ವಿವಿಧ ಸೇವಾ ಕಾರ್ಯಕ್ರಮಗಳ ಮೂಲಕ ಗ್ರಾ.ಪಂ ಮಾಜಿ ಸದಸ್ಯ ಕೆ.ಚಂದ್ರಶೇಖರ್ ಹುಟ್ಟುಹಬ್ಬ

ಮೈಸೂರು:21 ಮಾರ್ಚ್ 2022

ನಂದಿನಿ ಮೈಸೂರು

ವಿವಿಧ ಸೇವಾ ಕಾರ್ಯಕ್ರಮ ಮೂಲಕ T.a.p.c.m.s ನಿರ್ದೇಶಕ ಮತ್ತು ಬೋಗಾದಿ ಗ್ರಾ.ಪಂ ಮಾಜಿ ಸದಸ್ಯ ಕೆ.ಚಂದ್ರಶೇಖರ್ ಹುಟ್ಟುಹಬ್ಬ ಆಚರಿಸಲಾಯಿತು.

ಬೋಗಾದಿ ಗ್ರಾಮದ ಯುವ‌ ಮುಖಂಡ ಚಂದ್ರು ಕನ್ನಡಿಗ ಮತ್ತು ಸೊಸೈಟಿ ಆನಂದ್ ನೇತೃತ್ವದಲ್ಲಿ ಬೋಗಾದಿ ಬಸ್ ನಿಲ್ದಾಣದ ಬಳಿ ಕೇಕ್ ಕತ್ತರಿಸಿ ಶುಭ ಹಾರೈಸಿದರು.

ಬೋಗಾದಿಯ ಜನರ ಆರೋಗ್ಯದ ದೃಷ್ಟಿಯಿಂದ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಲಾಗಿತ್ತು.ನೂರಾರು ಮಂದಿ ಶಿಬಿರದ ಪ್ರಯೋಜನ ಪಡೆದುಕೊಂಡರು.

ದಿ.ನಟ ಪುನೀತ್ ರಾಜ್ ಕುಮಾರ್ ನೆನಪಿಗಾಗಿ ಕೆ.ಚಂದ್ರಶೇಖರ್ ರವರು
ನಿಂಗರಾಜಯ್ಯ ವೃತ್ತದಲ್ಲಿ ಅಪ್ಪು ಬಾಂಡ್ ಸರ್ಕಲ್ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಗ್ರಾಮದ ಮುಖಂಡರು ಮತ್ತು ಅಭಿಮಾನಿಗಳು ಭಾಗಿಯಾಗಿದ್ದರು.

Leave a Reply

Your email address will not be published. Required fields are marked *