ಕೊರೊನಾ ಸಂದರ್ಭದಲ್ಲಿ ಪ್ರಾಣದ ಹಂಗು ತೊರೆದು ಕಾರ್ಯ ನಿರ್ವಹಿಸಿದ ಆರಕ್ಷಕರು, ವೈದ್ಯ ವೃಂದ, ಪತ್ರಕರ್ತರಿಗೆ “ಸೇವಾ ರತ್ನ ಪ್ರಶಸ್ತಿ”

ಮೈಸೂರು:25 ನವೆಂಬರ್ 2021

ನಂದಿನಿ

ಕೊರೊನಾ ಸಂದರ್ಭದಲ್ಲಿ ನಿರಂತರವಾಗಿ ಪ್ರಾಣದ ಹಂಗು ತೊರೆದು ಕಾರ್ಯ ನಿರ್ವಹಿಸಿದ ಆರಕ್ಷಕರು, ವೈದ್ಯ ವೃಂದ, ಪತ್ರಕರ್ತರಿಗೆ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕುವೆಂಪು ನಗರದಲ್ಲಿ ಸಮರ್ಪಣೆ ಸೇವಾ ಟ್ರಸ್ಟ್ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಸಿಂಹ ಸೇನೆ ವತಿಯಿಂದ ಮತ್ತು ಮೂರನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಸಮರ್ಪಣಾ ಸೇವಾ ಟ್ರಸ್ಟ್ ನ ಅಧ್ಯಕ್ಷರಾದ ಲಯನ್ ಕುಮಾರ್ ಅವರ ನೇತೃತ್ವದಲ್ಲಿ ಕೊರೊನಾ ವಾರಿಯರ್ಸ್ ಗೆ ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಾದ ಎಸ್. ಟಿ. ರವಿಕುಮಾರ್,ಕಾವಲುಪಡೆ ಉಪಾಧ್ಯಕ್ಷ ರವೀಗೌಡ, ಸರಸ್ವತಿ ಮಾದಯ್ಯ, ಮೀನಾಕ್ಷಿ, ಚೈತ್ರಾ, ಮೈಸೂರು ಮಿಮಿಕ್ರಿ ಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *