ಅಹಲ್ಯ ಬಾಯಿ ಹೋಳ್ಕರ್ ರವರ ಪ್ರತಿಮೆ ಅನಾವರಣ ಮಾಡಿದ ಪ್ರಧಾನ ಮಂತ್ರಿ ಮೋದಿ ರವರಿಗೆ ಜೋಗಿ ಮಂಜು ಅಭಿನಂದನೆ

ಮೈಸೂರು:14 ಡಿಸೆಂಬರ್ 2021

ನಂದಿನಿ 

ಕಾಶಿ ವಿಶ್ವನಾಥ ನ ಸನ್ನಿಧಿಯಲ್ಲಿ ರಾಜ ಮಾತೆ ಅಹಲ್ಯ ಬಾಯಿ ಹೋಳ್ಕರ್ ರವರ ಪ್ರತಿಮೆ ಅನಾವರಣ ಮಾಡಿದ ಪ್ರಧಾನ ಮಂತ್ರಿ ಮೋದಿ ರವರಿಗೆ ಜೋಗಿ ಮಂಜು ಅಭಿನಂದನೆ ತಿಳಿಸಿದ್ದಾರೆ.

17 ನೇ ಶತಮಾನದಲ್ಲಿ ಕಾಶಿ ಯನ್ನು ಪುನರ್ ನಿರ್ಮಾಣ ಮಾಡಿದ ರಾಜ ಮಾತೆ ಅಹಲ್ಯ ಬಾಯಿ ಹೋಳ್ಕರ್ ರವರಿಗೆ ಭಾರತ ಸರ್ಕಾರದ ಮಾನ್ಯ ಪ್ರಧಾನ ಮಂತ್ರಿಯಾದ ಶ್ರೀ ನರೇಂದ್ರ ಮೋದಿಯವರು ಕಾರಿಡಾರ್ ನಲ್ಲಿ ಅವರ ಪ್ರತಿಮೆ ಯನ್ನು ಅನಾವರಣ ಮಾಡಿರುವುದನ್ನು ಭಾರತೀಯ ಜನತಾ ಪಾರ್ಟಿಯ ಮೈಸೂರುಮಹಾ ನಗರ ಹಿಂದುಳಿದ ವರ್ಗಗಳ ಮೋರ್ಚಾ ನಗರ ಅಧ್ಯಕ್ಷರಾದ ಜೋಗಿಮಂಜು ಸ್ವಾಗತಿಸಿದ್ದಾರೆ.

ಆದರೆ ನಿನ್ನೆ ಮಾಜಿ ಸಚಿವರಾದ ಅಡಗೂರು ಎಚ್.ವಿಶ್ವನಾಥ್ ರವರು ಪತ್ರಿಕಾಗೋಷ್ಠಿಯಲ್ಲಿ ಅಹಲ್ಯ ಬಾಯಿ ಹೋಳ್ಕರ್ ರವರನ್ನು ಪ್ರಧಾನಿ ನರೇಂದ್ರ ಮೋದಿ ಯವರು ಮರೆತಿದ್ದಾರೆ ಹಾಗೂ ಇತಿಹಾಸ ತಿರುಚಿರುತ್ತಾರೆ ಎಂದು ತಿಳಿಸಿದ್ದಾರೆ,
ಆದರೆ ಮಾಜಿ ಸಚಿವರಾದ ವಿಶ್ವ ನಾಥ್ ರವರಿಗೆ ಸ್ವಲ್ಪ ಮಾಹಿತಿ ಕೊರತೆಇರುವುದು ಎದ್ದು ಕಾಣುತ್ತಿರುತ್ತದೆ.
ಕಾಶಿ ದೇವಾಲಯದ ಕಾರಿಡಾರಿನಲ್ಲಿ ಬೃಹತ್ತಾದ ಅಹಲ್ಯ ಬಾಯಿ ಹೋಳ್ಕರ್ ರವರ ಪ್ರತಿಮೆಯನ್ನು ನಿರ್ಮಾಣ ಮಾಡಿಸಿ ಅದರ ಲೋಕಾರ್ಪಣೆ ಮಾಡಿರುವುದು ಪ್ರಧಾನಿ ನರೇಂದ್ರ ಮೋದಿ ಯವರು,
ಮೋದಿ ಯವರು ಅಹಲ್ಯಾ ಬಾಯಿ ಹೋಳ್ಕರ್ ರವರನ್ನು ಪೂಜ್ಯ ಸ್ಥಾನದಲ್ಲಿ ನೋಡುತ್ತಿದ್ದಾರೆ,ಕಳೆದ ಹತ್ತು ವರ್ಷದಲ್ಲಿ ಇದ್ದ ಕಾಶಿಯಲ್ಲಿ ಗಂಗೆ ಮಲಿನ ವಾಗಿದ್ದಳು ಆದರೆ ಇಂದು ಸಾವಿರಾರು ಕೋಟಿ ವೆಚ್ಚದಲ್ಲಿ ಸ್ವಛತೆ ಯನ್ನು ಕಾಣುತ್ತಿದೆ ಹಾಗೆ ವಾರಣಾಸಿಯಲ್ಲಿ ಇದ್ದ ಇಕ್ಕೆಲ ರಸ್ತೆ ಗಳು ಮತ್ತು ದೇವಾಲಯವು ಸಂಪೂರ್ಣ ಅಭಿವೃದ್ಧಿ ಪತದಲ್ಲಿರುತ್ತದೆ,

ವಿಶ್ವನಾಥ ರವರು ಹೇಳಿದಂತೆ ಇತಿಹಾಸ ತಿರುಚುವ ಕೆಲಸ ವನ್ನು ನರೇಂದ್ರ ಮೋದಿ ಯವರು ಮಾಡಿದ್ದಾರೆ ಎಂದು ಹೇಳಿರುವುದನ್ನು ಖಂಡಿಸುತ್ತೇವೆ,

ಇಡಿ ವಿಶ್ವವೇ ವಾರಣಾಸಿ ಯಲ್ಲಿರುವ ಕಾಶಿ ವಿಶ್ವನಾಥ ನ ಕಡೆ ನೋಡುವಾಗ ಇತಿಹಾಸ ತಿರುಚುವ ಪ್ರಮೇಯ ವೇ ಇಲ್ಲ. ಈ ರೀತಿ ಇಲ್ಲ ಸಲ್ಲದ ವಿಚಾರವನ್ನು ಜನರಿಗೆ ತಿಳಿಸುವುದು ಸರಿಯಲ್ಲ, ಜನ ಸಾಮಾನ್ಯರಿಗೆ ಸರಿಯಾದ ಮಾಹಿತಿಯನ್ನು ನೀಡಬೇಕಾಗಿ ಮೈಸೂರು ನಗರದ ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷರಾದ ಜೋಗಿಮಂಜು ತಿಳಿಸಿದ್ದಾರೆ.

Leave a Reply

Your email address will not be published. Required fields are marked *