ಒಗ್ಗಟ್ಟು ಒಡೆಯೋದು ಸುಲಭ ಜೋಡಿಸುವುದು ತುಂಬ ಕಷ್ಟ: ಎನ್‌ಎಂ.ನವೀನ್ ಕುಮಾರ್

ಮೈಸೂರು:1 ಅಕ್ಟೋಬರ್ 2022

ನಂದಿನಿ ಮೈಸೂರು

ಭಾರತ್ ಜೋಡೋ ಪಾದಯಾತ್ರೆ ಪ್ರಚಾರ ವಾಹನ ಕೆ.ಆರ್.ಕ್ಷೇತ್ರದ ಸುತ್ತಾ ಮುತ್ತಾ ಸಂಚರಿಸುತ್ತಿದೆ.

ಮೈಸೂರಿನ ಅಗ್ರಹಾರ ವೃತ್ತದಲ್ಲಿ ಕೆ.ಆರ್.ಕ್ಷೇತ್ರದ ಎನ್‌ಎಂ.ನವೀನ್ ಕುಮಾರ್ ಭಾರತ್ ಜೋಡೋ ಪಾದಯಾತ್ರೆ ಯಶಸ್ವಿಗೊಳಿಸುವಂತೆ ಸಾರ್ವಜನಿಕರಿಗೆ ಮನವಿ ಮಾಡಿದರು.

ಒಗ್ಗಟ್ಟು ಒಡೆಯೋದು ಸುಲಭ ಜೋಡಿಸುವುದು ತುಂಬ ಕಷ್ಟ. ಭಾರತ್ ಜೋಡೋ ಮೂಲಕ ನಾವೆಲ್ಲರೂ ಒಂದೇ ಎಂದು ಕನ್ಯಾಕುಮಾರಿಯಿಂದ ಜಮ್ಮು ಕಾಶ್ಮೀರದವರೆಗೂ ರಾಹುಲ್ ಗಾಂಧಿ ಪಾದಯಾತ್ರೆ ಕೈಗೊಂಡಿದ್ದಾರೆ

ಅ.2 ರಂದು ಸಂಜೆ 5:30 ರ ಸುಮಾರಿಗೆ ರಾಹುಲ್ ಗಾಂಧಿರವರು ಮೈಸೂರಿನ ಎಪಿಎಂಸಿ ಟೋಲ್ ಗೇಟ್ ರಿಂಗ್ ರಸ್ತೆಗೆ ಆಗಮಿಸುತ್ತಿದ್ದಾರೆ.
ಎಲ್ಲಾ ನಾಗರೀಕರು ಪಾದಯಾತ್ರೆ ಕಾರ್ಯಕ್ರಮದಲ್ಲಿ ಭಾಗಿಯಾಗುವಂತೆ
ತಿಳಿಸಿದರು.

Leave a Reply

Your email address will not be published. Required fields are marked *