ವೈಜಯಂತಿ ಚಿತ್ರಕಲಾ ಮಿಲನ ಚಿತ್ರ ಪ್ರದರ್ಶನ

ನಂದಿನಿ ಮೈಸೂರು

 

ಮೈಸೂರಿನ ವೈಜಯಂತಿ ಚಿತ್ರಕಲಾ ಮಹಾವಿದ್ಯಾಲಯದಲ್ಲಿ ಬಿವಿಎ ಪದವಿ ವಿದ್ಯಾರ್ಥಿಗಳಿಂದ ಆಯೋಜಿಸಿದ್ದ ‘ಮಿಲನ’ ಸಾಮೂಹಿಕ ಚಿತ್ರ ಪ್ರದರ್ಶನ ಯುವ ಕಲಾವಿದರ ಕಲಾಬಿರುಚಿ ಪರಿಚಯಿಸಿದರು.

ವಿದ್ಯಾಲಯದ ಆರ್ಟ್ ಗ್ಯಾಲರಿಯಲ್ಲಿ ಆಯೋಜಿಸಿದ್ದ ಚಿತ್ರ ಕಲಾ ಪ್ರದರ್ಶನವನ್ನು ಚಿತ್ರಕಲಾ ನಿರ್ದೇಶಕ ಮಹೇಶ್ ಸಾತನೂರು ಉದ್ಘಾಟಿಸಿ ಪ್ರಥಮ ವರ್ಷದ ಚಿತ್ರಕಲಾ ವಿದ್ಯಾರ್ಥಿಗಳಿಗೆ ಶುಭಕೋರಿದರು.
ಪ್ರಥಮ ವರ್ಷದ ಚಿತ್ರಕಲೆಯ ಕಲಿಕಾರ್ಥಿಗಳು ಬಿಡಿಸಿದ್ದು 30 ಕ್ಕೂ ಹೆಚ್ಚಿನ ವಿವಿಧ ಬಗೆಯ ಕಲಾ ಚಿತ್ರ ನೋಡುಗರ ಗಮನ ಸೆಳೆದವು.

ಕಾರ್ಯಕ್ರಮದಲ್ಲಿ ಚಿತ್ರಕಲಾ‌ ಕಲಿಕಾರ್ಥಿಗಳಾದ ರಾಜೇಶ್, ನಂದಿತಾ ಅವರಿಗೆ ಪ್ರಶಂಸನಾ ಪತ್ರ ನೀಡಲಾಯಿತು. ಕಾರ್ಯಕ್ರಮದಲ್ಲಿ ‘ಜನಮಿತ್ರ’ ಜಿಲ್ಲಾವರದಿಗಾರ ರವಿಚಂದ್ರ ಹಂಚ್ಯಾ ಅತಿಥಿಗಳಾಗಿದ್ದರು. ಕಾಲೇಜಿನ ಪ್ರಾಂಶುಪಾಲರಾದ ಎಸ್.ಪಿ.ವಿನೋದ್ ರಾಜ್, ಉಪನ್ಯಾಸಕ ಬಿ.ಕಿರಣ್ ಕುಮಾರ್ ಇನ್ನಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *