ಸರ್ಕಾರಿ ಶಾಲಾ ಮಕ್ಕಳಿಗೆ ಆಸರೆಯಾಗಿರುವ ಕಲಿಸು ಫೌಂಡೇಶನ್

ನಂದಿನಿ ಮೈಸೂರು

*ಸರ್ಕಾರಿ ಶಾಲಾ ಮಕ್ಕಳಿಗೆ ಆಸರೆಯಾಗಿರುವ ಕಲಿಸು ಫೌಂಡೇಶನ್*

ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿಯುವ ಸಂಧರ್ಭದಲ್ಲಿ ಸರ್ಕಾರಿ ಶಾಲೆಗಳನ್ನು ಸಧೃಡಗೊಳಿಸಲು ,
ಶಿಕ್ಷಣ ಕ್ಷೇತ್ರದಲ್ಲಿ ಬಲಗೊಳಿಸಲು ಟೊಂಕ‌ಕಟ್ಟಿ‌ ನಿಂತಿದೆ ಕಲಿಸು ಫೌಂಡೇಶನ್.

ಕೀಳನಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗಾಗಿ ಕಲಿಸು ಫೌಂಡೇಶನ್ 90 ನೇ ಲೈಬ್ರರಿ ಮತ್ತು ಪ್ಲೇ ಏರಿಯಾವನ್ನು ತೆರೆದಿದ್ದು ಸುತ್ತೂರು ಶ್ರೀ ಕ್ಷೇತ್ರದ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿಗಳು ಮೈಸೂರು ಮಹಾರಾಜರು ಹಾಗೂ ಕಲಿಸು ಫೌಂಡೇಶನ್ ನ ರಾಯಭಾರಿಯಾಗಿರುವ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ರವರು ಉದ್ಘಾಟಿಸಿದರು. ಇದಕ್ಕೂ ಮುನ್ನ ಅವರನ್ನು ಪೂರ್ಣ ಕುಂಭಾದೊಂದಿಗೆ ಸ್ವಾಗತಿಸಲಾಯಿತು.

ಕಲಿಸು ಫೌಂಡೇಶನ್ ಸಂಸ್ಥೆಯು ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಒದಗಿಸುವ ಮೂಲಕ ಅವರ ಸಾಮರ್ಥ್ಯವನ್ನು ಉತ್ತಮಗೊಳಿಸಲು ಆಟದ ಜೊತೆಗೆ ಗ್ರಂಥಾಲಯಗಳನ್ನು ನಿರ್ಮಿಸುವ ಮೂಲಕ ಅವರ ಜೀವನವನ್ನು ಪರಿವರ್ತಿಸುವ ಪ್ರಯುತ್ನ ಮಾಡುತ್ತ ಬಂದಿದೆ.

ಇದೆ ಮೊದಲ ಬಾರಿಗೆ ಸುತ್ತೂರು ಸ್ವಾಮೀಜಿ ಮತ್ತು ಯದುವೀರ್ ಕೃಷ್ಣ ದತ್ತ ಒಡೆಯರ್ ರವರನ್ನ ಒಟ್ಟಿಗೆ ಸರ್ಕಾರಿ ಶಾಲೆಗೆ ಭೇಟಿ ನೀಡಿದ್ದು ಅವರನ್ನು ಕಂಡು ಇಡೀ ಗ್ರಾಮದ ಜನರು, ವಿದ್ಯಾರ್ಥಿಗಳು ಪುಳಕಿತರಾದರು.

ಸುಮಾರು 1500ಕ್ಕೂ ಹೆಚ್ಚು ಅಕ್ಕಪಕ್ಕದ ಗ್ರಾಮಗಳ ಜನರು ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಸ್ವಾಮೀಜಿಯವರಿಂದ ಆಶೀರ್ವಾದ ಪಡೆದರು.

ಇದೆ ಸಂಧರ್ಭದಲ್ಲಿ ವರುಣ ಕ್ಷೇತ್ರದ ಮಾಜಿ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ, ಗುಂಡ್ಲುಪೇಟೆ ಶಾಸಕ ಗಣೇಶ್ ಪ್ರಸಾದ್, ಕಲಿಸು ಫೌಂಡೇಶನ್ ಸಂಸ್ಥಾಪಕ ನಿಖಿಲೇಶ್ ಎಂ ಎಂ, ಡಿಡಿಪಿಐ, ರಾಮಚಂದ್ರರಾಜೇ ಅರಸು , ಹೆಚ್ಚುವರಿ ಪ್ರಾದೇಶಿಕ ಆಯುಕ್ತರಾದ ಶಿವರಾಜು ಪಿ , ಗಿರೀಶ್ ರಾಮಸ್ವಾಮಿ, ಕೆ.ಎಸ್ .ಶಿವರಾಮ್, ವರುಣ ಮಹೇಶ್ , ಸೇರಿದಂತೆ ಹಲವರು ಉದ್ಘಾಟನಾ ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಉತ್ತಮ ಭಾರತಕ್ಕೆ ಶಿಕ್ಷಣವೊಂದೇ ದಾರಿ ಮತ್ತು ಈ ಬದಲಾವಣೆಯನ್ನು ತರುವಲ್ಲಿ ಸರ್ಕಾರದೊಂದಿಗೆ ಕೈಜೋಡಿಸಿ ಕಾರ್ಯ ರೂಪಿಸುತ್ತ ಬಂದಿರುವ ಕಲಿಸು ಫೌಂಡೇಶನ್ ಕಾರ್ಯ ನಿಜಕ್ಕೂ ಶ್ಲಾಘನೀಯ.

Leave a Reply

Your email address will not be published. Required fields are marked *