ನಂದಿನಿ ಮೈಸೂರು
ವಿವಿಧ ಅಭಿವೃಧ್ದಿಗೆ ಶಾಸಕರಿಂದ ಚಾಲನೆ
ಮೈಸೂರು: ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ಟಿ.ಎಸ್.ಶ್ರೀವತ್ಸ ಅವರು ಗುರುವಾರ ಕ್ಷೇತ್ರ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು.
ಮೊದಲಿಗೆ ಬೆಳಗ್ಗೆ ೧೧ಗಂಟೆಗೆ ಚಾಮುಂಡಿಬೆಟ್ಟದ ರಸ್ತೆಯಲ್ಲಿರುವ ವೀರ ಮಡಿವಾಳ ದೋಭಿ ಘಾಟ್ನಲ್ಲಿ ಶಾಸಕರ ಅನುದಾನದಲ್ಲಿ ಮಡಿವಾಳ ಸಮಾಜದ ಅನುಕೂಲಕ್ಕಾಗಿ ಶೆಲ್ಟರ್ ಅಳವಡಿಸಿ ಹೊಸದಾಗಿ ಕಟ್ಟಿಗಳನ್ನು ನಿರ್ಮಿಸಲು ೧೦ ಲಕ್ಷ ರೂಗಳ ಕಾಮಗಾರಿಗೆ ಚಾಲನೆ ನೀಡಿದರು.
ಬಳಿಕ ವಾಡ್ ನಂ.೬೧ರ ವ್ಯಾಪ್ತಿಯ ವಿದ್ಯಾರಣ್ಯಪುರಂನಲ್ಲಿ ೫೦ ಲಕ್ಷ ವೆಚ್ಚದ ೨ ಮತ್ತು ೪ನೇ ರಸ್ತೆಯ ಅಡ್ಡರಸ್ತೆ ಅಭಿವೃದ್ದಿಗೆ, ಮಧ್ಯಾಹ್ನ ವಾಡ್ ನಂ ೫೧ರ ವ್ಯಾಪ್ತಿಯಲ್ಲಿ ಸುಮಾರು ೧.೫ ಕೋಟಿ ವೆಚ್ಚದ ರಾಮಾನುಜ ೯ನೇ ಮತ್ತು ೧೦ನೇ ಅಡ್ಡರಸ್ತೆ ಹಾಗೂ ಬಿಬಿ ಗಾರ್ಡನ್ ರಸ್ತೆ ಅಭಿವೃದ್ದಿ, ರಾಮಾನುಜ ಮುಖ್ಯರಸ್ತೆ(ಕಂಸಾಳೆ ಮಹದೇವಯ್ಯ ವೃತ್ತದಿಂದ ರಾಮಾನುಜ ೮ನೇ ಅಡ್ಡರಸ್ತೆರವರೆಗೆ) ಮರು ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಿದರು.
ತದನಂತರ ವಾಡ್ ನಂ ೫೨ರ ವ್ಯಾಪ್ತಿಯಲ್ಲಿ ೨.೧೦ ಲಕ್ಷ ವೆಚ್ಚದ ವಸಂತ್ ಮಹಲ್ ಆವರಣದಲ್ಲಿರುವ ಡಯಟ್ ಸಂಸ್ಥೆಗೆ ಹಾಲಿ ಇರುವ ಮೇಲ್ಪಟ್ಟ ಜಲ ಸಂಗ್ರಹಗಾರದಿಂದ ಹೆಚ್.ಡಿ.ಪಿ.ಇ ಕೊಳವೆ ಮಾರ್ಗದ ಮುಖೇನ ನೀರು ಸರಬರಾಜು ಮಾಡುವ ಕಾಮಗಾರಿಗೆ ಮತ್ತು ವಾಡ್ ನಂ.೫೦ರ ವ್ಯಾಪ್ತಿಯಲ್ಲಿ ೧೮.೧೦ ಲಕ್ಷ ವೆಚ್ಚದ ಸುಣ್ಣದಕೇರಿ ೮ನೇ ಕ್ರಾಸ್ ನಲ್ಲಿರುವ ಮೈಸೂರು ಮಹಾನಗರ ಪಾಲಿಕೆಯ ವಸತಿ ಗೃಹ ಸಂ.೨,೩,೪೩,೪೪,೪೫ ಹಾಗೂ ವಾರ್ಡ್ ನಂ ೪೯ರ ವ್ಯಾಪ್ತಿಯ ಬಸವೇಶ್ವರ ೩ನೇ ಅಡ್ಡರಸ್ತೆಯಲ್ಲಿ ವಸತಿ ಗೃಹ ಸಂ.೨೧೩೨ರ ದುರಸ್ಥಿ ಕಾಮಗಾರಿಗಳಿಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾಜಿನಗರ ಪಾಲಿಕೆ ಸದಸ್ಯರಾದ ಛಾಯಾದೇವಿ ಬಿ.ವಿ ಮಂಜುನಾಥ್.ಜಗದೀಶ್ ವಾರ್ಡ್ ಅಧ್ಯಕ್ಷರಾದ ಹೊಯ್ಸಳ. ಆಟೋ ಮಂಜು. ಶಿವಪ್ರಸಾದ್. ಮಂಜುನಾಥ್ ಹಾಗೂ ಸಂಬಂಧ ಪಟ್ಟ ವಾರ್ಡಿನ ಪ್ರಮುಖರಾದ ಎನ್. ಪ್ರದೀಪ್ ಕುಮಾರ್ ಬಾಲಕೃಷ್ಣ.ನಿಶಾಂತ್.ಕಿಶೋರ್. ಗೋಕುಲ್ ಗೋವರ್ಧನ್. ಪ್ರಸನ್ನ. ಚಂದ್ರಶೇಖರ್. ಕಿಶೋರ್ ಜೈನ್.ನಂದೀಶ. ಜೋಗಪ್ಪ. ಕೃಷ್ಣನಾಯಕ ಅನಿಲ್ ಮುಂತಾದವರು ಉಪಸ್ಥಿತರಿದ್ದರು.