ಶಾಲೆಯ ಮಕ್ಕಳಿಗೆ ಕಲಿಕೆ ಸಮಾಗ್ರಿಗಳು ನೋಟ್ ಪುಸ್ತಕ,ಪೆನ್ನು,ಸಿಹಿ ವಿತರಣೆ ಮಾಡಿ ಡಾ.ಎಂ.ಮಲ್ಲಿಕಾರ್ಜುನ ಖರ್ಗೆ ಹುಟ್ಟು ಹಬ್ಬ ಅಚರಣೆ

ನಂದಿನಿ ಮೈಸೂರು

ಎಐಸಿಸಿ ರಾಷ್ಟೀಯ ಅಧ್ಯಕ್ಷರಾದ ಡಾ.ಎಂ.ಮಲ್ಲಿಕಾರ್ಜುನ ಖರ್ಗೆ ರವರ 82 ನೇ ಹುಟ್ಟು ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಅಖಿಲ ಕರ್ನಾಟಕ ಡಾ.ಎಂ.ಮಲ್ಲಿಕಾರ್ಜುನ ಖರ್ಗೆ ಅಭಿಮಾನಿಗಳ ಸಂಘ,ಬಂಡಿಪಾಳ್ಯದ ಗ್ರಾಮಸ್ಥರಿಂದ ಬಂಡಿಪಾಳ್ಯ ಸರಕಾರಿ ಹಿರಿಯ ಪ್ರಾಥಾಮಿಕ ಶಾಲೆಯ ಮಕ್ಕಳಿಗೆ ಕಲಿಕೆ ಸಮಾಗ್ರಿಗಳಾದ ನೋಟ್ ಪುಸ್ತಕ,ಪೆನ್ನು ಹಾಗೂ ಸಿಹಿ ನೀಡುವ ಮೂಲಕ ಹುಟ್ಟು ಹಬ್ಬ ಅಚರಣೆ ಮಾಡಲಾಯಿತು.

ಈ ಸಂಧರ್ಭದಲ್ಲಿ ಮಾಜಿ ರೈಲ್ವೆ ಮಂಡಳಿ ಸದಸ್ಯರು, ಅಖಿಲ ಕರ್ನಾಟಕ ಡಾ.ಎಂ.ಮಲ್ಲಿಕಾರ್ಜುನ ಖರ್ಗೆ ಅಭಿಮಾನಿಗಳ ಸಂಘದ ರಾಜ್ಯಾಧ್ಯಕ್ಷರು ಹಾಗೂ ಕಾಂಗ್ರೆಸ್ ಮುಖಂಡರಾದ ಬಂಡಿಪಾಳ್ಯ ವಿಜಯ್ ಕುಮಾರ್ ,ಕಾಂಗ್ರೆಸ್ ಮುಖಂಡರಾದ ಏಳಿಗೆಹುಂಡಿ ಮಂಜುನಾಥ್,ಕಡಕೊಳ ಶಿವಲಿಂಗ,ಗೆಜ್ಜಗಳ್ಳಿ ನಂದೀಶ್,ದೊಡ್ಡಕಾನ್ಯ ಸೂರ್ಯ ಪ್ರಕಾಶ್, ಡಿಸಿ.ಶೇಖರ್,ಕೆ.ಮಹೇಶ್,ಹಾಗೂ ಬಂಡಿಪಾಳ್ಯ ಗ್ರಾಮದ ಮುಖಂಡರು,ಯುವಕರು ಹಾಜರಿದ್ದರು.

Leave a Reply

Your email address will not be published. Required fields are marked *