ಕುವೆಂಪುನಗರದಲ್ಲಿ ಮನೆ ಮನೆಗೆ ತೆರಳಿ ಬಿಜೆಪಿ ಅಭ್ಯರ್ಥಿ ಯದುವೀರ್ ಪರ ಮೇಯರ್ ಶಿವಕುಮಾರ್ ಮತಯಾಚನೆ

ನಂದಿನಿ ಮೈಸೂರು

ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಪರ ಮಾಜಿ ಮೇಯರ್ ಶಿವಕುಮಾರ್ ಕುವೆಂಪುನಗರದಲ್ಲಿ ಮನೆ ಮನೆಗೆ ತೆರಳಿ ಮತಯಾಚಿಸಿದರು.

ಈ ವೇಳೆ ಮಾತನಾಡಿದ ಅವರು, ಯದುವೀರ್ ಒಡೆಯರ್ ಬಗ್ಗೆ ಜನತೆಯಲ್ಲಿ ಅಪಾರ ಗೌರವವಿದ್ದು, ಧನ್ಯತಾ ಭಾವದಿಂದ ಅವರಿಗೆ ಮತ ನೀಡಲಿದ್ದಾರೆ.
ಪ್ರಧಾನಿ ಮೋದಿ ಯವರು ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂದು ಮತದಾರರೆ ಬಯಸಿದ್ದಾರೆ. ಕಳೆದ ಹತ್ತು ವರ್ಷದ ಪ್ರಧಾನಿಗಳ ಆಡಳಿತವನ್ನು ಮೆಚ್ಚಿದ್ದಾರೆ. ಜಗತ್ತೆ ಭಾರತವನ್ನು ನೋಡುವಂತಾಗಿದೆ. ಇಡೀ ವಿಶ್ವವೇ ಮೋದಿ ಯವರ ಮಧ್ಯಸ್ಥಿಕೆ ಬಯಸಿದೆ.
ಈ ಬಾರಿ ಯದುವೀರ್ ಅವರು ಸಂಸದರಾಗುವುದು ಖಚಿತ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜನ್ಮದಿನವಾದ ಜೂ.4 ರಂದೇ ಚುನಾವಣೆ ಫಲಿತಾಂಶ ಇದ್ದು, ಯದುವೀರ್ ಒಡೆಯರ್ ಅವರನ್ನು ಗೆಲ್ಲಿಸುವ ಮೂಲಕ ನಾಲ್ವಡಿ ಯವರನ್ನು ಸ್ಮರಿಸಲು ಸಂಕಲ್ಪ ಮಾಡಲಾಗಿದೆ ಎಂದರು.

Leave a Reply

Your email address will not be published. Required fields are marked *