ಉಜ್ಜಯಿನಿಯ ಬಾಬಾ ಮಹಾಕಾಲ್ ಮಂದಿರಕ್ಕೆ ಭೇಟಿ ನೀಡಿ ಪ್ರಾರ್ಥಿಸಿದ ಗೃಹ ಸಚಿವ ಅಮಿತ್ ಶಾ

ಗೃಹ ಸಚಿವ ಶ್ರೀ ಅಮಿತ್ ಶಾ ಅವರು ಉಜ್ಜಯಿನಿಯ ಬಾಬಾ ಮಹಾಕಾಲ್ ಮಂದಿರಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.

ಮಧ್ಯಪ್ರದೇಶದಲ್ಲಿ ಮೂರು ದಿನಗಳ ತಂಗಿದ್ದ ಅಮಿತ್ ಶಾರವರು ಎಲ್ಲಾ 10 ವಿಭಾಗಗಳ ಸಭೆ ನಡೆಸಿ ಎಲ್ಲಾ ವಿಧಾನಸಭಾ ಸ್ಥಾನಗಳ ಕಾರ್ಯಕರ್ತರೊಂದಿಗೆ ಸಂವಾದ ನಡೆಸಿ ಗೆಲುವಿನ ಮಂತ್ರವನ್ನು ನೀಡಿದರು.

ಪಕ್ಷವನ್ನು ಗೆಲುವಿನತ್ತ ಕೊಂಡೊಯ್ಯುವ ಸಾಮರ್ಥ್ಯವನ್ನು ಹೊಂದಿರುವ ಹಿರಿಯ ಭಾರತೀಯ ಜನತಾ ಪಕ್ಷದ ನಾಯಕ ಮತ್ತು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರು ಅಕ್ಟೋಬರ್ 28 ರಿಂದ 30 ರವರೆಗೆ ಮಧ್ಯಪ್ರದೇಶದಲ್ಲಿ ಮೂರು ದಿನಗಳ ಪ್ರವಾಸದಲ್ಲಿದ್ದರು. ಈ ಸುಂಟರಗಾಳಿ ರೂಪದ ಪ್ರಯಾಣದಲ್ಲಿ ಅವರು ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರೊಂದಿಗೆ ಮ್ಯಾರಥಾನ್‌ನಂತೆ ಸಭೆಗಳನ್ನು ನಡೆಸಿದರು. ಅವರು 3 ದಿನಗಳಲ್ಲಿ ಮಧ್ಯಪ್ರದೇಶದ 10 ವಿಭಾಗಗಳಿಗೆ ಭೇಟಿ ನೀಡಿ ಎಲ್ಲಾ 230 ವಿಧಾನಸಭಾ ಕ್ಷೇತ್ರಗಳ ಕಾರ್ಯಕರ್ತರೊಂದಿಗೆ ಸಂವಾದ ನಡೆಸಿದರು.

ಭೇಟಿಯ ಮೊದಲ ದಿನ, ಶ್ರೀಯುತ ಶಾರವರು ಜಬಲ್‌ಪುರದಲ್ಲಿರುವ ಮಹಾರಾಜ ಶಂಕರ್ ಷಾ ಮತ್ತು ರಾಜಕುಮಾರ ರಘುನಾಥ್ ಷಾ ಅವರ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡುವ ಮೂಲಕ ಗೌರವ ಸಲ್ಲಿಸಿದರು. ಆ ನಂತರ ಅವರು ಛಿಂದ್ವಾರಾ ಜಿಲ್ಲೆಯ ಜುನ್ನಾರ್‌ದೇವ್ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದರು. ನಂತರ ಜಬಲ್‌ಪುರದಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ ಅವರು, ಭೋಪಾಲ್ ಮತ್ತು ನರ್ಮದಾಪುರಂ ಪ್ರದೇಶಗಳಲ್ಲಿ ಪಕ್ಷದ ಕಾರ್ಯಕರ್ತರೊಂದಿಗೆ ಸಭೆ ನಡೆಸಿದರು.

ಭೇಟಿಯ ಎರಡನೇ ದಿನದಂದು ಶಾ, ಭೋಪಾಲ್‌ನಲ್ಲಿರುವ ರಾಜಾ ಭೋಜನಿಗೆ ಗೌರವ ಸಲ್ಲಿಸಿದರು. ಇದಾದ ನಂತರ ಅವರು ಸಾಗರ್, ರೇವಾ ಮತ್ತು ಶಹದೋಲ್‌ನಲ್ಲಿ ಪಕ್ಷದ ಕಾರ್ಯಕರ್ತರೊಂದಿಗೆ ಸಭೆ ನಡೆಸಿದರು. ನಂತರ ಉಜ್ಜಯಿನಿಯ ಮಹಾಕಾಲನ ದೇವಸ್ಥಾನಕ್ಕೆ ಭೇಟಿ ನೀಡಿದರು.

ಯಾತ್ರೆಯ ಕೊನೆಯ ದಿನವಾದ ಅಕ್ಟೋಬರ್ 30 ರಂದು ಗ್ವಾಲಿಯರ್‌ನಲ್ಲಿ ಪಕ್ಷದ ಕಾರ್ಯಕರ್ತರನ್ನು ಭೇಟಿ ಮಾಡಿ ವಿಜಯದ ಮಂತ್ರ ನೀಡಿದರು.

ಛಿಂದ್ವಾರಾದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶಾ, ಕಾಂಗ್ರೆಸ್ ಪಕ್ಷವನ್ನು ಗುರಿಯಾಗಿಸಿಕೊಂಡು, “ಮಧ್ಯಪ್ರದೇಶದಲ್ಲಿ ಗಾಂಧಿ ಕುಟುಂಬ, ಕಮಲ್ ನಾಥ್ ಕುಟುಂಬ ಮತ್ತು ದಿಗ್ವಿಜಯ್ ಕುಟುಂಬ ಪ್ರಾಬಲ್ಯ ಹೊಂದಿವೆ – ಈ ಮೂರು ಕುಟುಂಬಗಳು ಕಾಂಗ್ರೆಸ್ ಪಕ್ಷವನ್ನು ನಡೆಸುತ್ತಿವೆ, ಅದಕ್ಕಾಗಿಯೇ ಎಲ್ಲವೂ ಹಾಳಾಗಿದೆ. ಗಾಂಧಿ ಕುಟುಂಬ ಆದೇಶ ನೀಡುತ್ತದೆ, ಕಮಲ್ ನಾಥ್ ಸೂಚನೆಗಳನ್ನು ನೀಡುತ್ತಾರೆ, ಆದರೆ ತಪ್ಪು ಮಾಡಿದಾಗ ಅವರೆಲ್ಲರೂ ದಿಗ್ವಿಜಯ್ ಅವರನ್ನು ದೂಷಿಸುತ್ತಾರೆ.

ವಂಶಾಡಳಿತವನ್ನು ಹೇರುವ ಪಕ್ಷ ದೇಶಕ್ಕೆ ಎಂದಿಗೂ ಒಳಿತನ್ನು ಮಾಡಲಾರದು ಎಂದ ಶಾ, ಈ ಹಿಂದೆ ದಿಗ್ವಿಜಯ್ ಸಿಂಗ್ ಸರ್ಕಾರ ಮಾತ್ರ ಲೂಟಿ ಮಾಡುತ್ತಿತ್ತು, ಆದರೆ ಕಮಲ್ ನಾಥ್ ಸರ್ಕಾರದಲ್ಲಿ, ಕಮಲನಾಥ್ ಮತ್ತು ದಿಗ್ವಿಜಯ್ ಸಿಂಗ್ ಇಬ್ಬರೂ ಸೇರಿ ಲೂಟಿ ಮಾಡಿ ಸಾಕಷ್ಟು ಭ್ರಷ್ಟಾಚಾರ ಮಾಡಿದ್ದಾರೆ. ಭಾರತೀಯ ಜನತಾ ಪಕ್ಷ ಅಭಿವೃದ್ಧಿವಂಚಿತ ಮಧ್ಯಪ್ರದೇಶ ರಾಜ್ಯವನ್ನು ಅಭಿವೃದ್ಧಿ ಹೊಂದಿದ ರಾಜ್ಯವನ್ನಾಗಿ ಮಾಡುವ ಕಾರ್ಯವನ್ನು ಸರ್ಕಾರ ಮಾಡಿದೆ.

ಮುಂದುವರೆಸುತ್ತಾ ಶಾ, “ಮೋದಿಯವರು ಪ್ರಪಂಚದಾದ್ಯಂತ ಭಾರತದ ಧ್ವಜವನ್ನು ಹಾರಿಸುತ್ತಿದ್ದಾರೆ, ಆದರೆ ಕಾಂಗ್ರೆಸ್ಸಿಗೆ ಏನೂ ಕಾಣುತ್ತಿಲ್ಲ.” ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, “ಭಾರತದಲ್ಲಿ ಬೇರುಗಳನ್ನು ಹೊಂದಿದವರಿಗೆ ಮಾತ್ರ ದೇಶದ ಅಭಿವೃದ್ಧಿಯನ್ನು ಅರ್ಥಮಾಡಿಕೊಳ್ಳಲು ಸಾಧ್ಯ” ಎಂದು ಹೇಳಿದರು.

ಕಾಂಗ್ರೆಸ್ ನಾಯಕ ಕಮಲ್ ನಾಥ್‌ರವರನ್ನು ತರಾಟೆಗೆ ತೆಗೆದುಕೊಂಡ ಅಮಿತ್ ಶಾ, ‘ಮೋಸರ್ ಬೇರ್ ಹಗರಣ ₹ 350 ಕೋಟಿ, ಆಗಸ್ಟಾ ವೆಸ್ಟ್‌ಲ್ಯಾಂಡ್ ಹಗರಣ ₹ 2400 ಕೋಟಿ, ₹ 600 ಕೋಟಿ – ಐಪಿಸಿಒ ರಸಗೊಬ್ಬರ ಹಗರಣ, ₹ 25,000 ಕೋಟಿ – ರೈತರ ಸಾಲ ಮನ್ನಾ ಹಗರಣ, ₹ 1178 ಕೋಟಿ – ಗೋಧಿ ಬೋನಸ್ ಹಗರಣ, ಈ ಎಲ್ಲಾ ಹಗರಣಗಳು ಕಮಲ್ ನಾಥ್‌ಗೆ ಸಂಬಂಧಿಸಿವೆ, ಈಗ ಅವರು ಮತ್ತೆ ಮುಖ್ಯಮಂತ್ರಿಯಾಗಲು ಬಯಸಿದ್ದಾರೆ.

ಮೋದಿ ಸರಕಾರದಲ್ಲಿ ಬುಡಕಟ್ಟು ಜನಾಂಗದವರ ಸಮಾಜ ಕಲ್ಯಾಣಕ್ಕೆ ಕಾಂಗ್ರೆಸ್ ನೀಡಿದ್ದ ₹29,000 ಕೋಟಿ ಮೊತ್ತವನ್ನು ₹1 ಲಕ್ಷದ 38 ಸಾವಿರ ಕೋಟಿಗೆ ಹೆಚ್ಚಿಸಲಾಗಿದೆ. ಮಧ್ಯಪ್ರದೇಶಕ್ಕೆ ಅಭಿವೃದ್ಧಿ ಅನುದಾನಗಳ ಅಡಿಯಲ್ಲಿ ಅಂದಾಜು ₹ 7.5 ಲಕ್ಷ ಕೋಟಿ ಮತ್ತು ₹ 12 ಲಕ್ಷ ಕೋಟಿ ಮೌಲ್ಯದ ವಿವಿಧ ಯೋಜನೆಗಳನ್ನು ನೀಡಲಾಗಿದೆ.

ಈ ಹಿಂದೆ ಆದಿವಾಸಿಗಳ ಕಲ್ಯಾಣಕ್ಕಾಗಿ ನೀರು, ಅರಣ್ಯ ಮತ್ತು ಭೂಮಿಯ ಬಗ್ಗೆ ಮಾತನಾಡಲಾಗುತ್ತಿತ್ತು, ಆದರೆ ಮೋದಿ ಸರ್ಕಾರದಲ್ಲಿ ಇದರೊಂದಿಗೆ ಅವರ ಭದ್ರತೆ, ಅವರ ಗೌರವ ಮತ್ತು ಎಲ್ಲರನ್ನೂ ಒಳಗೊಂಡ ಅಭಿವೃದ್ಧಿ ನಡೆಯುತ್ತಿದೆ.

ಉಜ್ಜಯಿನಿಯಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅಮಿತ್ ಶಾ, ರಾಮ ಮಂದಿರ ನಿರ್ಮಾಣ ವಿಷಯದ ಬಗ್ಗೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು ಮತ್ತು ದೇಶಕ್ಕೆ ಸ್ವಾತಂತ್ರ್ಯ ಬಂದಾಗಿನಿಂದಲೂ ಕಾಂಗ್ರೆಸ್ ಪಕ್ಷವು ರಾಮಮಂದಿರದ ವಿಷಯವನ್ನು ಹಳಿತಪ್ಪಿಸುತ್ತಿತ್ತು, ದಾರಿ ತಪ್ಪಿಸುತ್ತಿತ್ತು ಮತ್ತು ಸ್ಥಗಿತಗೊಳಿಸುತ್ತಿತ್ತು, ಆದರೆ 2019 ರಲ್ಲಿ ಸಾರ್ವತ್ರಿಕ ಚುನಾವಣೆಯಲ್ಲಿ ಮಧ್ಯಪ್ರದೇಶದ ಜನರು ಅನೇಕ ಸ್ಥಾನಗಳನ್ನು ಭಾಜಪಕ್ಕೆ ನೀಡುವ ಮೂಲಕ ಮೋದಿಯವರನ್ನು ಎರಡನೇ ಬಾರಿಗೆ ಪ್ರಧಾನಿ ಮಾಡಿದರು.

2014 ರಿಂದ 2019 ರವರೆಗೆ ಪಕ್ಷದ ಅಧ್ಯಕ್ಷರಾಗಿದ್ದ ರಾಹುಲ್ ಗಾಂಧಿ ಅವರು ಪ್ರತಿ ಚುನಾವಣೆಯಲ್ಲಿ ಬಿಜೆಪಿಯವರು ಮಂದಿರ ಕಟ್ಟುತ್ತೇವೆ ಎಂದು ಹೇಳುತ್ತಿದ್ದಾರೆ, ಆದರೆ ದಿನಾಂಕ ಹೇಳುತ್ತಿಲ್ಲ ಎನ್ನುತ್ತಿದ್ದರು, ಆದರೆ ಈಗ ರಾಹುಲ್ ಗಾಂಧಿ ಅವರು ದಿನಾಂಕವನ್ನು ತಿಳಿದುಕೊಳ್ಳಬೇಕು ಎಂದು ಅಮಿತ್ ಶಾ ಹೇಳಿದರು. ಪ್ರಧಾನಿ ನರೇಂದ್ರ ಮೋದಿಯವರು 22 ಜನವರಿ 2024 ರಂದು ಮಹಾಮಸ್ತಕಾಭಿಷೇಕಕ್ಕೆ ಹೋಗಲಿದ್ದಾರೆ ಮತ್ತು ಅದೇ ದಿನಾಂಕದಂದು, ಅಯೋಧ್ಯೆಯ ಅದೇ ಸ್ಥಳದಲ್ಲಿ, ದೊಡ್ಡ ದೇವಾಲಯದೊಳಗೆ ಭಗವಾನ್ ರಾಮನ ವಿಗ್ರಹವನ್ನು ಸ್ಥಾಪಿಸಲಾಗುವುದು ಎಂದು ಘೋಷಿಸಿದರು.

“ನಿಮ್ಮ ಮುಂದೆ ಕೇವಲ ಎರಡು ಆಯ್ಕೆಗಳಿವೆ, ಒಂದು ಈ ರಾಜ್ಯವನ್ನು ವಿಭಜಿಸಿ ಅನಾರೋಗ್ಯದ ರಾಜ್ಯವಾಗಿಸಿದ ಕಾಂಗ್ರೆಸ್ ಮತ್ತು ಇನ್ನೊಂದು ಬದಿಯಲ್ಲಿ 18 ವರ್ಷಗಳ ಆಡಳಿತದಲ್ಲಿ ಮಧ್ಯಪ್ರದೇಶವನ್ನು ಪರಿವರ್ತಿಸಿದ ಮೋದಿ ನಾಯಕತ್ವದ ಬಿಜೆಪಿ ಇದೆ” ಎಂದು ನೆರೆದಿದ್ದ ಜನಸ್ತೋಮದ ಮುಂದೆ ಶ್ರೀಯುತ ಶಾ ಹೇಳಿದರು,

ಬಿಜೆಪಿ ಆಡಳಿತದಲ್ಲಿ ಮಹಾಕಾಲ್ ಲೋಕವನ್ನು ರಚಿಸಲಾಗಿದೆ ಎಂದ ಶಾ, ಪ್ರಪಂಚದಾದ್ಯಂತದ ಜನರು ಮಹಾಕಾಲ್ ಲೋಕಕ್ಕೆ ಭೇಟಿ ನೀಡುತ್ತಿದ್ದಾರೆ ಮತ್ತು ಕಮಲ್ ನಾಥ್ ಹೊರತುಪಡಿಸಿ ಎಲ್ಲರೂ ಅದನ್ನು ಹೊಗಳಿದ್ದಾರೆ ಎಂದರು.

ಕಾಂಗ್ರೆಸ್ ಪಕ್ಷವನ್ನು ಗುರಿಯಾಗಿಟ್ಟುಕೊಂಡು, ಬಿಜೆಪಿ ಸರ್ಕಾರಗಳು ಎಷ್ಟೇ ಅಭಿವೃದ್ಧಿ ಮಾಡಿದರೂ ಅದನ್ನು ವಿರೋಧಿಸುವ ಅಭ್ಯಾಸವನ್ನು ಕಾಂಗ್ರೆಸ್ ಹೊಂದಿದೆ, ತ್ರಿವಳಿ ತಲಾಖ್ ಅನ್ನು ತೆಗೆದುಹಾಕುವಾಗಲೂ ಅದನ್ನು ತೆಗೆದುಹಾಕಬೇಡಿ, ನಾವು ತೆಗೆದುಹಾಕುತ್ತೇವೆ ಎಂದು ಕಾಂಗ್ರೆಸ್ ಹೇಳಿತ್ತು. ಆರ್ಟಿಕಲ್ 370, ಅವುಗಳನ್ನು ತೆಗೆದುಹಾಕಬೇಡಿ ಎಂದು ಅವರು ಹೇಳುತ್ತಿದ್ದರು, ನಾವು ಸರ್ಜಿಕಲ್ ಸ್ಟ್ರೈಕ್ ಮತ್ತು ವೈಮಾನಿಕ ದಾಳಿಯ ಮೂಲಕ ಪಾಕಿಸ್ತಾನಕ್ಕೆ ಬುದ್ಧಿ ಕಲಿಸಿದಾಗ, ಅದಕ್ಕೂ ಅವರು ಆಕ್ಷೇಪ ವ್ಯಕ್ತಪಡಿಸಿದ್ದರು.

ಪ್ರತಿ ವರ್ಷ ಒಂದು ದೀಪಾವಳಿ ಇದ್ದರೂ, ಈ ಬಾರಿ ಮಧ್ಯಪ್ರದೇಶದ ಜನರು ಮೂರು ದೀಪಾವಳಿಗಳನ್ನು ಆಚರಿಸಬೇಕು ಎಂದು ಶಾ ಹೇಳಿದರು, ಒಂದು ದೀಪಾವಳಿಯ ದಿನದಂದು, ಎರಡನೆಯದು ಮಧ್ಯಪ್ರದೇಶದಲ್ಲಿ ಬಿಜೆಪಿ ಸರ್ಕಾರ ರಚಿಸುವ ದಿನ, ಮತ್ತು ಮೂರನೆಯದಾಗಿ, ಗೌರವಾನ್ವಿತ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಅಯೋಧ್ಯೆಯ ಭವ್ಯವಾದ ಶ್ರೀರಾಮ ಮಂದಿರದಲ್ಲಿ ರಾಮಲಲ್ಲಾನನ್ನು ಸ್ಥಾಪಿಸುವಾಗ ಎಂದರು.

ಬಿಜೆಪಿಗೆ ಮತ ನೀಡುವಂತೆ ಮನವಿ ಮಾಡಿದ ಶಾ, ಯಾರೋ ಒಬ್ಬರು ಶಾಸಕ, ಮಂತ್ರಿ ಮತ್ತು ಮುಖ್ಯಮಂತ್ರಿಯಾಗಲು ಮತ ಹಾಕಬೇಡಿ, ನಿಮ್ಮ ಮತ ಮಧ್ಯಪ್ರದೇಶ ಮತ್ತು ಭಾರತದ ಭವಿಷ್ಯವನ್ನು ನಿರ್ಧರಿಸಲಿದೆ ಎಂದರು.

ದೇಶವನ್ನು ಸುರಕ್ಷಿತ, ಸಮೃದ್ಧ ಮತ್ತು ವಿಶ್ವದಲ್ಲೇ ನಂಬರ್ ಒನ್ ಮಾಡುವ ಮೋದಿಯವರನ್ನು ಬೆಂಬಲಿಸುವ ಸರ್ಕಾರವನ್ನು ರಚಿಸಬೇಕು ಎಂದು ಮನವಿ ಮಾಡಿದರು.

Leave a Reply

Your email address will not be published. Required fields are marked *