ಸ್ವತಃ ಮ್ಯಾನ್ ಹೋಲ್ ಮುಚ್ಚಳ ಮುಚ್ಚಿ ಸಾಮಾಜಿಕ ಕಳಕಳಿ ಮೆರೆದ ಮಾವಿ ರಾಮಪ್ರಸಾದ್

ಮೈಸೂರು:17 ನವೆಂಬರ್ 2021

ನಂದಿನಿ

ಮಾನಂದವಾಡಿ ರಸ್ತೆಯ NIE ಕಾಲೇಜು ಬಾಯ್ಸ್ ಹಾಸ್ಟೆಲ್ ಹತ್ತಿರ ಮಳೆಯಿಂದಾಗಿ ರಸ್ತೆಯಲ್ಲಿ ಮ್ಯಾನ್ ಹೋಲ್ ಮುಚ್ಚಳ ತೆರೆದಿತ್ತು , ಮುಂದಾಗುವ ಅನಾಹುತವನ್ನು ಕಂಡ ವಾಹನ ಸವಾರರಾದ ಕಿರಣ್, ಸಂದೇಶ್, ಶಿವಕುಮಾರ್ ರವರು ನಗರಪಾಲಿಕೆ ಸದಸ್ಯ ಮಾ ವಿ ರಾಮಪ್ರಸಾದ್ ಅವರಿಗೆ ಮಾಹಿತಿ ತಿಳಿಸಿದ್ದಾರೆ. , ತಮ್ಮ ವಾರ್ಡ್ ಅಲ್ಲದಿದ್ದರೂ ತಕ್ಷಣ ಸ್ಪಂದಿಸಿ ಸ್ಥಳಕ್ಕಾಗಮಿಸಿದ ಮ ವಿ ರಾಮಪ್ರಸಾದ್ ನಗರಪಾಲಿಕೆಗೆ ದೂರನ್ನು ನೀಡಿದರು.

ಪಾಲಿಕೆ ಸಿಬ್ಬಂದಿ ಬರುವದರೊಳಗಾಗಿ ತಾವೇ ನಿಂತು ಮ್ಯಾನ್ ಹೋಲ್ ಮುಚ್ಚಳವನ್ನು ಮುಚ್ಚಿ ಸಾಮಾಜಿಕ ಕಳಕಳಿಯನ್ನು ಮೆರೆದಿದ್ದಾರೆ.

Leave a Reply

Your email address will not be published. Required fields are marked *