ಆಭರಣ ಪ್ರೀಯರನ್ನ ಕೈಬೀಸಿ ಕರೆಯುತ್ತಿದೆ ಶ್ರೀ ಗಣೇಶ್ ಡೈಮಂಡ್ ಅಂಡ್ ಜ್ಯುವೆಲ್ಲರಿ

ಮೈಸೂರು10 ಮಾರ್ಚ್ 2022

ನಂದಿನಿ ಮೈಸೂರು

ಬೆಂಗಳೂರಿನ ಸದಾಶಿವನಗರದ
ಶ್ರೀ ಗಣೇಶ್ ಡೈಮಂಡ್ ಅಂಡ್ ಜ್ಯುವೆಲ್ಲರಿ ಸಹಯೋಗದಲ್ಲಿ ಜಯಂತಿ ಬಲ್ಲಾಳ್ ನೇತೃತ್ವದಲ್ಲಿ
ಆಕರ್ಷಕ ವಜ್ರ ಮತ್ತು ಚಿನ್ನದ ಆಭರಣ ಪ್ರದರ್ಶನ ಮತ್ತು ಮಾರಾಟ ಆರಂಭವಾಗಿದೆ.

ಮೈಸೂರಿನ ವಿಜಯನಗರದ ಮೊದಲನೇ ಹಂತದಲ್ಲಿರುವ ಜಯಂತಿ ಬಲ್ಲಾಳ್ ಫ್ಲ್ಯಾಗ್‌ಶಿಪ್ ಸ್ಟೋರ್‌ನಲ್ಲಿ ಇಂದಿನಿಂದ ಮಾ.13 ರವರೆಗೆ ಮೂರು ದಿನಗಳ ಕಾಲ ಆಯೋಜಿಸಿರುವ ಆಭರಣ ಮೇಳಕ್ಕೆ ನಟಿ ಶ್ವೇತಾ ಪ್ರಸಾದ್ ಅವರು ಜ್ಯೋತಿ ಬೆಳಗಿಸುವುದರ ಮೂಲಕ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು ವಿವಿಧ ಬಗೆಯ ವಜ್ರ,ಚಿನ್ನದ ಆಭರಣಗಳನ್ನು ದೂರದ ಬೆಂಗಳೂರಿಗೆ ಹೋಗಿ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ.ಬೆಂಗಳೂರಿನ ಸದಾಶಿವನಗರದ
ಶ್ರೀ ಗಣೇಶ್ ಡೈಮಂಡ್ ಅಂಡ್ ಜ್ಯುವೆಲ್ಲರಿ ಸಹಯೋಗದಲ್ಲಿ ಜಯಂತಿ ಬಲ್ಲಾಳ್ ನೇತೃತ್ವದಲ್ಲಿ ಆಭರಣ ಮೇಳೆ ಆಯೋಜನೆಗೊಂಡಿದೆ.ಆಕರ್ಷಕ ಆಭರಣಗಳನ್ನ ನೋಡಿ ನಿಮಗಿಷ್ಟವಾದದ್ದನ್ನ ಕೊಂಡುಕೊಳ್ಳಿ ಎಂದರು.

ನಂತರ ಜಯಂತಿ ಬಲ್ಲಾಳ್ ಹಾಗೂ ಗಣೇಶ್ ಮಾತನಾಡಿ ಆಭರಣ ಪ್ರೀಯರಿಗೆ ಅತಿ ಕಡಿಮೆ ಬೆಲೆಯಲ್ಲಿ ವಜ್ರ,ಚಿನ್ನ ದೊರೆಯುತ್ತಿದೆ.ಈ ಮೇಳದಲ್ಲಿ ವಿಶೇಷವಾಗಿ ಕ್ಯುರೇಟೆಡ್ ಫ್ಯಾಶನ್ ಶೋ ಆಯೋಜಿಸಲಾಗಿದೆ.ಗ್ರಾಹಕರು 3 ದಿನದ ಮೇಳಕ್ಕೆ ಆಗಮಿಸುವಂತೆ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಪವಿತ್ರಚಂದ್ರು, ನೇಹಾ, ಹೇಮಾಮಾಲಿನಿ, ಮೇಘನಾ ಬೆಳವಾಡಿ, ರಶ್ಮೀ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *