ರೈಲು ಬಂಡಿ ಅಪಘಾತ, ರಕ್ಷಣೆ ಕುರಿತು ಜನರಿಗೊಂದು ” ಅಣಕು‌ ಪ್ರದರ್ಶನ “

 

 

ಮೈಸೂರು:21 ಸೆಪ್ಟೆಂಬರ್ 2021

*ಸ್ಪೇಷಲ್ ಸ್ಟೋರಿ:ನ@ದಿನಿ*

                        ಸಾಮಾನ್ಯವಾಗಿ ಅಪಘಾತವಾದಾಗ ಜನರನ್ನ ರಕ್ಷಿಸೋಕೆ ಯಾರಾದ್ರೂ ಮುಂದೆ ಬರ್ತಾರೆ.ಎದುರುಗಡೆ ಬೃಹತ್ ಗಾತ್ರದ ರೈಲು ಹಳಿ ತಪ್ಪಿ ಕೆಳಗೆ ಬಿದ್ದಿದೆ. ನಮ್ ಜನರಿಗೆ ಸ್ವಲ್ಪನಾದ್ರೂ ಮಾನವೀಯತೆ ಇದ್ದೀಯಾ? ಜನ ತುಂಬಿ ತುಳುಕುತ್ತಿದ್ದಾರೆ.
ಸಹಾಯ ಮಾಡನ್ನ ಬಿಟ್ಟು ಬಿಟ್ಕಣ್ಣು ಬಿಟ್ಟಂಗೆ ನೋಡ್ತೀದ್ದೀರಾ ಅಂತ ಬೈಕೋತಿದ್ದೀರಾ.ಸಮಾಧಾನ ಅಲ್ಲಿನ ವಾಸ್ತವವೇ ಬೇರೆ.ಅಲ್ಲಿ ನಡೆದಿದ್ದು ಅಣಕು ಪ್ರದರ್ಶನ.

                ಹೌದು ,ಅಪಘಾತ ಸಂಭವಿಸಿದಾಗ ಪ್ರಯಾಣಿಕರು ಅಯ್ಯಯ್ಯೋ ಯಾರಿದ್ದೀರಾ ಓಡಿ ಬನ್ನಿ…. ಬೇಗ ಓಡಿ ಬನ್ನಿ….. ಹಳಿ ತಪ್ಪಿ ರೈಲು ಮಗುಚಿದೆ.ಯಾರಾದ್ರೂ ನಮ್ಮನ್ನ ಕಾಪಾಡಿ ಅಂತ ಕೂಗುತ್ತಾರೆ.ಆ ಕ್ಷಣದಲ್ಲಿ ಪ್ರಯಾಣಿಕರ ರಕ್ಷಣೆಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ, ರೈಲ್ವೆ ಪೊಲೀಸರು ಧಾವಿಸಿ ಹೇಗೆಲ್ಲ ಶ್ರಮಿಸುತ್ತಾರೆ,ಮಾನವರ ಜೀವ ಸಂರಕ್ಷಿಸುವುದು ಹೇಗೆ ಎಂಬುದನ್ನ ಮೈಸೂರಿನ ಅಶೋಕಪುರಂ ರೈಲ್ವೆ ನಿಲ್ದಾಣದಲ್ಲಿ ಅಣುಕು ಕಾವಾಯತು ಪ್ರದರ್ಶನ ಮೂಲಕ ತೋರಿಸಲಾಯಿತು.

                  ರೈಲು ಸಂಖ್ಯೆ 06220 ತಿರುಪತಿ ಟು ಚಾಮರಾಜನಗರ ಎಕ್ಸ್ ಪ್ರೆಸ್ ನ ಎರಡು ಸಾಮಾನ್ಯ ದ್ವೀತೀಯ ದರ್ಜೆ ಪ್ರಯಾಣೀಕರ ಬೋಗಿಗಳಾದ ಎಸ್ ಡಬ್ಲ್ಯೂ 91604 ಮತ್ತು ಎಸ್ ಡಬ್ಲ್ಯೂ ಆರ್ 92605 ಇಂದು ಬೆಳಗ್ಗೆ 9:56 ಗಂಟೆ ಸುಮಾರಿಗೆ ಅಶೋಕಪುರಂ ರೈಲ್ವೆ ನಿಲ್ದಾಣದಲ್ಲಿ ಉರುಳಿದೆ. 15ಪ್ರಯಾಣಿಕರು ಸಿಲುಕಿಕೊಂಡಿದ್ದಾರೆಂದು ವಿಭಾಗೀಯ ರೈಲ್ವೆ ವ್ಯವಸ್ಥಾಪಕರಿಂದ ಮಾಹಿತಿ ಬಂದಿತ್ತು.
ತಕ್ಷಣ ಹಿರಿಯ ವಿಭಾಗೀಯ ಸುರಕ್ಷಾ ಅಧಿಕಾರಿಯವರ ನೇರ ಮೇಲ್ವಿಚಾರಣೆಯಲ್ಲಿ ರೈಲ್ವೆ ಸಿಬ್ಬಂದಿ, ರಾಷ್ಟ್ರೀಯ ವಿಪತ್ತು ವಿರ್ವಹಣಾ ಪಡೆ, ಆ್ಯಂಬುಲೆನ್ಸ್, ಅಗ್ನಿಶಾಮಕ ದಳ, ನಾಗರಿಕ ಆಡಳಿತದ ಉನ್ನತ ಅಧಿಕಾರಿಗಳು ಮತ್ತು ಸರ್ಕಾರಿ ರೈಲ್ವೆ ಪೊಲೀಸ್ ಭಾಗವಹಿಸಿದ್ದರು.
ಇಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ತಂಡದೊಂದಿಗೆ ನೈಋತ್ಯ ರೈಲ್ವೆಯ ಮೈಸೂರು ವಿಭಾಗ ಅಣಕು ಕಾರ್ಯಾಚರಣೆಯನ್ನು ಹಮ್ಮಿಕೊಂಡಿತ್ತು.
ನೈಋತ್ಯ ರೈಲ್ವೆಯ ಮೈಸೂರು ವಿಭಾಗವು, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ಮತ್ತು ರಾಜ್ಯ ಸರ್ಕಾರದ ಸಿಬ್ಬಂದಿ ಸಹಯೋಗದೊಂದಿಗೆ
ಪ್ರಥಮ ಚಿಕಿತ್ಸೆ ಕೊಡಲು ಅಗ್ನಿಶಾಮಕ ದಳದ ಸಿಬ್ಬಂದಿ, ರೈಲ್ವೆ ಆಸ್ಪತ್ರೆ ವೈದ್ಯರು,ನರ್ಸಿಂಗ್ ಸಿಬ್ಬಂದಿಗಳು ಅಂಬುಲೆನ್ಸ್ ನೊಂದಿಗೆ ಮೈಸೂರಿನ ಅಶೋಕಪುರಂ ರೈಲ್ವೆ ನಿಲ್ದಾಣದಲ್ಲಿ ಜಂಟಿ ಅಣಕು ಕವಾಯತು ನಡೆಸಿತ್ತು.
ಈ ವೇಳೆ ರೈಲು ಹಳಿ ತಪ್ಪಿದ ಘಟನೆಯ ನಂತರದಲ್ಲಿ ಅದರಲ್ಲಿದ್ದ ಪ್ರಯಾಣಿಕರನ್ನು ರಕ್ಷಿಸುವಿಕೆ ಮತ್ತು ಪರಿಹಾರ ಪ್ರೇರಿತ ಕಾರ್ಯಾಚರಣೆಗಳು ನಡೆಯಿತು.

                   ಈ ಸಂದರ್ಭ ಅಧಿಕಾರಿಯೋರ್ವರು ಮಾತನಾಡಿ ಅಣಕು ಕಾರ್ಯಾಚರಣೆಯು ಒಂದು ನೈಜ ಘಟನೆಯ ಸಿದ್ಧತೆಯ ಸ್ಥಿತಿಯನ್ನು ಅಳೆಯುವ ಮತ್ತು ತುರ್ತು ಪ್ರಕ್ರಿಯೆಯ ಯೋಜನೆಯ ಪರಿಣಾಮಕಾರಿತ್ವವನ್ನು ಪರೀಕ್ಷಿಸುವ ಏಕೈಕ ಸಾಧನವಾಗಿದೆ. ವಿಶೇಷ ವಿಪತ್ತು ಕ್ಷೇತ್ರದಲ್ಲಿ ಪ್ರಮುಖ ಏಜೆನ್ಸಿಯ ಸಾಮರ್ಥ್ಯದಲ್ಲಿ ಎನ್ ಡಿ ಆರ್ ಎಫ್ ಕೂಡ ಭಾರತವನ್ನು ವಿಪತ್ತುಗಳ ಕಡೆಗೆ ಸ್ಥಿತಿಸ್ಥಾಪಕವಾಗಿಸಲು ಬದ್ಧವಾಗಿದೆ. ರೈಲ್ವೆ ಸಿಬ್ಬಂದಿಗಳು ಅಪಘಾತ ಸಂಭವಿಸಿದ ಸಂಸದರ್ಭದಲ್ಲಿ ತಮಗೆ ನಿರ್ದಿಷ್ಟಪಡಿಸಿದ ಕೆಲಸ ಕಾರ್ಯಗಳನ್ನು ಹೇಗೆ ನಿರ್ವಹಿಸಬೇಕು ಎಂಬುದರ ಕುರಿತು ಪ್ರಾಯೋಗಿಕವಾಗಿ ತರಬೇತಿಗಳನ್ನು ನಡೆಸುವ ಮೂಲಕ ಆಗಿಂದ್ದಾಗ್ಗೆ ಸಂಭವಿಸುವ ನಿಜವಾದ ಅಥವಾ ತುರ್ತು ಸಂದರ್ಭಗಳಲ್ಲಿ ತಮ್ಮ ಕೆಲಸ ಕಾರ್ಯಗಳನ್ನು ನಿರ್ವಹಿಸಲು ಸನ್ನದ್ಧರಾಗುವಂತೆ ಮಾಡುವ ಉದ್ದೇಶವನ್ನು ಹೊಂದಿರುತ್ತದೆ. ಈ ತರಬೇತಿಯಿಂದ ರೈಲ್ವೆ ಸಿಬ್ಬಂದಿಗಳು ಪೂರ್ವಭಾವಿ ತಯಾರಿ ನಡೆಸಿರುವ ಕುರಿತು ಸಂಪೂರ್ಣ ಖಾತ್ರಿಯಾಗುತ್ತದೆ ಎಂದರು.

                ಒಟ್ಟಾರೆ ರೈಲ್ವೇ ಸಿಬ್ಬಂದಿಗಳು
ಅಪಘಾತ ಬಳಿಕ ಯಾವೆಲ್ಲಾ ಸಾಧನ ಬಳಸಿಕೊಂಡು ಪ್ರಯಾಣಿಕರ ಜೀವ ಉಳಿಸುತ್ತಾರೆ ಎಂಬುದನ್ನ ಸುಮಾರು 70 ನಿಮಿಷ ಅಣಕು ಕವಾಯತು ಪ್ರದರ್ಶನ ಮೂಲಕ ಜನರ ಗಮನ ಸೆಳೆದಿದ್ದಾರೆ.

 

Leave a Reply

Your email address will not be published. Required fields are marked *