ಕ್ಷೇತ್ರದ ಅಭಿವೃದ್ಧಿಗಾಗಿ ಮುಂದಿನ ಬಾರಿಯೂ ಜನತೆ ಆಶೀರ್ವದಿಸಬೇಕು :ಶಾಸಕ ಕೆ.ಮಹದೇವ್ ಮನವಿ

ಪಿರಿಯಾಪಟ್ಟಣ:25 ಆಗಸ್ಟ್ 2022

ಸತೀಶ್ ಆರಾಧ್ಯ / ನಂದಿನಿ ಮೈಸೂರು

ಶಾಸಕನಾಗಿ ಆಯ್ಕೆಯಾದಾಗಿನಿಂದ ತಾಲ್ಲೂಕಿನ ಅಭಿವೃದ್ಧಿಗೆ ಒತ್ತು ನೀಡಿದ್ದು ಮತ್ತಷ್ಟು ಅಭಿವೃದ್ಧಿಗಾಗಿ ಮುಂದಿನ ಬಾರಿಯೂ ತಾಲೂಕಿನ ಜನತೆ ಆಶೀರ್ವದಿಸಬೇಕು ಎಂದು ಶಾಸಕ ಕೆ.ಮಹದೇವ್ ಮನವಿ ಮಾಡಿದರು.

ತಾಲ್ಲೂಕಿನ ಬೆಟ್ಟದಪುರ ಸಮೀಪದ ಸುರಗಳ್ಳಿ ಗ್ರಾಮದಲ್ಲಿ ನಡೆದ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ಮತ್ತು ನೂತನ ಪಡಿತರ ಉಪ ಕೇಂದ್ರ ಉದ್ಘಾಟಿಸಿ ವೇದಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು, ರಾಜಕೀಯದಲ್ಲಿದ್ದವರಿಗೆ ಜನಸೇವೆ ಮಾಡುವ ಗುರಿ ಇರಬೇಕು ಅದನ್ನು ಬಿಟ್ಟು ರಾಜಕೀಯವಾಗಿ ದ್ವೇಷ ಸಾಧಿಸಿ ಭ್ರಷ್ಟಾಚಾರಕ್ಕೆ ಅವಕಾಶ ಕೊಡಬಾರದು, ತಾಲೂಕಿನ ಎಲ್ಲ ಸಮಾಜಗಳ ಅಭಿವೃದ್ಧಿ ವಿಚಾರದಲ್ಲಿ ಜಾತ್ಯಾತೀತವಾಗಿ ಅನುದಾನ ನೀಡಿರುವೆ, ತಾಲ್ಲೂಕಿನಲ್ಲಿ ಹಲವಾರು  ಸಹಕಾರ ಸಂಘಗಳು ಸ್ವಂತ ಕಟ್ಟಡವಿಲ್ಲದೆ ಬಾಡಿಗೆ ಮನೆಗಳಲ್ಲಿ ಹಾಲು ಶೇಖರಣೆ ಮಾಡುತ್ತಿದ್ದು ಮೈಮುಲ್ ಅಧ್ಯಕ್ಷ ನನ್ನ ಪುತ್ರ ಪಿ.ಎಂ ಪ್ರಸನ್ನ ಅವರೊಡನೆ ಚರ್ಚಿಸಿ ಸದ್ಯದಲ್ಲೇ ಎಲ್ಲ ಸಂಘಗಳಿಗೂ ಸ್ವಂತ ಕಟ್ಟಡವನ್ನು ನಿರ್ಮಿಸಲು ಅನುದಾನ ಮಂಜೂರು ಮಾಡಿಸಿಕೊಡುವುದಾಗಿ ಭರವಸೆ ನೀಡಿದರು, ನಾನು ಮತ್ತು ನನ್ನ ಪುತ್ರ ರಾಜಕೀಯವಾಗಿ ತಾಲ್ಲೂಕಿನಲ್ಲಿ ಇರುವವರೆಗೂ ತಾಲ್ಲೂಕಿನ ಅಭಿವೃದ್ಧಿಗಾಗಿ ಜೀವನ ಮುಡಿಪಾಗಿಡುತ್ತೇವೆ ಎಂದರು.

ತಾ.ಪಂ ಇಒ ಸಿ.ಆರ್ ಕೃಷ್ಣಕುಮಾರ್, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಅಣ್ಣಯ್ಯಶೆಟ್ಟಿ, ಆಹಾರ ಇಲಾಖೆ ಶಿರಸ್ತೇದಾರ್ ಸಣ್ಣಸ್ವಾಮಿ ಮಾತನಾಡಿದರು, ಈ ಸಂದರ್ಭ ಹಲಗನಹಳ್ಳಿ ಗ್ರಾ.ಪಂ ಅಧ್ಯಕ್ಷೆ ಗೀತಾ ಮಹದೇವ್, ಉಪಾಧ್ಯಕ್ಷ  ಶಫೀರ್ ಅಹಮದ್, ಸುರಗಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಶ್ರೀನಿವಾಸ್ ಗೌಡ ಹಾಗೂ ನಿರ್ದೇಶಕರು ಮತ್ತು ಸಿಬ್ಬಂದಿ, ಮುಖಂಡರಾದ ವಿದ್ಯಾಶಂಕರ್, ರವಿಗೌಡ ಮತ್ತು ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಗ್ರಾಮಸ್ಥರು ಇದ್ದರು.

Leave a Reply

Your email address will not be published. Required fields are marked *