ಪೌರಕಾರ್ಮಿಕರು ತಮ್ಮ ಕೆಲಸದಲ್ಲಿ ದೇವರನ್ನು ನೋಡುತ್ತಿದ್ದಾರೆ ಮಾ ವಿ ರಾಮ್ ಪ್ರಸಾದ್

ನಂದಿನಿ ಮೈಸೂರು

ಪೌರಕಾರ್ಮಿಕರಿಗೆ ಬಾಗಿನ ಕೊಡುವ ಮೂಲಕ ಗೌರಿ ಗಣೇಶ ಹಬ್ಬ ಆಚರಣೆ

ಪೌರಕಾರ್ಮಿಕರು ತಮ್ಮ ಕೆಲಸದಲ್ಲಿ ದೇವರನ್ನು ನೋಡುತ್ತಿದ್ದಾರೆ ಮಾ ವಿ ರಾಮ್ ಪ್ರಸಾದ್

ಇಂದು ಗೌರಿ ಹಬ್ಬದ ಅಂಗವಾಗಿ 55ನೇ ವಾರ್ಡಿನಲ್ಲಿ 50 ಜನ ಪೌರಕಾರ್ಮಿಕರಿಗೆ ಬಾಗಿನ, ಸೀರೆಗಳನ್ನು ಕೊಡುವ ಮುಖಾಂತರ ಮೈಸೂರು ಮಹಾನಗರ ಪಾಲಿಕೆ ಸದಸ್ಯ ಮಾ. ವಿ ರಾಮ್ ಪ್ರಸಾದ್ ಹಬ್ಬವನ್ನು ಆಚರಿಸಿದರು.

ನಂತರ ಮಾತನಾಡುತ್ತಾ ಇಂದು ಎಲ್ಲರೂ ಮನೆಯಲ್ಲಿ ಹೊಸ ಬಟ್ಟೆಯನ್ನು ತೊಟ್ಟು ಗೌರಿ ಪೂಜೆಯನ್ನು ಸಂಭ್ರಮದಿಂದ ಆಚರಣೆ ಮಾಡುತ್ತಿದ್ದಾರೆ. ಆದರೆ ಪೌರಕಾರ್ಮಿಕರು ತಮ್ಮ ಸ್ವಚ್ಚತೆ ಕಾರ್ಯದಲ್ಲಿ ದೇವರನ್ನು ಕಾಣುತ್ತಿದ್ದಾರೆ. ದಸರಾ ಹತ್ತಿರವಿದ್ದು ಪೌರ ಕಾರ್ಮಿಕರ ಶ್ರಮ ಹೆಚ್ಚಾಗಿರುತ್ತದೆ ಎಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಮುಖಂಡರಾದ ಸಂದೀಪ್ ಚಂದ್ರಶೇಖರ್, ವಿಕ್ರಮ್ ಅಯಾಂಗರ್, ಗೋಕುಲ್, ಪುನೀತ್, ಅದ್ವೈತ, ಶಿವು, ಸಂತೋಷ್, ಧರ್ಮೇಂದ್ರ, ದೇವೇಂದ್ರ ಸ್ವಾಮಿ, ಲಲಿತಾಂಬ, ಮಂಜುನಾಥ್, ಬಸವರಾಜು, ರಾಕೇಶ್, ಮಧು, ರಾಮಚಂದ್ರ, ರೂಪೇಶ್, ಕೌಷಿಕ್ ಮುಂತಾದವರು ಹಾಜರಿದ್ದರು.

Leave a Reply

Your email address will not be published. Required fields are marked *