4ನೇ ಶಾಖೆ ಆರಂಭಿಸಿ ಮಾಂಸ ಪ್ರೀಯರನ್ನು ಕೈಬೀಸಿ ಕರೆಯುತ್ತಿರುವ ಕಾವೇರಿ ಮೆಸ್

ಮೈಸೂರು:27 ಡಿಸೆಂಬರ್ 2021

ನಂದಿನಿ

ಸಾಮಾನ್ಯವಾಗಿ ಹೋಟೆಲ್ ನಲ್ಲಿ ಸಸ್ಯಹಾರಿ ತೆಗೆದು ಕೊಂಡರೇ 35 ರಿಂದ 40 ರೂ ಬೆಲೆ ಇರುತ್ತೆ.ಇನ್ನೂ ಮಟನ್ ಬಿರಿಯಾನಿ, ಚಿಕನ್ ಬಿರಿಯಾನಿ, ನಾಟಿ ಕೋಳಿಗೆ ಬೆಲೆ ದುಬಾರಿ ಇದ್ದೇ ಇರುತ್ತೆ ಆದರೇ ಮೈಸೂರಿನ ಕಾವೇರಿ ಮೆಸ್ ನಾನ್ ವೆಜ್ ಪ್ರೀಯರಿಗಾಗಿ ಕೇವಲ 40 ರೂಗಳಿಗೆ ಬಿರಿಯಾನಿ ನೀಡಿ ಮನೆ ಮಾತಾಗಿದ್ದು ಇದೀಗಾ ತನ್ನ ನಾಲ್ಕನೇ ಶಾಖೆ ಆರಂಭಿಸಿದೆ.

ಮಂಡ್ಯದಲ್ಲಿ ಮೊದಲ ಬಾರಿಗೆ ಆರಂಭವಾದ ಕಾವೇರ್ ಮೆಸ್,ನಂತರ
ಮೈಸೂರಿನ ಹೆಬ್ಬಾಳು,ತದನಂತರ ಕೆ.ಟಿ.ಸ್ಟ್ರೀಟ್ ನಲ್ಲಿ ಕಾವೇರಿ ಮೆಸ್ ಇದ್ದು ಉತ್ತಮ ಪ್ರತಿಕ್ರಿಯೆ ದೊರೆತಿದೆ.ಮೈಸೂರು- ಗುಣಮಟ್ಟ ಹಾಗೂ ರುಚಿಗೆ ಹೆಸರಾದ ಕಾವೇರಿ ಮೆಸ್ ಇಂದು ಮೈಸೂರಿನ ಎನ್.ಆರ್.ಮೊಹಲ್ಲಾದ ಮಾರುತಿ ಸರ್ಕಲ್ ಬಳಿ ತನ್ನ 4 ನೇ ಶಾಖೆ ನೂತನವಾಗಿ ಆರಂಭವಾಗಿದ್ದು ಶಾಸಕ ತನ್ವೀರ್ ಸೇಠ್ ಅವರು ಟೇಪ್ ಕತ್ತರಿಸುವ ಮೂಲಕ ಉದ್ಘಾಟಿಸಿ ಶುಭ ‌ಕೋರಿದರು.

ಉಪ ಮೇಯರ್ ಅನ್ವೀರ್ ಬೇಗ, ಕಾರ್ಪೋರೇಟರ್ ಪ್ರೇಮ ಶಂಕರೇಗೌಡ,
ಕಾವೇರಿ ಮೆಸ್ ಮಾಲೀಕ ಸಿದ್ದರಾಜು ಗೌಡ, ಅವರ ಪತ್ನಿ ಅಕ್ಷತಾ ಸೇರಿದಂತೆ ಇತರರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *