ಮಾಜಿ ಸಚಿವ ಸಿ.ಹೆಚ್.ವಿಜಯಶಂಕರ್ ರವರ ಪುತ್ರಿ ವಿವಾಹದ ಶುಭ ಸಂದರ್ಭದಲ್ಲಿ ರಕ್ತದಾನ ಶಿಬಿರ:ಲಯನ್ ವೆಂಕಟೇಶ್

 

 

ಮೈಸೂರು:25 ಆಗಸ್ಟ್ 2021

ನ@ದಿನಿ

ಆ.31 ಮತ್ತು ಸೆ.1 ರಂದು
ಮಾಜಿ ಸಚಿವ ಸಿ.ಹೆಚ್.ವಿಜಯಶಂಕರ್ ರವರ ಪುತ್ರಿ ವಿವಾಹದ ಶುಭ ಸಂದರ್ಭದಲ್ಲಿ ಸಾಮಾಜಿಕ ಸೇವಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಲಯನ್ ವೆಂಕಟೇಶ್ ತಿಳಿಸಿದರು.

ಕೋರೋನಾ ಮಹಾಮಾರಿಯಿಂದ ಸಾವಿರಾರು ಜೀವಹಾನಿಯಾಗಿದೆ.ಈ ಸಂಧಿಗ್ಧ ಪರಿಸ್ಥಿತಿಯಲ್ಲಿ ಜೀವ ಉಳಿವಿಗಾಗಿ ರಕ್ತದ ಕೊರತೆ ಇದೆ.ಆದ್ದರಿಂದ ಭಾರತೀಯ ಸಾಂಸ್ಕೃತಿಕ ವೇದಿಕೆ ,ಲಯನ್ಸ್ ಕ್ಲಬ್ ಆಫ್ ಬೆಂಗಳೂರು ಸ್ಯಾಂಡಲ್ ವುಡ್ ಸೆಲಬ್ರೆಟಿಸ್ ,ಲಯನ್ಸ್ ಬ್ಲೆಡ್ ಸೆಂಟರ್ ಜೀವದಾರ,ಶ್ರೀ ತಲಕಾವೇರಿ ಮಹಿಳಾ ತರಬೇತಿ ಸಂಸ್ಥೆ, ಭೂಮಿಕಾ ಭಾವೈಕ್ಯ ಬಳಗ ಸಹಕಾರದೊಡನೆ ಜೀವಧಾರ ರಕ್ತದಾನ ವೈದ್ಯ ಲಯನ್ ಡಾ.ಗಿರೀಶ್ ರವರ ನೇತೃತ್ವದಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿದೆ.ಆ.31 ರಂದು ಶಿಬಿರಕ್ಕೆ ಲಯನ್ ನಾಗರಾಜ್ ವಿ.ಬೈರಿ ಉದ್ಘಾಟಿಸಲಿದ್ದಾರೆ ಎಂದು ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಮೈಸೂರು ಗೋಲ್ಡ್ ಲಯನ್ ಗೋಲ್ಡ್ ಸುರೇಶ್ ,ನಳಿನಿ ತಮ್ಮಯ್ಯ,ಎಂ.ಎಸ್.ಪ್ರಕಾಶ್,ತಗಡೂರು ಗೌರಿಶಂಕರ್ ಕೃಷ್ಣ ಹಾಜರಿದ್ದರು.

Leave a Reply

Your email address will not be published. Required fields are marked *