ಎಂಆರ್‌ಸಿ ಕಣ್ಣಿನ ಆಸ್ಪತ್ರೆಯಲ್ಲಿ ಉಚಿತ ನೇತ್ರ ತಪಾಸಣೆ ಶಿಬಿರ

ನಂದಿನಿ ಮೈಸೂರು

ರಘುಲಾಲ್ ಅಂಡ್ ಕಂಪನಿ ನಿರ್ದೇಶಕ ಎನ್. ರಾಘವನ್ ಅವರ ಚಿಕ್ಕಪ್ಪ ಲೇಟ್ ಡಾ. ನೀಲಕಂಠನ್ ಅವರ ರವರ
ಸ್ಮರಣಾರ್ಥ ಎಂಆರ್‌ಸಿ ಕಣ್ಣಿನ ಆಸ್ಪತ್ರೆಯಲ್ಲಿ ಉಚಿತ ನೇತ್ರ ತಪಾಸಣೆ ಶಿಬಿರ ಆಯೋಜಿಸಲಾಗಿತ್ತು.

ಮೈಸೂರು ರೈಸ್ ಕ್ಲಬ್ ಚಾರಿಟೇಬಲ್ ಟ್ರಸ್ಟ್ ನಿಂದ ಸಿದ್ದಾರ್ಥ ನಗರದಲ್ಲಿರುವ ಎಂಆ‌ರ್ ಸಿ ಕಣ್ಣಿನ ಆಸ್ಪತ್ರೆಯಲ್ಲಿ ಸೋಮವಾರ ಏರ್ಪಡಿಸಿದ್ದ ಮೆಗಾ ನೇತ್ರ ತಪಾಸಣಾ ಶಿಬಿರವನ್ನು ರಘುಲಾಲ್ ಅಂಡ್ ಕಂಪನಿ ನಿರ್ದೇಶಕ ಎನ್. ರಾಘವನ್ ಅವರು ಉದ್ಘಾಟಿಸಿದರು.ಶಿಬಿರದಲ್ಲಿ 200 ಮಂದಿಗೆ ಕಣ್ಣಿನ ದೃಷ್ಟಿ ಪರೀಕ್ಷೆ, ಹೊರೆ ತಪಾಸಣೆ ನಡೆಸಲಾಯಿತು.

ಶಿಬಿರದಲ್ಲಿ ಎಂಆ‌ಸಿ ಆಸ್ಪತ್ರೆ ಆಡಳಿತಾಧಿಕಾರಿ ಎ.ರಾಹುಲ್ ದೇವ್, ಹಿರಿಯ ನೇತ್ರ ತಜ್ಞೆ ಡಾ.ಎಂ.ಎಸ್.ಉಷಾ, ಎಂಆರ್ ಸಿ ಚಾರಿಟೆಬಲ್ ಟ್ರಸ್ಟ್ ಟ್ರಸ್ಟಿ ಕೆ.ಎಂ.ಚಂದ್ರೇಗೌಡ, ಎಂಆ‌ಸಿ ಕಣ್ಣಿನ ಆಸ್ಪತ್ರೆ ಸಮಿತಿ ಸದಸ್ಯ ಆರ್ ಗುರು, ಎಂಆರ್ ಸಿ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ವೈ.ಬಿ. ಗಣೇಶ್, ಟ್ರಸ್ಟಿ ಹೆಚ್ .ಕೆ.ರಮೇಶ್ ಹಾಗೂ ಎಂಆರ್‌ಸಿ ಸಮಿತಿ ಸದಸ್ಯ ಜಯರಾಜ ಅರಸ್ ಸೇರಿದಂತೆ ಆಸ್ಪತ್ರೆಯ ವೈದ್ಯರು,ಸಿಬ್ಬಂದಿಗಳು ಭಾಗಿಯಾಗಿದ್ದರು.

Leave a Reply

Your email address will not be published. Required fields are marked *