ಎರಡು ಕಿಡ್ನಿ ವೈಫಲ್ಯ ಸಹಾಯಕ್ಕೆ ಮುಂದಾದ ಮಾಜಿ ಶಾಸಕ ಚಿಕ್ಕಣ್ಣ ಪುತ್ರ ಜಯಪ್ರಕಾಶ್ ಹಾಗೂ ಸ್ನೇಹಿತರು

ಸರಗೂರು:26 ಸೆಪ್ಟೆಂಬರ್ 2021

ನ@ದಿನಿ

                         ಎರಡೂ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಬಡ ಯುವಕ ರಾಮಚಂದ್ರ ಚಿಕಿತ್ಸೆಗೆ ಸಹಾಯ ಮಾಡಲು ದಾನಿಗಳು‌ ಮುಂದಾಗಿದ್ದಾರೆ.

                         ಸರಗೂರು ಸಮೀಪದ ಹಳೇಹೆಗ್ಗುಡಿಲು ಗ್ರಾಮದ ರಾಮಚಂದ್ರ ಎಂಬ ಯುವಕನಿಗೆ ಎರಡೂ ಕಿಡ್ನಿ ವೈಫಲ್ಯವಾಗಿದೆ. ವಿಷಯ ತಿಳಿದು ಜೆಡಿಎಸ್ ಯುವ ಮುಖಂಡ ಜಯಪ್ರಕಾಶ್ ರಾಮಚಂದ್ರ ಮನೆಗೆ ಭೇಟಿ ನೀಡಿ ಯುವಕನ ಸಮಸ್ಯೆ ಆಲಿಸಿದ್ದಾರೆ.

                          ಮಗನ ಚಿಕಿತ್ಸೆ ವೆಚ್ಚ ಭರಿಸದೇ
ಇಡೀ ಕುಟುಂಬ ಸಂಕಷ್ಟದಲ್ಲಿರುವುದನ್ನ ಕಂಡ ಜಯಪ್ರಕಾಶ್ ಹಾಗೂ ಸ್ನೇಹಿತರು ರಾಮಚಂದ್ರನ ಡಯಾಲಿಸೀಸ್ ಗೆ ಸಹಾಯ ಮಾಡಲು ಮುಂದಾಗಿದ್ದಾರೆ.ವೈದ್ಯರ ಭೇಟಿಗೆ ಸರಗೂರಿನಿಂದ ಬೆಂಗಳೂರಿಗೆ ವಾಹನ ವ್ಯವಸ್ಥೆ ಮಾಡಿದ್ದಾರೆ. ಎಚ್.ಡಿ.ಕೋಟೆಯಲ್ಲಿ ಡಯಾಲಿಸಿಸ್ ವ್ಯವಸ್ಥೆಗೆ ಅನುಕೂಲ ಮಾಡಿಕೊಡುವಂತೆ ಮನವಿ ಮಾಡಿಕೊಂಡಿರುವ ರಾಮಚಂದ್ರನಿಗೆ ವ್ಯವಸ್ಥೆ ಕಲ್ಪಿಸುವಂತೆ ಜಯಪ್ರಕಾಶ್ ಭರವಸೆ ನೀಡಿ ಕುಟುಂಬದವರಿಗೆ ಸ್ವಲ್ಪ ಹಣದ ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

                       ಇದೇ ಸಂದರ್ಭದಲ್ಲಿ ಮಹದೇವನಾಯಕ,ಸ್ವಾಮಿ,ನಾಗರಾಜು,ವಿನೋದ್,ರಾಜು ಹಾಗೂ ಗ್ರಾಮಸ್ಥರು ಜೊತೆಗಿದ್ದರು.

ದಾನಿಗಳು ಈ ಬ್ಯಾಂಕಿನ ಖಾತೆಗೆ
ಸಹಾಯ ಮಾಡುವವಂತೆ ವಿನಂತಿ.
Name :Ramachandra . canara bank Saraguru branch. account number 4343101011813. Ifsc code :CNRB0004343.

 

Leave a Reply

Your email address will not be published. Required fields are marked *