ಮೇ ೧೯ ರಿಂದ ಮೇ ೨೮ ರವರೆಗೆ ಗುಜರಾತ್ ಕರಕುಶಲ ಉತ್ಸವ

ನಂದಿನಿ ಮೈಸೂರು

ಜೆಎಸ್‌ಎಸ್ ಮೈಸೂರು ಅರ್ಬನ್ ಹಾತ್‌ನಲ್ಲಿ ಇದೇ ಮೇ ೧೯ ರಿಂದ ಮೇ ೨೮ ರವರೆಗೆ ಗುಜರಾತ್ ಕರಕುಶಲ ಉತ್ಸವ ಆಯೋಜಿಸಲಾಗುತ್ತಿದೆ ಎಂದು ಜೆಎಸ್‌ಎಸ್ ಸಂಸ್ಥೆಯ ರೇವಣ್ಣ ಸ್ವಾಮಿ ತಿಳಿಸಿದರು.

ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,
ಕರಕುಶಲ ಉತ್ಪನ್ನಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಈ ಉತ್ಸವ ಆಯೋಜಿಸಲಾಗಿದೆ. ಈ ಬಾರಿಯ ಗುಜರಾಜ್ ಕರಕುಶಲ ಮೇಳ ವಿಭಿನ್ನವಾಗಿರುತ್ತದೆ.ಮೊದಲೆಲ್ಲ ರಾಜ್ಯದ ಕೆಲವು ಜಿಲ್ಲೆಯ ಕರಕುಶಲ ಕರ್ಮಿಗಳು ಮಾತ್ರ ಈ ಉತ್ಸವದಲ್ಲಿ ಭಾಗವಹಿಸುತಿದ್ದರು.ಆದರೆ ಇಂದು ರಾಜ್ಯದ ಬಹುತೇಕ ಎಲ್ಲಾ ಜಿಲ್ಲೆಗಳ ಕುಶಲಕರ್ಮಿಗಳು ಆಗಮಿಸುತಿದ್ದು, ಸುಮಾರು ೮೦ ಅಧಿಕ ಮಳಿಗೆಗಳು ಇರಲಿವೆ.
ಉತ್ಸವದಲ್ಲಿ ಕರಕುಶಲ ಕರ್ಮಿಗಳು ತಯಾರಿಸಿದ ಪಟೋಲ ಸೀರೆಗಳು, ಬಾಂದಿನಿ ಸೀರೆಗಳು ಕಸೂತಿ ಮಾಡಿದ ಬೆಡ್ ಶೀಟ್ಗಳು, ಟವಲ್ ಗಳು, ಕುಶನ್ ಕವರ್‌ಗಳು, ಕುರ್ತಿ ಹಾಗೂ ಕೈಮಗ್ಗ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ.
ಮೇ. ೧೯ ರಂದು ಸಂಜೆ ನಾಲ್ಕಕ್ಕೆ ಉದ್ಘಾಟನೆಯನ್ನು ರಾಜ್ಯ ಖಜಾನೆ ಆಯುಕ್ತರಾದ ಡಾ. ಅರುಂಧತಿ ಚಂದ್ರಶೇಖರ್ ನೆರವೇರಿಸಲಿದ್ದಾರೆ. ಜೆಎಸ್‌ಎಸ್ ವಿದ್ಯಾಪೀಠದ ಕಾರ್ಯದರ್ಶಿ ಎಸ್.ಪಿ ಮಂಜುನಾಥ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಮೈಸೂರು ರೈಲ್ವೆ ವಿಭಾಗದ ವ್ಯವಸ್ಥಾಪಕರಾದ ಶಿಲ್ಪಿ ಅಗರ್ವಾಲ್ ಆಗಮಿಸಲಿದ್ದಾರೆ ಎಂದು ತಿಳಿಸಿದರು.

ಡಾ.ಸ್ನೇಹಲ್ ಮಕ್ವಾನ್, ಶಿವನಂಜಸ್ವಾಮಿ, ದಯಾಳ್, ಡಿ.ಎಂ. ಶುಕ್ಲ ಇದ್ದರು.

Leave a Reply

Your email address will not be published. Required fields are marked *