ಸಿಗ್ಮಾ ಆಸ್ಪತ್ರೆಯಲ್ಲಿ ಎಂಡೋಸ್ಕೋಪಿ ಶಿಬಿರ,ಭಾರತ ದೇಶದ 16 ನುರಿತ ವೈದ್ಯರು ಶಿಬಿರದಲ್ಲಿ ಭಾಗಿ

ನಂದಿನಿ ಮೈಸೂರು

ಭಾರತೀಯ ಶಸ್ತ್ರಚಿಕಿತ್ಸಕರ ಸಂಘ ಮೈಸೂರು ಹಾಗೂ
ಮೈಸೂರಿನ ಸಿಗ್ಮಾ ಆಸ್ಪತ್ರೆಯ ಲ್ಯಾಪ್ರೋಸ್ಕೋಪಿಕ್ ಮತ್ತು ಎಂಡೋಸ್ಕೋಪಿ ತಜ್ಞರಾದ ಡಾ ಜಿ ಸಿದ್ದೇಶ್ ರವರ ನೇತೃತ್ವದಲ್ಲಿ ಎಂಡೋಸ್ಕೋಪಿ ಶಿಬಿರ ಏರ್ಪಡಿಸಲಾಯಿತು.

ಮೈಸೂರಿನ ಸಿಗ್ಮಾ ಆಸ್ಪತ್ರೆಯಲ್ಲಿ ಇಂದು ಮತ್ತು ನಾಳೆ ಆಯೋಜನೆಗೊಂಡಿರುವ
ಎಂಡೋಸ್ಕೋಪಿ ಶಿಬಿರವನ್ನು ಹಾಲಿ ಅಧ್ಯಕ್ಷರಾದ
ಡಾ.ಪ್ರಭೋನ್ ಯೋಗಿರವರು
ವರ್ಚುವಲ್ ಮೂಲಕ ಉದ್ಘಾಟಿಸಲಾಯಿತು.

ಭಾರತ ದೇಶದ ವಿವಿಧ ಭಾಗದಿಂದ 16 ನುರಿತ ವೈದ್ಯರು ಆಗಮಿಸಿದ್ದಾರೆ.ಇಂದು ಮತ್ತು ನಾಳೆ ಎಂಡೋಸ್ಕೋಪಿ
ಉಚಿತ ಸಮಾಲೋಚನೆ ಪಡೆಯಲಿದ್ದಾರೆ.ಶಿಬಿರದಲ್ಲಿ ಪ್ರಾಕ್ಟಿಕಲ್ ಆಗಿ ಕಲಿಯಲಿದ್ದಾರೆ‌.ನಂತರ ರೋಗಿಗಳಿಗೆ ತಿಳಿಸಲಿದ್ದಾರೆ‌.

ಭಾರತೀಯ ಶಸ್ತ್ರಚಿಕಿತ್ಸಕರ ಸಂಘದಲ್ಲಿ
38 ಸಾವಿರ ವೈದರು ಇದ್ದಾರೆ.2022 ರಲ್ಲಿ ಈ ಶಿಬಿರವನ್ನು ಆರಂಭಿಸಿದ್ದೇ.ಭಾರತ ದೇಶದಲ್ಲಿ 15 ಸೆಂಟರ್ ಗಳಲ್ಲಿ ಶಿಬಿರ ನಡೆಯುತ್ತಿದೆ.ಈ ವರ್ಷ 20 ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ.
ಎಂಡೋಸ್ಕೋಪಿ ಯಲ್ಲಿ 25% ಮತ್ತು ರಕ್ತ ಪರೀಕ್ಷೆಗಳಲ್ಲಿ 15℅ ರಿಯಾಯಿತಿ ನೀಡಲಾಗುವುದು. ಸಾರ್ವಜನಿಕರು ಈ ಶಿಬಿರದ ಸದುಪಯೋಗಪಡಿಸಿಕೊಳ್ಳಿ ಎಂದು ಡಾ ಜಿ ಸಿದ್ದೇಶ್ ತಿಳಿಸಿದರು.

ಸಿಗ್ಮಾ ಆಸ್ಪತ್ರೆಯ ನುರಿತ ವೈದ್ಯರಾದ
ಡಾ.ಅಂಜಲಿ ಸಿದ್ದೇಶ್,
,ನರ್ಸಿಂಗ್ ಕಾಲೇಜ್ ಪ್ರೀಸ್ಸಿಪಾಲ್ ಮಂಜುನಾಥ್,
ದಿನೇಶ್ ಸೇರಿದಂತೆ
ಆಡಳಿತ ಮಂಡಳಿ ಸಿಬ್ಬಂದಿಗಳು ಭಾಗಿಯಾಗಿದ್ದರು.

Leave a Reply

Your email address will not be published. Required fields are marked *