ಅಪ್ಪುಗೆ ಇಷ್ಟವಾಗಿದ್ದ ಕಥೆಗೆ ಜೀವ ತುಂಬಲಿರುವ ವಿನಯ್ ರಾಜ್ ಕುಮಾರ್, ಸಿಂಪಲ್ ಸುನಿ “ಒಂದು ಸರಳ ಪ್ರೇಮಕಥೆ” ಪೋಸ್ಟರ್ ಲಾಂಚ್

ನಂದಿನಿ ಮೈಸೂರು

ಡಾ.ರಾಜ್ ಕುಮಾರ್ ಕುಟುಂಬದ ಎರಡನೇ ತಲೆಮಾರಿನ ನಟ ಡಾ.ಪುನೀತ್ ರಾಜ್​ಕುಮಾರ್ ಕೇಳಿ ಇಷ್ಟಪಟ್ಟಿದ್ದ ಕಥೆಗೆ ಈಗ ಅದೇ ವಂಶದ ಮೂರನೇ ಕುಡಿ ರಾಘವೇಂದ್ರ ರಾಜ್ ಕುಮಾರ್ ಪುತ್ರ ವಿನಯ್ ರಾಜ್​ಕುಮಾರ್ ಕಥೆಗೆ ಜೀವ ತುಂಬಲು ನಾಯಕನಾಗಿ ನಟಿಸುತ್ತಿದ್ದು ಚಿತ್ರಕ್ಕೆ ಸಿಂಪಲ್ ಸುನಿ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.

ನಿರ್ದೇಶಕ ಸಿಂಪಲ್ ಸುನಿ, ಪುನೀತ್ ರಾಜ್​ಕುಮಾರ್​ಗಾಗಿ ಕಥೆ ಹೇಳಿದ್ರೂ ಆ ಕಥೆಯನ್ನ ಪುನೀತ್ ರಾಜ್​ಕುಮಾರ್ ಕೇಳಿ​ ಇಷ್ಟವನ್ನು ಪಟ್ಟಿದ್ರೂ,ಸಿನಿಮಾ ತೆಗೆಯಬೇಕು ಎನ್ನುವಷ್ಟರಲ್ಲಿ ಅಪ್ಪು ನಿಧನ ಹೊಂದಿದರು. ಈಗ ಅದೇ ಕಥೆಯನ್ನು ಒಂದು ಸರಳ ಪ್ರೇಮಕಥೆ ಹೆಸರಿನಲ್ಲಿ ತೆರೆ ಮೇಲೆ ಬರಲು ಸಿಂಪಲ್ ಸುನಿ ಸೆಟ್ಟಾಕಿ ಸಿನಿಮಾದಲ್ಲಿ ವಿನಯ್ ರಾಜ್​ಕುಮಾರ್ ನಾಯಕನ ಪಾತ್ರ ನೀಡಿದ್ದಾರೆ.

ಸಿನಿಮಾದ ಚಿತ್ರೀಕರಣ ಮೈಸೂರಿನಲ್ಲಿ ನಡೆಯುತ್ತಿದ್ದು, (8 ಮಾರ್ಚ್ 2023) ರಂದು ಸಿನಿಮಾದ ಪೋಸ್ಟರ್ ರಿಲೀಸ್ ಮಾಡಿದ್ದಾರೆ. ಸಿಂಪಲ್ ಸುನಿ ನಿರ್ದೇಶನದ ಸಿಂಪಲ್ಗಿ ಒಂದ್ ಲವ್ ಸ್ಟೋರಿ ಸಿನಿಮಾ ಬಿಡುಗಡೆ ಆಗಿ ಹತ್ತು ವರ್ಷವಾದ ಹಿನ್ನೆಲೆಯಲ್ಲಿ ಒಂದು ಸರಳ ಪ್ರೇಮ ಕತೆ ಸಿನಿಮಾದ ಪೋಸ್ಟರ್ ಅನ್ನು ಬಿಡುಗಡೆ ಮಾಡಿದರು.

ವಿಕ್ರಮ್ ಬೆಡಗಿ ಧಾರವಾಡದ ಸ್ವಾತಿಷ್ಠ ಹಾಗೂ ರಾಧಾ ಕೃಷ್ಣ ಧಾರಾವಾಹಿ ರಾಧೆ ಖ್ಯಾತಿಯ ನಟಿ ಮಲ್ಲಿಕಾ ಸಿಂಗ್ ನಟ ವಿನಯ್ ರಾಜ್ ಕುಮಾರ್ ಚಿತ್ರಕ್ಕೆ ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ.

ನಟ ವಿನಯ್ ರಾಜ್​ಕುಮಾರ್ ಮಾತನಾಡಿ ಸಿಂಪಲ್ ಸುನಿ ಈಗಾಗಲೇ ನಾಲ್ಕು ಸಿನಿಮಾಗಳನ್ನು ನಿರ್ದೇಶನ ಮಾಡುತ್ತಿದ್ದಾರೆ. ರಾಬಿನ್ ಹುಡ್, ಸ್ಟೋರಿ ಆಫ್ ರಾಯಘಡ, ಗತವೈಭವ ಜೊತೆಗೆ ಅವತಾರ ಪುರುಷ 2 ಸಿನಿಮಾವನ್ನು ಘೋಷಿಸಿದ್ದಾರೆ. ಇದರ ನಡುವೆ ಒಂದು ಸರಳ ಪ್ರೇಮಕತೆ ಸಿನಿಮಾ ಸಹ ಪ್ರಾರಂಭಿಸಿದ್ದಾರೆ. ಒಂದರ ಹಿಂದೊಂದು ಸಿನಿಮಾವನ್ನು ಸಿಂಪಲ್ ಸುನಿ ತೆರೆಗೆ ತರಲು ಹೊರಟಿದ್ದಾರೆ.ಮೊದಲಿನಿಂದಲೂ ನನಗೆ ರೊಮ್ಯಾಂಟಿಕ್ ಕಾಮಿಡಿ ಸಿನಿಮಾಗಳೆಂದರೆ ಬಹಳ ಇಷ್ಷ.ಸಂಗೀತ ನಿರ್ದೇಶಕ ಆಗುವ ಕನಸು ಹೊತ್ತಿರುವ ಯುವಕನ ಕತೆಯನ್ನು ಈ ಸಿನಿಮಾ ಒಳಗೊಂಡಿದೆ.ಅಪ್ಪು ರವರು ಒಪ್ಪಿದ್ದ ಕಥೆ ಇದಾಗಿದ್ದು ನನಗೆ ನಟಿಸುವ ಅವಕಾಶ ಸಿಕ್ಕಿದೆ ಎಂದರು.

ನಿರ್ದೇಶಕ ಸಿಂಪಲ್ ಸುನಿರವರು ಸಿಂಪಲ್ಗಿ ಒಂದು ಲವ್ ಸ್ಟೋರಿ ಸಿನಿಮಾ 10 ವರ್ಷ ಹಿನ್ನಲೆ ಕೇಕ್ ಕಟ್ ಮಾಡುವುದರ ಮೂಲಕ ಸಂಭ್ರಮಿಸಿದರು.
ಸಿನಿಮಾದಲ್ಲಿ ಮಲ್ಲಿಕಾ ಹಾಗೂ ಸ್ವಾತಿಷ್ಟಾ ಹೆಸರಿನ ಇಬ್ಬರು ನಾಯಕಿಯರಿದ್ದಾರೆ.ಈ ಸಿನಿಮಾದಲ್ಲಿ ಮಹಿಳೆಯರಿಗೆ ಹೆಚ್ಚಿನ ಆಧ್ಯತೆ ನೀಡಲಾಗಿದೆ.ಮೈಸೂರು ರಮೇಶ್ ಬಂಡವಾಳ ಹೂಡಿದ್ದಾರೆ.ಈಗಾಗಲೇ ಬೆಂಗಳೂರಿನಲ್ಲಿ 50% ಚಿತ್ರೀಕರಣವಾಗಿದೆ.ಇದೀಗ ಮೈಸೂರಿನಲ್ಲಿ ಸೆಟ್ ಹಾಕಿದ್ದೇವೆ.ಈ ವರ್ಷವೇ ಚಿತ್ರ ತೆರೆ ಮೇಲೆ ಬರಲಿದೆ ಎಂದರು.

ರಾಧಾ ಕೃಷ್ಣ ಧಾರಾವಾಹಿ ರಾಧೆ ಖ್ಯಾತಿಯ ನಟಿ ಮಲ್ಲಿಕಾ ಸಿಂಗ್ ಮೊದಲಿಗೆ ಕನ್ನಡ ಭಾಷೆಯಲ್ಲಿ ಮಾತು ಆರಂಭಿಸಿ ಸಿನಿಮಾದಲ್ಲಿ ತಮ್ಮ ಪಾತ್ರದ ಬಗ್ಗೆ ಮಾಹಿತಿ ಹಂಚಿಕೊಂಡರು.ಈ ಬಾರಿ ಕಪ್ ನಮ್ದೆ ಎಂದು ಹರ್ಷವ್ಯಕ್ತಪಡಿಸಿದರು.

ತದನಂತರ ಮಾತನಾಡಿದ ಮೈಸೂರು ರಮೇಶ್ ರವರು ಮಲ್ಲಿಕಾ ಸಿಂಗ್ ರವರಿಗೆ ಸ್ವಲ್ಪ ಕನ್ನಡ ಬರಲ್ಲ.ಸುನಿ ಅವರು ನಟಿಯನ್ನ ಕನ್ನಡದಲ್ಲಿಯೇ ಮಾತನಾಡಿಸುವ ಕೆಲಸ ಮಾಡುತ್ತಿದ್ದಾರೆ.ಸಿನಿಮಾ ಮುಗಿಯುವವರೆಗೆ ಸುನಿರವರು ಮಲ್ಲಿಕಾರವರಿಗೆ ಕನ್ನಡ ಕಲಿಸಿಬಿಡಿತ್ತಾರೆ ಎಂದರಲ್ಲದೇ ನಮ್ಮ ಸಿನಿಮಾಕ್ಕೆ ಸಿನಿಪ್ರೀಯರು ಆಶೀರ್ವಾದಿಸುವಂತೆ ಮನವಿ ಮಾಡಿದರು.

Leave a Reply

Your email address will not be published. Required fields are marked *