ಪೋಲೀಸ್ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಿದ ಗೃಹ ಸಚಿವ

 

ಮೈಸೂರು:28 ಸೆಪ್ಟೆಂಬರ್ 2021

ನ@ದಿನಿ

ಗೃಹ ಸಚಿವ ಆರಗ ಜ್ಞಾನೇಂದ್ರರವರು ಇಂದು ಮೈಸೂರಿನ  ಮೈಸೂರು ನಗರ ಪೊಲೀಸ್ ಆಯುಕ್ತರ ಕಛೇರಿಗೆ ಭೇಟಿ ನೀಡಿ ಪರಿಶೀಲನಾ ಸಭೆ ನಡೆಸಿದರು.

ಗೃಹ ಸಚಿವರು ಆಗಮಿಸುತ್ತಿದ್ದಂತೆ ಪೋಲಿಸರು ಗೌರವ ಸಲ್ಲಿಸಿದರು. ನಂತರ ಕಾನೂನು ಸುವ್ಯವಸ್ಥೆ, ದಸರಾ ಮಹೋತ್ಸವಕ್ಕೆ ಕಟ್ಟೆಚ್ಚರ,ಬಿಗಿ ಬಂದೋಬಸ್ತ್ ಕುರಿತು ಪೋಲಿಸ್ ಅಧಿಕಾರಿಗಳ ಜೊತೆ ಪರಿಶೀಲನಾ ಸಭೆ ನಡೆಸಿದರು.

ಸಭೆಯಲ್ಲಿ ಪೋಲಿಸ್ ಆಯುಕ್ತರಾದ ಡಾ.ಚಂದ್ರಗುಪ್ತ,ಡಿಸಿಪಿಗಳಾದ ಪ್ರದೀಪ್ ಗುಂಟಿ,ಗೀತಾ ಪ್ರಸನ್ನ ಸೇರಿದಂತೆ ಪೋಲಿಸ್ ಅಧಿಕಾರಿಗಳು ಭಾಗಿಯಾಗಿದ್ದರು. 

Leave a Reply

Your email address will not be published. Required fields are marked *