ಹಿಂದೂ ಮುಸ್ಲಿಂ ಕ್ರೈಸ್ತರಿಗೆ ಬಾಗೀನ ನೀಡಿ ಭಾವೈಕ್ಯತೆ ಸಾರಿದ ರಾಜಾರಾಂ

ನಂದಿನಿ ಮೈಸೂರು

ಮೈಸೂರಿನ ಸುಜೀವ್ ಫೌಂಡೇಶನ್ ಒಂದು ದಿನದ ಮುಂಚಿತವಾಗಿ ವಿನೂತನವಾಗಿ ಗೌರಿ ಗಣೇಶ ಹಬ್ಬವನ್ನು ಆಚರಿಸಿ ಹಿಂದೂ ಮುಸ್ಲಿಂ ಕ್ರೈಸ್ತರು ನಾವೆಲ್ಲ ಒಂದೇ ಎಂಬ ಭಾವೈಕ್ಯತೆ ಸಂದೇಶ ಸಾರಿದ್ದಾರೆ.

ವಿಜಯನಗರದ ಎರಡನೇ ಹಂತದ ಸುಜೀವ್ ಫೌಂಡೇಶನ್ ಕಚೇರಿಯಲ್ಲಿ ದಿವಂಗತ ಡಾ.ಪುನೀತ್ ರಾಜ್ ಕುಮಾರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ನಂತರ ಪೌರಕಾರ್ಮಿಕರಿಗೆ ಬಿದುರಿನ ಬಾಗೀನ ಹಾಗೂ ಮುಸ್ಮಿಂ ಸಮುದಾಯದವರಿಗೆ ಸೀರೆ ಕೊಟ್ಟು  ಹಬ್ಬವನ್ನು ಒಟ್ಟಿಗೆ ಆಚರಿಸುವ ಮೂಲಕ ನಾವೆಲ್ಲಾ ಒಂದೇ ಎಂದು ನಿರೂಪಿಸಿದ್ದಾರೆ.


ಸುಜೀವ್ ಫೌಂಡೇಶನ್ ಅಧ್ಯಕ್ಷರಾದ ರಾಜರಾಂ ಮಾತನಾಡಿ
ಮಾತನಾಡಿ ಭಾರತ ದೇಶದಲ್ಲಿ ವರ್ಷದಲ್ಲಿ ಹಲವಾರು ಹಬ್ಬಗಳನ್ನು ಆಚರಣೆ ಮಾಡುವುದು ಹಿಂದೂ ಮತ್ತು ಮುಸಲ್ಮಾನ್ ಧರ್ಮ ಸಂಪ್ರದಾಯವಾಗಿದೆ .ಮೇಲಾಗಿ ಈ ಬಾರಿ ಗೌರಿ ಗಣೇಶ ಹಬ್ಬವನ್ನು ಉಭಯ ಸಮಾಜದ ಬಾಂಧವರು ಈ ಹಬ್ಬಗಳನ್ನು ಬಹಳ ಶಾಂತಿಯುತವಾಗಿ ಆಚರಣೆ ಮಾಡಿ ಸೌಹಾರ್ದತೆ ಯಿಂದ ಬಾಳ ಬೇಕಾಗಿದೆ .ಈ ನಾಡಿನಲ್ಲಿ ಇತಿಹಾಸದಲ್ಲಿ ಎರಡು ಸಮುದಾಯಗಳ ಹಬ್ಬಗಳು ಬಂದರೆ ಸೌಹಾರ್ದವಾಗಿ ಆಚರಣೆ ಮಾಡುವ ಪದ್ಧತಿ ನಮ್ಮ ನಾಡಿನಲ್ಲಿದೆ .ಆದರೆ ಕೆಲವು ಕಿಡಿಗೇಡಿಗಳಿಂದ ಸಮಾಜದಲ್ಲಿ ಎರಡು ಸಮಾಜದಲ್ಲಿ ಶಾಂತಿಯನ್ನು ಕದಡವು ಉದ್ದೇಶದಿಂದ ಎರಡೂ ಸಮುದಾಯಗಳಲ್ಲಿ ಏನಾದರೂ ಸುಳ್ಳು ಸುದ್ದಿ ಹರಡಿಸಿ ಅಹಿತರ ಘಟನೆಗಳ ನಡೆಯುವ ಹಾಗೆ ಮಾಡುತ್ತಾರೆ .ಅದರಿಂದ ಎರಡು ಸಮುದಾಯದ ಮುಖಂಡರು ಈ ಬಗ್ಗೆ ಲಕ್ಷ್ಯ ವಹಿಸಿ ಹಬ್ಬಗಳನ್ನು ಆಚರಣೆ ಮಾಡಲು ಮುಂದಾಗಬೇಕು .ಈ ದಿನ ಈ ಯುವಕರು ಒಟ್ಟಾಗಿ ಸೌಹಾರ್ದತೆಯಿಂದ ಹಬ್ಬವನ್ನು ಆಚರಿಸುತ್ತಾ ಬಂದಿರುವುದು ಬಹಳ ಸಂತಸದ ವಿಚಾರ .ಇದೇ ಥರ ಸೌಹಾರ್ದತೆ ಆಚರಣೆ ಪ್ರತಿ ಜಿಲ್ಲೆಯಲ್ಲಿ ಆದರೆ ಬಹಳ ಉತ್ತಮ ಬೆಳವಣಿಗೆ ರಾಜ್ಯದಲ್ಲಿ ಕಾಣುತ್ತದೆ ಎಂದು ಹೇಳಿದರು.

ನಂತರ ಮಾತನಾಡಿದ Miss india World 2009ರ ಬಾಲಿವುಡ್ ನಟಿ ಪೂಜಾ ಚೋಪ್ರಾ ಮಾತನಾಡಿ
ಇತ್ತೀಚೆಗೆ ನಮ್ಮನ್ನು ಅಗಲಿದ ಮೇರು ನಟ ಪುನೀತ್ ರಾಜ್ ಕುಮಾರ್ ನೆನೆದು ಭಾವುಕರಾಗಿದರು
ಆ ನಂತರ ಪುನೀತ್ ರಾಜ್ ಕುಮಾರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು
ಸಮಸ್ತ ನಾಡಿನ ಜನತೆಗೆ ಗೌರಿ ಗಣೇಶ ಹಬ್ಬದ ಶುಭಾಶಯಗಳು ತಿಳಿಸಿದರು ಆನಂತರ ಮುಂದಿನ ದಿನಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ನಟಿಸುವ ಆಸೆ ಇದೆ ಎಂದು ತಿಳಿಸಿದರು ಕನ್ನಡ ಅಂದರೆ ನನಗೆ ಅಚ್ಚುಮೆಚ್ಚು ಅದರಲ್ಲೂ ಮೈಸೂರು ಎಂದರೆ ತುಂಬಾನೇ ಇಷ್ಟ ಮೈಸೂರು ಅರಮನೆ ಸೇರಿದಂತೆ ಇನ್ನಿತರ ಸ್ಥಳಗಳ ಮೈಸೂರಿನಲ್ಲಿ ಬಹಳ ಜನಪ್ರಿಯವಾಗಿರುವುದು ಮುಂದಿನ ದಿನಗಳಲ್ಲಿ ಅವಕಾಶ ಸಿಕ್ಕರೆ ಕರ್ನಾಟಕದಲ್ಲಿ ಅದು ಮೈಸೂರಿನಲ್ಲೇ ಇರಲು ಆಸೆ ಪಡುತ್ತೇನೆ ಎಂದು ಹೇಳಿದರು ರಾಜ್ಯಾದ್ಯಂತ ನನ್ನ ಚಿತ್ರ ಜಾನ್ ಚಾರ್ ಯಾರ್ ಎಂಬ ಹಿಂದಿ ಚಿತ್ರ ಬಿಡುಗಡೆಯಾಗಲಿದೆ ಮಹಿಳೆಯರು ಧೈರ್ಯವಾಗಿ ಜೀವನ ನಡೆಸುವುದು ಮತ್ತು ಸಬಲೀಕರಣ ಬಗ್ಗೆ ಮಾಹಿತಿಯುಳ್ಳ ಚಿತ್ರವಾಗಿದ್ದು ದಯಮಾಡಿ ಪ್ರತಿಯೊಬ್ಬರು ವೀಕ್ಷಿಸಬೇಕೆಂದು ಮನವಿ ಮಾಡಿದರು.

ತದನಂತರ ಕಾಂಗ್ರೆಸ್ ಮುಖಂಡ ಎನ್ ಎಂ ನವೀನ್ ಕುಮಾರ್ ಮಾತನಾಡಿ ಸುಜೀವ್ ಫೌಂಡೇಶನ್ ಕಳೆದ ಎರಡು ವರ್ಷಗಳಿಂದ ವಿಭಿನ್ನ ವಿನೂತನ ಕಾರ್ಯಕ್ರಮ ಮಾಡುತ್ತಾ ಬಂದಿದ್ದಾರೆ.ಇಂದು ಗೌರಿ ಗಣೇಶ ಹಬ್ಬದ ಪ್ರಯುಕ್ತ ಪೌರ ಕಾರ್ಮಿಕರಿಗೆ ಬಾಗೀನ,ಮುಸ್ಲಿಂ, ಕ್ರೈಸ್ತ ಸಮುದಾಯ ಸೀರೆ ವಿತರಿಸುವ ಮೂಲಕ ಧರ್ಮ ಬೇರೆ ಇದ್ದರೂ ನಾವೆಲ್ಲ ಒಂದೇ ಎಂದು ಸಂದೇಶ ಸಾರಿದ್ದಾರೆ ಎಂದು ರಾಜಾರಾಂ ರವರನ್ನು ಶ್ಲಾಘಿಸಿದರು.

ರಾಜಾರಾಂ ಪತ್ನಿ ಶಲ್ಲಿ ,ಮುಸಲ್ಮಾನ್ ಧರ್ಮಗುರು ಮೊಹಮ್ಮದ್ ಯೂಸಫ್ ,ವಿನಯ್ ಕಣಗಾಲ್ ,ಕೆ ಆರ್ ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಬಸಪ್ಪ ,ವಿನಯ್ ಕಣಗಾಲ್ ,ರಾಜೇಶ್ ,ಸುನಿಲ್ ನಾರಾಯಣ್ ,ಹಾಗೂ ಇನ್ನಿತರರು ಹಾಜರಿದ್ದರು.

Leave a Reply

Your email address will not be published. Required fields are marked *