ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆಗೆ ಮುಂದುವರಿದ ಭಾಗ

 

ದಾ ರಾ ಮಹೇಶ್

ತಾಲ್ಲೂಕು ಹಾಗೂ ಗ್ರಾಮ ಪಂಚಾಯಿತಿಗೆ ಸೇರಿದ ಸುಮಾರು ೫೫ ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, ಬಹಳಷ್ಟು‌ ಅರ್ಜಿಗಳು ಆಶ್ರಯ ಮನೆ, ವಸತಿ, ವಿದ್ಯುತ್ ಹಾಗೂ ಉದ್ಯೋಗಕ್ಕೆ ಸಂಬಂಧಿಸಿದ್ದಾಗಿರುತ್ತದೆ.
ಅದರಲ್ಲಿ ಆಶ್ರಯ ಮನೆಗಳನ್ನು ನೀಡಲು ಯಾರಿಗೆ ಅತ್ಯಾವಶ್ಯಕವಾಗಿದೆಯೋ ಅವರನ್ನು ಗುರುತಿಸಿ ಮುಂದಿನ ಸಾಮಾನ್ಯ ಸಭೆಯಲ್ಲಿ ತೀರ್ಮಾನ ಕೈಗೊಳ್ಳುವಂತೆ‌ ಪಂಚಾಯಿತಿ ಅಭಿವೃದ್ಧಿಗೆ ತಿಳಿಸಿದರು.

ಇದರೊಂದಿಗೆ ಇತ್ತೀಚೆಗಷ್ಟೇ ನರೇಗಾ ಯೋಜನೆಯಲ್ಲಿ ಅತ್ಯುನ್ನತ ಕೆಲಸ ಮಾಡಿಸಿರುವ ಹುಣಸೂರಿನ ಉಯ್ಯಿಗೊಂಡನಹಳ್ಳಿ ಗ್ರಾಮ ಪಂಚಾಯಿತಿಗೆ ರಾಜ್ಯ ಮಟ್ಟದ ಪ್ರಶಸ್ತಿ ದೊರೆತಿದ್ದು, ಇಲ್ಲಿನ ಗ್ರಾಮಸ್ಥರು, ನರೇಗಾ ಯೋಜನೆಯಲ್ಲಿರುವ ಅಭಿವೃದ್ಧಿ ಕೆಲಸಗಳಾದ ಸಮುದಾಯ ಹಾಗೂ ವೈಯಕ್ತಿಕ ಕಾಮಗಾರಿಗಳನ್ನು ಮಾಡಿಸಿಕೊಳ್ಳುವ ಮೂಲಕ ಗ್ರಾಮವನ್ನು ಅಭಿವೃದ್ಧಿ ಪಥದತ್ತ ಸಾಗುವಂತೆ ಮಾಡಿರಿ ಎಂದು ಕರೆ ನೀಡಿದರು.
ಅಲ್ಲದೇ ಮಾರ್ಚ್ ೧೫ರಿಂದ‌ಜೂನ್ ಅಂತ್ಯದವರೆಗೂ ನರೇಗಾ ಯೋಜನೆಯಲ್ಲಿ ದುಡಿಯೋಣ‌ ಬಾ ಅಭಿಯಾನ ಪ್ರಾರಂಭಗೊಂಡಿದ್ದು, ಈ ಬೇಸಿಗೆ ಸಂದರ್ಭದಲ್ಲಿ ನೂರು ದಿನಗಳನ್ನು ಪಡೆದುಕೊಳ್ಳುವ ಮೂಲಕ‌ ಆರ್ಥಿಕವಾಗಿ ಸ್ವಾವಲಂಬರಾಗಲೂ ಈ ಅಭಿಯಾನ ಸಹಕಾರಿಯಾಗಲಿದೆ. ಹಾಗಾಗಿ ಗ್ರಾಮಸ್ಥರು,
ಗ್ರಾಮ ಪಂಚಾಯಿತಿಯಿಂದ ಅನುಷ್ಟಾನಗೊಳ್ಳುವ ಹಾಗೂ ಇಲಾಖೆಗಳಾದ ರೇಷ್ಮೆ, ಅರಣ್ಯ, ಕೃಷಿ ಹಾಗೂ ತೋಟಗಾರಿಕೆಯಿಂದ ದೊರೆಯುವ‌ ಸೌಲಭ್ಯಗಳನ್ನು ಪಡೆದುಕೊಂಡು ಬೇಸಿಗೆ ಕಾಲದ ಅಭಿಯಾನದಲ್ಲಿ ಪಾಲ್ಗೊಂಡು ಯೋಜನೆಯ ಸದುಪಯೋಗ ಪಡೆದುಕೊಳ್ಳುವಂತೆ ಮಾಹಿತಿ ನೀಡಿದರು.

ಶಾಸಕರಾದ ಹೆಚ್.ಪಿ.ಮಂಜುನಾಥ್ ಅವರು ಮಾತನಾಡಿ, ಸಾರ್ವಜನಿಕರಿಗೆ ಸರ್ಕಾರದ ಯೋಜನೆಗಳು ಯಾವ ರೀತಿಯಾಗಿ ತಲುಪಿದೆ ಎಂಬುದನ್ನು ತಿಳಿಯುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಗ್ರಾಮದ ಜನರು ಯೋಜನೆಗಳ ಸೌಲಭ್ಯವನ್ನು ಪಡೆದುಕೊಳ್ಳಬೇಕು. ಗ್ರಾಮದ ಅಭಿವೃದ್ಧಿಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯೊಂದಿಗೆ ಗ್ರಾಮದ ಜನರು ಸಹಕಾರ ನೀಡಬೇಕು. ಆಗ ಮಾತ್ರ ಗ್ರಾಮದ ಅಭಿವೃದ್ಧಿ ಸಾಧ್ಯ ಎಂದು ತಿಳಿಸಿದರು.

Leave a Reply

Your email address will not be published. Required fields are marked *