಬೆನ್ನು ಹೊಂದಿರುವುದು ಅಂಬಾರಿ ಹೊರಲು ಸೂಕ್ತವಾಗಿದ್ದಾನೆ.

– ಅರ್ಜುನ:
ವಯಸ್ಸು : ೬೪ ವರ್ಷ
ಎತ್ತರ : ೨.೯೫ ಮೀಟರ್
ಉದ್ದ : ೩.೨೫ ಮೀಟರ್
ತೂಕ: ೬೦೪೦ ಕೆಜಿ
ಈ ಆನೆಯನ್ನು ೧೯೬೮ರಲ್ಲಿ ಕಾಕನಕೋಟೆ ಅರಣ್ಯ ಪ್ರದೇಶದಲ್ಲಿ ಸೆರೆ ಹಿಡಿಯಲಾಯಿತು. ದ್ರೋಣ ಆನೆಯ ಅಕಾಲಿಕ ಮರಣ ನಂತರ ಒಮ್ಮೆ ಚಿನ್ನದ ಅಂಬಾರಿ ಹೊತ್ತು ಯಶಸ್ವಿಯಾಗಿದ್ದ. ಮಾವುತನನ್ನೇ ಕೊಂದದ್ದರಿಂದ ದಸರಾ ಅಂಬಾರಿ ಹೊರುವ ಕೆಲಸದಿಂದ ದೂರ ಇಡಲಾಯಿತು.

ಕಂಜನ್ ಆನೆ
24 ವರ್ಷ ದುಬಾರೆ ಶಿಬಿರ
ಮೊದಲ ಬಾರಿಗೆ ದಸರಾ ಮಹೋತ್ಸವದಲ್ಲಿ ಭಾಗಿಯಾಗುತ್ತಿದೆ.

ಸಚಿವರಾದ ಹೆಚ್ ಸಿ ಮಹದೇವಪ್ಪ ಅವರು ಮಾತನಾಡಿ ವಿಶ್ವ ವಿಖ್ಯಾತ ದಸರಾ ಆಚರಣೆಯ ಹಿನ್ನೆಲೆ ಯಲ್ಲಿ ದಸರಾ ಗಜ ಪಯಣಕ್ಕೆ ಧಾರ್ಮಿಕ ವಿಧಿ ವಿಧಾನಗಳ ಅನ್ವಯ ಮಾಡಲಾಗಿದೆ. ದಸರಾ ಎನ್ನುವುದು ಕುಣಿತಕ್ಕೆ, ಸಂತೋಷಕ್ಕೆ ಸೀಮಿತವಲ್ಲ, ನಮ್ಮ ಸಂಸ್ಕೃತಿಯನ್ನು ಬಿಂಬಿಸುವ ಆಚರಣೆ ಆದ್ದರಿಂದ ಇದು ವಿಶ್ವ ವಿಖ್ಯಾತಿ ಯನ್ನು ಪಡೆದಿದೆ. ಸ್ವಾತಂತ್ಯ ಬಂದ ಮೇಲೆ 75 ವರ್ಷಗಳನ್ನು ಕಳೆದಿದ್ದೇವೆ. ಅನೆ ಮೇಲೆ 800 ಕೆಜಿ ತೂಕದ ಅಂಭಾರಿಯನ್ನು ಮೆರವಣಿಗೆ ಮಾಡಿ ನಮ್ಮ ಸಂಸ್ಕೃತಿಯನ್ನು ಬಿಂಬಿಸಲಾಗುತ್ತದೆ. ಇಡೀ ದೇಶದ 140 ಕೋಟಿ ಜನರು ಎಲ್ಲರೂ ಒಂದೇ ಎಂಬ ಸಂದೇಶವನ್ನು ಬಿಂಬಿಸಲಾಗುತ್ತದೆ ಎಂದರು.

ಕಾಡನ್ನು ಉಳಿಸಿದರೆ ಕಾಡು ನಮ್ಮನ್ನು ಉಳಿಸುತ್ತದೆ. ಶೇಕಡಾ 33 ರಷ್ಟು ಅರಣ್ಯ ಪ್ರದೇಶ ಇರಬೇಕು ಆದರೆ ರಾಜ್ಯದಲ್ಲಿ ಶೇಕಡಾ 21 ರಷ್ಟು ಮಾತ್ರ ಇದೆ. ಆದ್ದರಿಂದ ಪ್ರತಿಯೊಬ್ಬರು ಕಾಡನ್ನು ಹಾಗೂ ಕಾಡು ಪ್ರಾಣಿಗಳನ್ನು ಉಳಿಸಬೇಕು. ಅಲ್ಲದೆ ಯಾವುದೇ ಜಾತಿ ಧರ್ಮ ಭೇದ ಮಾಡದೇ ಸಮ ಸಮಾಜದ ನಿರ್ಮಾಣದಲ್ಲಿ ಪ್ರತಿಯೊಬ್ಬರೂ ಭಾಗಿಯಾಗಬೇಕು ಎಂದು ತಿಳಿಸಿದರು.

ಅರಣ್ಯ ಜೀವಿಶಾಸ್ತ್ರ ಹಾಗೂ ಪರಿಸರ ಇಲಾಖೆಯ ಸಚಿವರಾದ ಈಶ್ವರ್ ಖಂಡ್ರೆ ಅವರು ದಸರಾ ಆನೆಗಳ ಪಟ್ಟಿ ಹಾಗೂ ಕಿರುಹೊತ್ತಿಗೆಯನ್ನು ಬಿಡುಗಡೆ ಮಾಡಿ ಮಾತನಾಡಿ ಗಜ ಪಯಣ ದಸರಾ ಮಹೋತ್ಸವದ ಆರಂಭ. ನಾವು ಯಾವುದೇ ಶುಭ ಕಾರ್ಯ ಮಾಡಲು ಗಣಪತಿ ಯನ್ನು ಪೂಜಿಸುತ್ತೇವೆ. ದಸರಾಗೆ 14 ಆನೆಗಳನ್ನು ಕಳುಹಿಸುತ್ತೇವೆ. ಇದರಲ್ಲಿ ಮೊದಲ ಹಂತವಾಗಿ 9 ಆನೆಗಳನ್ನು ಕಳುಹಿಸಲಾಗುತ್ತಿದೆ. ಸೆಪ್ಟಂಬರ್ 05 ರಂದು ಅರಮನೆ ದ್ವಾರದಲ್ಲಿ ಸ್ವಾಗತಿಸಲಾಗುತ್ತದೆ ಎಂದು ಮಾಹಿತಿ ತಿಳಿಸಿದರು.

ಈ ಹಿಂದೆ ದಸರಾ ಗೆ ಆನೆಗಳನ್ನು ಕಾಲು ನಡಿಗೆಯಲ್ಲಿ ಕರೆದುಕೊಂಡು ಹೋಗಲಾಗುತ್ತಿತ್ತು. ಆಗ ದಾರಿಯುದ್ದಕ್ಕೂ ಜನರು ಆನೆಗಳಿಗೆ ಮವುತರಿಗೆ ಪೂಜೆ ಮಾಡಿ ಆಹಾರ ನೀಡಿ ಮುಂದೆ ಕಳುಹಿಸುತ್ತಿದ್ದರು. ಆದರೆ ಇತ್ತೀಚೆಗೆ ಲಾರಿ ಮೂಲಕ ಕರೆದುಕೊಂಡು ಹೋಗಲಾಗುತ್ತದೆ. ಪ್ರಕೃತಿ ಪರಿಸರವನ್ನು ಉಳಿಸಬೇಕು. ಇಲ್ಲದಿದ್ದರೆ ತಾಪಮಾನ ಹೆಚ್ಚಳ ಆಗಿ ಹವಮಾನ ವೈಪರೀತ್ಯ ಉಂಟಾಗುತ್ತದೆ. ಓಜೋನ್ ಪದರ ತೆಳುವಾಗುತ್ತಿದೆ. ಕರೋನಾ ಸಂಧರ್ಭದಲ್ಲಿ ಆಮ್ಲಜನಕ ಸಿಗದೆ ಹಲವಾರು ಜನ ಸಾವನ್ನು ಅಪ್ಪಿದರು ಆದ್ದರಿಂದ ಪರಿಸರ ಉಳಿಸಿ ಬೆಳಸಬೇಕು ಎಂದು

ಪ್ಲಾಸ್ಟಿಕ್ ಬಳಕೆಯನ್ನು ತ್ಯಜಿಸಬೇಕು. ಪ್ಲಾಸ್ಟಿಕ್ ಬಳಕೆಯಿಂದ ಪರಿಸರ ಮಾಲಿನ್ಯ ಉಂಟಾಗುತ್ತಿದೆ. ಪ್ರಾಣಿ ಮತ್ತು ಮಾನವ ಸಂಘರ್ಷ ನಡೆಯುತ್ತಿದ್ದು, ಇದನ್ನು ತಡೆಯಬೇಕು. ಈ ನಿಟ್ಟಿನಲ್ಲಿ ಅರಣ್ಯ ಇಲಾಖೆ ಕಾರ್ಯ ನಿರ್ವಹಿಸುತ್ತಿದೆ ಎಂದು ತಿಳಿಸಿದರು.

ಮಹಾ ಪೌರರಾದ ಶಿವಕುಮಾರ್ ಅವರು ಮಾತನಾಡಿ ಮೈಸೂರಿನ ಅರಸರು ದಸರಾ ಆಚರಣೆಯನ್ನು ಜಾರಿಗೆ ತಂದರು. 100 ವರ್ಷಗಳ ಹಿಂದೆಯೇ ಮೈಸೂರು ನಗರ ವಿದ್ಯುತ್ ಛಕ್ತಿ ಯನ್ನು ಪಡೆಯಿತು. ರಾಜರು ಉತ್ತಮ ನಗರವನ್ನು ನಿರ್ಮಾಣ ಮಾಡಿದರು. ಉತ್ತಮ ರಸ್ತೆ ನಿರ್ಮಾಣ ಮಾಡಿದರು. ಮೈಸೂರು ಬೆಳವಣಿಗೆಗೆ ಮೈಸೂರು ರಾಜರ ಕೊಡುಗೆಯನ್ನು ನಾವೆಲ್ಲರೂ ನೆನೆಯಬೇಕು ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಹುಣಸೂರು ವಿಧಾನ ಸಭಾ ಕ್ಷೇತ್ರದ ಶಾಸಕರಾದ ಜಿ ಡಿ ಹರೀಶ್ ಗೌಡ ಅವರು ಮಾತನಾಡಿ ಗಜ ಪಯಣ ಕಾರ್ಯಕ್ರಮಕ್ಕೆ ಅದ್ದೂರಿಯಾಗಿ ಚಾಲನೆ ನೀಡಲಾಗಿದೆ. ಮಾನ್ಯ ಮುಖ್ಯಮಂತ್ರಿ ಗಳಾದ ಸಿದ್ದರಾಮಯ್ಯ ಅವರು ಈ ಭಾರಿ ದಸರಾವನ್ನು ಅದ್ದೂರಿಯಾಗಿ ಆಚರಣೆ ಮಾಡಲು ತೀರ್ಮಾನಿಸಿದ್ದಾರೆ. ದಸರಾ ಆಚರಣೆಯ ಪ್ರಮುಖ ಆಕರ್ಷಣೆ ಜಂಭೂಸವಾರಿ. ಇದನ್ನು ನೋಡಲು ವಿಶ್ವದ ವಿವಿಧ ಭಾಗಗಳಿಂದ ಜನರು ಆಗಮಿಸುತ್ತಾರೆ ಎಂದರು.

ಹುಣಸೂರು ತಾಲ್ಲೂಕು ಕಾಡಿನ ಗಡಿಯನ್ನು ಹೆಚ್ಚಾಗಿ ಹೊಂದಿದೆ. ಇಲ್ಲಿ ಪ್ರಾಣಿ ಹಾಗೂ ಮಾನವ ಸಂಘರ್ಷ ನಡೆಯುತ್ತಿದೆ. ಇದನ್ನು ತಡೆಯಲು ರೈಲ್ವೆ ಬ್ಯಾರಿಕೇಡ್ ಅಳವಡಿಸಬೇಕು ಎಂದು ಮಾನ್ಯ ಅರಣ್ಯ ಸಚಿವರಲ್ಲಿ ಮನವಿ ಮಾಡಿದಾಗ 5 ಕೋಟಿ ಅನುಧಾನ ನೀಡಲಾಗುವುದು ಎಂದು ತಿಳಿಸಿದ್ದಾರೆ ಎಂದು ಮಾಹಿತಿ ನೀಡಿದ ಅವರು ಅರಣ್ಯ ಇಲಾಖೆಯ ಗುತ್ತಿಗೆ ಆಧಾರದ ಸಿಬ್ಬಂದಿಗಳು ದಿನದ 24 ಗಂಟೆ ಕೆಲಸ ನಿರ್ವಹಿಸುತ್ತಾರೆ ಇವರಿಗೆ ಸಕಾಲದಲ್ಲಿ ಸಂಬಳ ನೀಡಬೇಕು. ಅರಣ್ಯ ಇಲಾಖೆಯ ಗುತ್ತಿಗೆ ಆಧಾರದ ಸಿಬ್ಬಂದಿಗಳಿಗೆ ಸೇವಾ ಭದ್ರತೆ ಇಲ್ಲ. ಇವರನ್ನು ಖಾಯಂ ಮಾಡಿ ಸೇವಾ ಭದ್ರತೆ ನೀಡಬೇಕು ಎಂದು ಅರಣ್ಯ ಸಚಿವರಲ್ಲಿ ಮನವಿ ಮಾಡಿದರು.

ವೇದಿಕೆಯಲ್ಲಿ ಮಾವುತರಿಗೆ ಗಣ್ಯರಿಂದ ಸನ್ಮಾನ ಮಾಡಿಸಿ ಕಳುಹಿಸಿ ಕೊಡಲಾಯಿತು

ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಮಹಾ ಪೌರರಾದ ಶಿವ ಕುಮಾರ್, ವಿಧಾನ ಪರಿಷತ್ ಸದಸ್ಯರಾದ ಸಿ ಎನ್ ಮಂಜೇಗೌಡ, ಜಿಲ್ಲಾಧಿಕಾರಿಗಳಾದ ಡಾ. ಕೆ ವಿ ರಾಜೇಂದ್ರ, ಮೈಸೂರು ನಗರ ಪೊಲೀಸ್ ಆಯುಕ್ತರಾದ ರಮೇಶ್ ಬಿ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾ, ಡಿ ಸಿ ಫ್ ಸೌರಭ್ ಕುಮಾರ್ ಸೇರಿದಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಆನೆಗಳ ಪರಿಚಯ

– ಅಭಿಮನ್ಯು:
ವಯಸ್ಸು : ೪೪ ವರ್ಷ
ಎತ್ತರ : ೨.೬೬ ಮೀಟರ್
ಕಾಡಾನೆಯನ್ನು ಹಿಡಿದು ಪಳಗಿಸುವ ಹಾಗೂ ಚಿಕಿತ್ಸೆ ನೀಡುವ ಕಾರ್ಯದಲ್ಲಿ ನೈಪುಣ್ಯತೆ ಪಡೆದಿರುವ ಅಭಿಮನ್ಯು ಎಂತಹ ಬಲಿಷ್ಠ ಆನೆಯನ್ನು ಕೂಡ ಎದುರಿಸಿ ಹಿಡಿತದಲ್ಲಿಡುವ ಸಾಮರ್ಥ್ಯ ಹೊಂದಿದೆ. ಕೂಂಬಿಂಗ್ ಕಾರ್ಯದಲ್ಲಿ ನಿಪುಣ.

– ಮಹೇಂದ್ರ
ವಯಸ್ಸು: ೪೦ ವರ್ಷ
ಅಂದಾಜು ತೂಕ‌ : ೩೧೫೦ ಕೆಜಿ
ಎತ್ತರ : ೨.೭೪ ಮೀಟರ್
ಉದ್ದ : ೩.೨೫ ಮೀಟರ್
ಈ ಆನೆಯು ಕಳೆದ ಐದು ವರ್ಷಗಳ ಹಿಂದೆ ರಾಮನಗರ ಸಮೀಪದ ಅರಣ್ಯದಲ್ಲಿ ಸೆರೆಹಿಡಿದು ಪಳಗಿಸಿದ್ದ ಆನೆಯಾಗಿದ್ದು, ಎರಡನೇ ಬಾರಿಗೆ ದಸರಾ ಮಹೋತ್ಸವದಲ್ಲಿ ಭಾಗವಹಿಸುತ್ತಿದೆ.

– ಗೋಪಿ
ವಯಸ್ಸು: ೪೧ ವರ್ಷ
ಎತ್ತರ : ೨.೯ ಮೀಟರ್
ಉದ್ದ : ೩.೪೧ ಮೀಟರ್
ತೂಕ‌ : ೩೭೧೯ ಕೆಜಿ
ಈ ಆನೆಯನ್ನು ‌೧೯೯೩ರಲ್ಲಿ ಸಾಲೆಕೊಪ್ಪ‌ ಅರಣ್ಯದಲ್ಲಿ ಸೆರೆಹಿಡಿದು ಪಳಗಿಸಲಾಗಿದೆ. ಕಳೆದ ಎಂಟು ವರ್ಷಗಳಿಂದ ದಸರಾ ಮಹೋತ್ಸವದಲ್ಲಿ ಭಾಗವಹಿಸುತ್ತಿದೆ. ೨೦೧೫ರಿಂದ ಅರಮನೆ ಪೂಜ ವಿಧಾನಗಳಲ್ಲಿ ಭಾಗವಹಿಸುತ್ತಿದೆ.

– ಧನಂಜಯ
ವಯಸ್ಸು : ೪೪
ಎತ್ತರ: ೨.೯೨ ಮೀಟರ್
ಉದ್ದ: ೩.೯೪ ಮೀಟರ್
ತೂಕ : ೪೦೫೦ ಕೆಜಿ
ಈ ಆನೆಯನ್ನು 2013ರಲ್ಲಿ ಹಾಸನ ಜಿಲ್ಲಾ ವ್ಯಾಪ್ತಿಯಲ್ಲಿ ಸೆರೆಹಿಡಿಯಲಾಗಿದ್ದು‌ ಕಳೆದ‌ ಎರಡು ವರ್ಷಗಳಿಂದ ದಸರಾ ಮಹೋತ್ಸವದಲ್ಲಿ ಭಾಗವಹಿಸುತ್ತಿದೆ.

– ವಿಜಯ
ವಯಸ್ಸು: 64 ವರ್ಷ
ತೂಕ‌ : ೩೨೫೦
ಎತ್ತರ : ೨.೨೯ ಮೀಟರ್
ಉದ್ದ : ೩ ಮೀಟರ್
ಈ ಆನೆಯು ಬಹಳ ಸಾಧು ಸ್ವಭಾವಾದಗಿದ್ದು, 1965ರಲ್ಲಿ‌ ದುಬಾರೆ ಅರಣ್ಯ ಪ್ರದೇಶದಲ್ಲಿ ಸೆರೆ ಹಿಡಿಯಲಾಗಿತ್ತು. ಕಳೆದ 14 ವರ್ಷಗಳಿಂದ ದಸರಾ ಮಹೋತ್ಸವದಲ್ಲಿ ಕುಮ್ಕಿ ಆನೆಯಾಗಿ ಭಾಗವಹಿಸುತ್ತಿದೆ.

– ವರಲಕ್ಷ್ಮಿ
ವಯಸ್ಸು : ೨೨ ವರ್ಷ
ತೂಕ‌ : ೨೫೪೦ ಕೆಜಿ
ಎತ್ತರ : ೨.೯೨ ಮೀಟರ್
ಉದ್ದ : ೨.೦೫ ಮೀಟರ್
ಈ ಆನೆಯು ಕಳೆದ ಮೂರು ವರ್ಷಗಳಿಂದ ದಸರಾ ಮಹೋತ್ಸವದಲ್ಲಿ ಕುಮ್ಕಿ ಆನೆಯಾಗಿ ಭಾಗವಹಿಸುತ್ತಿದೆ.

– ಭೀಮ
ವಯಸ್ಸು : ೨೩ ವರ್ಷ
ಎತ್ತರ : ೨.೮೭ ಮೀಟರ್
ಉದ್ದ : ೩.೦೬ ಮೀಟರ್
ತೂಕ: ೩೫೦೦ ಕೆಜಿ
ಈ ಆನೆ ೨೦೧೭ರಿಂದ ದಸರಾ ಮಹೋತ್ಸವದಲ್ಲಿ ಭಾಗವಹಿಸುತ್ತಿದೆ. ಅಂಬಾರಿ ಹೊರಲು ಸಮರ್ಥ ಎನಿಸಿಕೊಂಡಿದ್ದಾನೆ. ದಂತ ಹಾಗೂ ದೇಹ ರಚನೆ ಅತ್ಯದ್ಭುತವಾಗಿದ್ದು, ಸಮತಟ್ಟಾದ ಬೆನ್ನು ಹೊಂದಿರುವುದು ಅಂಬಾರಿ ಹೊರಲು ಸೂಕ್ತವಾಗಿದ್ದಾನೆ.

– ಅರ್ಜುನ:
ವಯಸ್ಸು : ೬೪ ವರ್ಷ
ಎತ್ತರ : ೨.೯೫ ಮೀಟರ್
ಉದ್ದ : ೩.೨೫ ಮೀಟರ್
ತೂಕ: ೬೦೪೦ ಕೆಜಿ
ಈ ಆನೆಯನ್ನು ೧೯೬೮ರಲ್ಲಿ ಕಾಕನಕೋಟೆ ಅರಣ್ಯ ಪ್ರದೇಶದಲ್ಲಿ ಸೆರೆ ಹಿಡಿಯಲಾಯಿತು. ದ್ರೋಣ ಆನೆಯ ಅಕಾಲಿಕ ಮರಣ ನಂತರ ಒಮ್ಮೆ ಚಿನ್ನದ ಅಂಬಾರಿ ಹೊತ್ತು ಯಶಸ್ವಿಯಾಗಿದ್ದ. ಮಾವುತನನ್ನೇ ಕೊಂದದ್ದರಿಂದ ದಸರಾ ಅಂಬಾರಿ ಹೊರುವ ಕೆಲಸದಿಂದ ದೂರ ಇಡಲಾಯಿತು.

ಕಂಜನ್ ಆನೆ
24 ವರ್ಷ ದುಬಾರೆ ಶಿಬಿರ
ಮೊದಲ ಬಾರಿಗೆ ದಸರಾ ಮಹೋತ್ಸವದಲ್ಲಿ ಭಾಗಿಯಾಗುತ್ತಿದೆ

Leave a Reply

Your email address will not be published. Required fields are marked *