ನರೇಗಾ ಯೋಜನೆ ಸದುಪಯೋಗ ಎಲ್ಲರೂ ಪಡೆಯಿರಿ ನರೇಗಾ ಮಾಹಿತಿ ಪ್ರಚಾರ ರಥಕ್ಕೆ ಚಾಲನೆ

 

ಸರಗೂರು:2 ಫೆಬ್ರವರಿ 2022

ನಂದಿನಿ ಮೈಸೂರು

ಗ್ರಾಮೀಣ ಪ್ರದೇಶದ ಜನರಿಗೆ ನರೇಗಾ ಯೋಜನೆಯು ಸಂಜೀವಿನಿ ಇದ್ದಂತೆ. ಎಲ್ಲರೂ ತಮ್ಮ ತಮ್ಮ ಗ್ರಾಮ ಪಂಚಾಯತಿಗಳಲ್ಲಿ ನರೇಗಾ ಮಾಹಿತಿ ಪಡೆದು ನರೇಗಾ ಯೋಜನೆಯ ಸದುಪಯೋಗ ಪಡೆಯಿರಿ ಎಂದು ಸರಗೂರು ತಾಲೂಕು ಪಂಚಾಯತಿ ಸಹಾಯಕ‌ ನಿರ್ದೇಶಕ ಪರಮೇಶ್ ಹೇಳಿದರು.

ಮೈಸೂರು ಜಿಲ್ಲೆ ಸರಗೂರು ತಾಲ್ಲೂಕು ಪಂಚಾಯಿತಿಯಲ್ಲಿ ಐಇಸಿ ಚಟುವಟಿಕೆ ಯೋಜನೆಯಡಿ ಮಹಾತ್ಮಗಾಂಧಿ ನರೇಗಾ ಯೋಜನೆಯ ಮಾಹಿತಿಯನ್ನೊಳಗೊಂಡ ನರೇಗಾ ಮಾಹಿತಿ ಪ್ರಚಾರ ರಥಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ನರೇಗಾ ಯೋಜನೆಯಿಂದ ಇಂದು ಗ್ರಾಮೀಣ ಪ್ರದೇಶದ ಜನರಿಗೆ 100 ದಿನಗಳ‌ ಉದ್ಯೋಗ ದೊರಿಯುತ್ತಿದ್ದು,‌ಇನ್ನೂ ಎಷ್ಟೋ ಜನರಿಗೆ ಈ ಮಾಹಿತಿ ತಿಳಿದಿಲ್ಲ, ಇದನ್ನು‌ ಹೆಚ್ಚು ‌ಪ್ರಚಾರ ಮಾಡಲು ನರೇಗಾ ಮಾಹಿತಿ ಪ್ರಚಾರ ರಥವು ಎಲ್ಲಾ ಗ್ರಾಮ ಪಂಚಾಯತಿ ವ್ಯಾಪ್ತಿಯ ಹಳ್ಳಿಗಳಿಗೆ ಬರಲಿದ್ದು, ಇದರಿಂದ ಜನರಿಗೆ ಹೆಚ್ಚು ನರೇಗಾ ಯೋಜನೆ ಉಪಯೋಗ ಪಡೆದುಕೊಳ್ಳುವುದು ತಿಳಿಯಲಿದೆ ಎಂದು ಹೇಳಿದರು.

ತಾಲೂಕು ನರೇಗಾ ಐಇಸಿ ಸಂಯೋಜಕ ರವಿ ಮಾತನಾಡಿ, ನರೇಗಾ ಯೋಜನೆಯಡಿ ಹಲವಾರು ವ್ಯಯಕ್ತಿಕ ಕಾಮಗಾರಿಗಳು ಹಾಗೂ ಸಮುದಾಯ ಕಾಮಗಾರಿಗಳು ಬರಲಿದ್ದು, ಪ್ರತಿ ಕುಟುಂಬಕ್ಕೂ ನೂರು ದಿನಗಳ‌ ಉದ್ಯೋಗ ಖಾತ್ರಿ ಇದೆ. ಮಹಿಳೆ ಪುರಷ ತಾರತಮ್ಯವಿಲ್ಲದೇ ದಿನಕ್ಕೆ‌189 ರೂ. ಸಮಾನ ಕೂಲಿ ದೊರೆಯಲಿದ್ದು, ಪ್ರತಿಯೊಬ್ಬರು ಈ ಯೋಜನೆಯನ್ನು ಅದುಪಯೋಗಪಡಿಸಿಕೊಳ್ಳಿ ಎಂದು‌ ಹೇಳಿದರು.

ಸರಗೂರು ತಾಲೂಕು ಪಂಚಾಯತಿ ಆವರಣದಲ್ಲಿ ನರೇಗಾ ಮಾಹಿತಿ‌ ಪ್ರಚಾರ ರಥಕ್ಕೆ ತಾಲೂಕು‌ ಪಂಚಾಯತಿ ಸಹಾಯಕ ನಿರ್ದೇಶಕ ಪರಮೇಶ್ ಅವರು ಚಾಲನೆ‌ ನೀಡಿದರು. ಈ ಸಂದರ್ಭದಲ್ಲಿ ನರೇಗಾ ಐಇಸಿ ಸಂಯೋಜಕ ರವಿ ಸೇರಿದಂತೆ ತಾಲೂಕು ಪಂಚಾಯತಿ ಸಿಬ್ಬಂದಿ ವರ್ಗದವರು ಇದ್ದರು.

Leave a Reply

Your email address will not be published. Required fields are marked *