14 ಸೈಟ್ ವಾಪಸಾತಿ; ರಾಜೀನಾಮೆ ನೀಡಿ ಸಿಬಿಐ ತನಿಖೆ ಮಾಡಿ ಪಾದಯಾತ್ರೆಗೇ ಹೋರಾಟ ನಿಲ್ಲುವುದಿಲ್ಲ: ಆರ್.ಅಶೋಕ್

ನಂದಿನಿ ಮೈಸೂರು

14 ಸೈಟ್ ವಾಪಸಾತಿ; ರಾಜೀನಾಮೆ ನೀಡಿ ಸಿಬಿಐ ತನಿಖೆ ಮಾಡಿ
ಪಾದಯಾತ್ರೆಗೇ ಹೋರಾಟ ನಿಲ್ಲುವುದಿಲ್ಲ: ಆರ್.ಅಶೋಕ್

 

ಬೆಂಗಳೂರು: ಸಿದ್ದರಾಮಯ್ಯನವರು ತಾವು ಕ್ಲೀನ್ ಎಂದು ತೋರಿಸಿಕೊಳ್ಳಲು 14 ಸೈಟ್‌ಗಳನ್ನು ಸರಕಾರಕ್ಕೆ ಕೊಡಬೇಕು. ಅವರು ಶೇ 50-50 ದಾರಿ ತೋರಿಸಿದ ಬಳಿಕ ಸುಮಾರು 400- 500 ನಿವೇಶನಗಳನ್ನು ಬೇರೆಯವರು ಮಂಜೂರು ಮಾಡಿಸಿಕೊಂಡಿದ್ದಾರೆ. ಇಷ್ಟನ್ನೂ ವಾಪಸ್ ಮೂಡಕ್ಕೆ ಕೊಡಬೇಕು. ಇವಿಷ್ಟನ್ನೂ ಸಿಬಿಐ ತನಿಖೆಗೆ ಕೊಡಬೇಕು ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಆಗ್ರಹಿಸಿದರು.
ಮೈಸೂರಿನ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರು ಮೂಡದಲ್ಲಿ ನಿವೇಶನಕ್ಕಾಗಿ ಅರ್ಜಿ ಹಾಕಿದ 86 ಸಾವಿರ ಮಧ್ಯಮ ವರ್ಗ, ಬಡವರಲ್ಲಿ ಅರ್ಹರಿಗೆ ನಿವೇಶನ ಕೊಡಬೇಕು. ಈ ತನಿಖೆ ಮುಗಿಯುವವರೆಗೆ ಸಿದ್ದರಾಮಯ್ಯನವರು ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿದರು.

ಪಾದಯಾತ್ರೆಗೇ ಹೋರಾಟ ನಿಲ್ಲುವುದಿಲ್ಲ. ರಾಜಭವನಕ್ಕೆ ಶಾಸಕರು, ವಿಧಾನಪರಿಷತ್ ಸದಸ್ಯರನ್ನು ಕರೆದುಕೊಂಡು ಹೋಗಿ ರಾಜ್ಯಪಾಲರಿಗೆ ಮನವಿ ಕೊಟ್ಟಿದ್ದೇವೆ. ಸಿಬಿಐ ತನಿಖೆ ಮತ್ತು ಮುಖ್ಯಮಂತ್ರಿಗಳ ರಾಜೀನಾಮೆಗೆ ಕೋರಿದ್ದೇವೆ. ಈಗ ರಾಜಭವನದಿಂದ ನೋಟಿಸ್ ಕೂಡ ಕೊಟ್ಟಿದ್ದಾರೆ. ಅದಕ್ಕೆ ಸಿದ್ದರಾಮಯ್ಯನವರು ದೊಡ್ಡ ಉತ್ತರ ಕೊಟ್ಟಿದ್ದಾಗಿ ಪತ್ರಿಕೆಗಳಲ್ಲಿ ಓದಿದ್ದೇನೆ ಎಂದು ವಿವರಿಸಿದರು.
60 ಪುಟದ ಉತ್ತರವಾದರೂ ಕೊಡಲಿ; 120 ಪುಟದ್ದಾದರೂ ಇರಲಿ. ಗವರ್ನರ್ ನೋಟಿಸ್ ಕೊಟ್ಟಿದ್ದಕ್ಕೇ ಇಷ್ಟು ಭಯ ಬಿದ್ದಿದ್ದೀರಲ್ಲವೇ? ಅನುಮತಿ ಕೊಟ್ಟರೆ ನಿಮ್ಮ ಕಥೆ ಏನು ಎಂದು ಪ್ರಶ್ನಿಸಿದರು. ಈಗಾಗಲೇ ನಾವು ಎಲ್ಲೆಲ್ಲಿ ಹೋಗುತ್ತೇವೋ ಅಲ್ಲೆಲ್ಲ ಕ್ಲಿಯರೆನ್ಸ್ ಮಾಡುತ್ತ ಹೋಗುತ್ತಿದ್ದೀರಿ ಎಂದು ವ್ಯಂಗ್ಯವಾಡಿದರು.

ಡಿಕೆಶಿ ಹೃದಯದಲ್ಲಿ ಒಂದು, ತೋರಿಕೆಗೆ ಇನ್ನೊಂದು..
ಪಾದಯಾತ್ರೆಗೆ ಇಷ್ಟೊಂದು ಕ್ಲಿಯರೆನ್ಸ್ ಕೊಡುವುದಾದರೆ ಡಿ.ಕೆ.ಶಿವಕುಮಾರ್‌ಗೆ ಹೃದಯದಲ್ಲಿ ಒಂದು ಇರಬೇಕು. ತೋರಿಕೆಗೆ ಇನ್ನೊಂದು ಇರಬೇಕು. ಹೃದಯದಲ್ಲಿ ಸಿದ್ದರಾಮಯ್ಯ ಬೇಗ ಕುರ್ಚಿ ಖಾಲಿ ಮಾಡಲೆಂದು ಇರಬೇಕು. ಮೇಲ್ಗಡೆ ಸಿದ್ದರಾಮಯ್ಯನವರ ಜೊತೆ ಬಂಡೆಯ ಥರ ನಿಂತುಕೊಳ್ಳುವುದಾಗಿ ಹೇಳುತ್ತಿರಬೇಕು ಎಂದು ತಿಳಿಸಿದರು.
ಹೊರಗಡೆ ಬಂಡೆ, ಅಂತರಾತ್ಮದಲ್ಲಿ ಇನ್ನೊಂದು ಎಂದು ಪ್ರಶ್ನೆಗೆ ಉತ್ತರ ಕೊಟ್ಟರು. ಡಿಸೆಂಬರ್ ಒಳಗೆ ಮುಖ್ಯಮಂತ್ರಿ ಆದರೆ ಆಗುತ್ತಿ; ಇಲ್ಲವಾದರೆ ಇಲ್ಲ ಎಂದು ಅಜ್ಜಯ್ಯ ಹೇಳಿದ್ದಾರಂತೆ; ಯೋಗ ಬಂದಿದ್ದಾಗಿ ಶಿವಕುಮಾರ್ ಅವರು ಮಾಧ್ಯಮಗಳಿಗೂ ಹೇಳಿದ್ದಾರೆ. ಯಾರೋ ಜ್ಯೋತಿಷಿಗಳೂ ಹೇಳಿದ್ದಾರಂತೆ ಎಂದು ವಿವರಿಸಿದರು. ಡಿ.ಕೆ.ಶಿವಕುಮಾರ್ ಅವರ ಸ್ಟಾಂಡರ್ಡ್ ಒಳಗೊಂದು, ಹೊರಗೊಂದು ಎಂದು ಇದರಿಂದ ಗೊತ್ತಾಗುತ್ತದೆ ಎಂದರು.

ಕಾAಗ್ರೆಸ್, ಬಿಜೆಪಿ ಅಥವಾ ಜೆಡಿಎಸ್‌ನ ಯಾರಿಗೇ ಅಕ್ರಮವಾಗಿ ನಿವೇಶನ ಮಂಜೂರಾಗಿದ್ದರೂ ಅವರಿಗೆ ಶಿಕ್ಷೆ ಆಗಲಿ ಎಂದು ಅವರು ಪ್ರಶ್ನೆಗೆ ಉತ್ತರ ಕೊಟ್ಟರು. ಈ ವಿಷÀಯವನ್ನು ತಾವು ಅಸೆಂಬ್ಲಿಯಲ್ಲೇ ಹೇಳಿರುವುದಾಗಿ ಸ್ಪಷ್ಟಪಡಿಸಿದರು.
ಬೇರೆಯವರ ಅಕ್ರಮ- ಸಮಸ್ಯೆಗಳಿದ್ದರೆ ಮುಖ್ಯಮಂತ್ರಿಗಳು ಗವರ್ನರ್‌ಗೆ ಪತ್ರ ಬರೆದು ಸ್ಪಷ್ಟನೆ ಪಡೆಯಬಹುದು. ಅವರು ಚಾಣಾಕ್ಷರಿದ್ದಾರೆ. ಇಲ್ಲವೇ ಅವನ್ನು ಕೋರ್ಟಿನಲ್ಲೂ ಪ್ರಶ್ನಿಸಬಹುದು ಎಂದು ಇನ್ನೊಂದು ಪ್ರಶ್ನೆಗೆ ಉತ್ತರಿಸಿದರು. ಗವರ್ನರ್ ನಮ್ಮ ಪಾರ್ಟಿಯವರಲ್ಲ ಎಂದು ನುಡಿದರು.
2014ರಲ್ಲಿ 50-50 ಅನುಪಾತದಲ್ಲಿ ನಿವೇಶನ ಹಂಚಿಕೆಗೆÀ ಆದೇಶ ಆಗಿತ್ತು. ಈ ಸಂದರ್ಭದಲ್ಲಿ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ ಆಗಿದ್ದರು ಎಂದು ಗಮನ ಸೆಳೆದರು. ಕೆಂಪಣ್ಣ ಆಯೋಗದ ಪಾಡಿನಂತೆ ಈ ಆಯೋಗದ ವಿಚಾರವೂ ಆಗಲಿದೆ ಎಂದು ತಿಳಿಸಿದರು.

ರಾಜೀನಾಮೆ ಪಡೆಯುವ ವರೆಗೂ ಬಿಡುವುದಿಲ್ಲ..
ನಾವು ಯಾವುದೇ ಕಾರಣಕ್ಕೂ ಜಗ್ಗಲ್ಲ; ಬಗ್ಗಲ್ಲ, ಅವರ ರಾಜೀನಾಮೆ ಪಡೆಯುವ ವರೆಗೂ ಬಿಡಲ್ಲ ಎಂದು ಆರ್.ಅಶೋಕ್ ಅವರು ಸ್ಪಷ್ಟಧ್ವನಿಯಲ್ಲಿ ತಿಳಿಸಿದರು.
ನಿಮ್ಮದು ತಪ್ಪಿಲ್ಲದಿದ್ದರೆ ಸಿಬಿಐಗೆ ಕೊಡಿ; ಅವರು ಹೇಗೆ ತಪ್ಪು ಹುಡುಕಲು ಸಾಧ್ಯ ಎಂದು ಪ್ರಶ್ನೆಯನ್ನು ಮುಂದಿಟ್ಟರು. ನಮ್ಮ ಪಾದಯಾತ್ರೆಯನ್ನು ಪೊಲೀಸರು ತಡೆಯುತ್ತಿದ್ದಾರಂತೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಸಿಬಿಐ ಕೇಂದ್ರದ್ದಾದರೆ, ಲೋಕಾಯುಕ್ತಕ್ಕೆ ಕೊಡಿ ಎಂದು ಒತ್ತಾಯಿಸಿದರು.

ಗೊಂದಲಗಳ ಕುರಿತು ನಮ್ಮ ಪಾರ್ಟಿ ವರಿಷ್ಠರ ಗಮನಕ್ಕೆ ತಂದಿದ್ದೇನೆ. ಬಿಜೆಪಿ- ಜೆಡಿಎಸ್ ಸಮನ್ವಯದ ಸಂದರ್ಭದಲ್ಲಿ ಇಂಥ ಸಣ್ಣಪುಟ್ಟ ಸಮಸ್ಯೆಗಳ ಬರುತ್ತದೆ; ಮುಂದೆಯೂ ಬರಬಹುದು. ಇದೆಲ್ಲವನ್ನೂ ಪರಿಹರಿಸಿಕೊಳ್ಳುತ್ತೇವೆ. ಮುಂದೆ ಚುನಾವಣೆಗೆ ಒಟ್ಟಿಗೇ ಹೋಗಬೇಕಾದ ಕಾರಣ ಇದೆಲ್ಲವನ್ನೂ ಸರಿ ಮಾಡಿಕೊಂಡು ಹೋಗಬೇಕಿದೆ. ಹೋಗಿಯೇ ಹೋಗಲಿದ್ದೇವೆ; ಒಂದಾಗಿ ಹೋಗಲಿದ್ದೇವೆ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರ ಕೊಟ್ಟರು.


ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ವಿಧಾನಸಭಾ ವಿರೋಧ ಪಕ್ಷದ ಉಪ ನಾಯಕ ಅರವಿಂದ ಬೆಲ್ಲದ, ಶಾಸಕರಾದ ಡಾ.ಅಶ್ವಥ್ ನಾರಾಯಣ, ಶ್ರೀವತ್ಸ, ಬಿಜೆಪಿ ರಾಜ್ಯ ಎಸ್. ಟಿ. ಮೋರ್ಚಾ ಅಧ್ಯಕ್ಷ ಬಂಗಾರು ಹನುಮಂತು, ಮೈಸೂರಿನ ಮಾಜಿ ಮೇಯರ್ ಶಿವಕುಮಾರ್ ಮುಂತಾದವರು ಇದ್ದರು.

Leave a Reply

Your email address will not be published. Required fields are marked *