ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯರವರಿಂದ ಮೈಸೂರು ತಾಲ್ಲೂಕು ವೀರ ಮಡಿವಾಳರ ಸಂಘದ ಕ್ಯಾಲೆಂಡರ್ ಬಿಡುಗಡೆ

ನಂದಿನಿ ಮೈಸೂರು

ಮೈಸೂರು ತಾಲ್ಲೂಕು ವೀರ ಮಡಿವಾಳರ ಸಂಘದ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆಗೊಂಡಿತು.

ಮೈಸೂರು ತಾಲ್ಲೂಕು ವೀರ ಮಡಿವಾಳರ ಸಂಘದ ನೂತನ 2023ರ ಕ್ಯಾಲೆಂಡರ್ ಅನ್ನು ವರುಣಾ ವಿಧಾನಸಭಾ ಕ್ಷೇತ್ರದ ಡಾ.ಯತೀಂದ್ರ ಸಿದ್ದರಾಮಯ್ಯರವರು ಬಿಡುಗಡೆ ಮಾಡಿದರು.

ಕರ್ನಾಟಕ ರಾಜ್ಯ ಮಡಿವಾಳ ಸಂಘದ ರಾಜ್ಯಧ್ಯಕ್ಷರಾದ ಸಿ. ನಂಜಪ್ಪ ನವರು
ಸಮಾಜದ ಪರಿಶಿಷ್ಟ ಜಾತಿ ಹೋರಾಟದ ರೂಪರೇಷೆಯನ್ನು ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ರವರಿಗೆ ತಿಳಿಸಿದರು.ಮಡಿವಾಳ ಸಮುದಾಯವನ್ನು ಎಸ್ ಸಿ ಸಮುದಾಯಕ್ಕೆ ಸೇರಿಸುವಂತೆ ಸರ್ಕಾರಕ್ಕೆ ಮನವಿ ಮಾಡುತ್ತಿದ್ದೇವೆ.ನಮ್ಮ ಬೇಡಿಕೆ ಈಡೇರಿಸದೇ ಇದ್ದಲ್ಲಿ ಮುಂದಿನ ಚುನಾವಣೆಯಲ್ಲಿ ನಮ್ಮ ಸಮುದಾಯ ತಕ್ಕ ಪಾಠ ಕಲಿಸಲಿದ್ದೇವೆ ಎಂದು ಎಚ್ಚರಿಕೆ ನೀಡಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗದ ಅಧ್ಯಕ್ಷರಾದ ಶಿವರಾಂ, ಮಡಿವಾಳ ಸಂಘದ ನಿರ್ದೇಶಕರು ರವಿಕುಮಾರ್‌, ಮೈಸೂರು ತಾಲೂಕು ವೀರ ಮಡಿವಾಳ, ಸಂಘದ ಅಧ್ಯಕ್ಷರು ಜಯರಾಮ್‌ ದುದ್ದಗೆರೆ, ಪ್ರಧಾನ ಕಾರ್ಯದರ್ಶಿ ಮಾದುರಾಜು .ಎಸ್‌, ಗೌರವ ಅಧ್ಯಕ್ಷರು ಶಿವಣ್ಣ ದುದ್ದಗೆರೆ, ಮುಂತಾದವರು ಹಾಜರಿದ್ದರು.

Leave a Reply

Your email address will not be published. Required fields are marked *