ಕರ್ನಾಟಕ ಇಂಜಿನಿಯರಿಂಗ್‌ ಸೇವಾ ಸಂಘ ಮೈಸೂರು ಜಿಲ್ಲಾ ಘಟಕದಿಂದ ವಾರ್ಷಿಕ ಮಹಾಸಭೆ ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಬಡ್ತಿ / ನಿವೃತ್ತ ಇಂಜಿನಿಯರ್‌ಗಳಿಗೆ ಸನ್ಮಾನ

ನಂದಿನಿ ಮೈಸೂರು

ಕರ್ನಾಟಕ ಇಂಜಿನಿಯರಿಂಗ್‌ ಸೇವಾ ಸಂಘ ಮೈಸೂರು ಜಿಲ್ಲಾ ಘಟಕದಿಂದ ವಾರ್ಷಿಕ ಮಹಾಸಭೆ ಹಾಗೂ
ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಬಡ್ತಿ / ನಿವೃತ್ತ ಇಂಜಿನಿಯರ್‌ಗಳಿಗೆ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.

ಮೈಸೂರಿನ ಖಾಸಗಿ ಹೋಟೆಲ್ ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ವೇದಿಕೆ ಗಣ್ಯರು ಉದ್ಘಾಟಿಸಿದರು.

ಅತೀ ಹೆಚ್ಚು ಅಂಕ ಪಡೆದ
ಪ್ರತಿಭಾ ವಿದ್ಯಾರ್ಥಿಗಳಿಗೆ ಪುರಸ್ಕಾರ ,
ಬಡ್ತಿ ಹಾಗೂ ನಿವೃತ್ತ ಇಂಜಿನಿಯರ್‌ಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.

ಸಂಘದ ಅಧ್ಯಕ್ಷ ವಿ. ಸಿದ್ದರಾಜು ಮಾತನಾಡಿ ಕರ್ನಾಟಕ ಇಂಜಿನಿಯರಿಂಗ್‌ ಸೇವಾ ಸಂಘ ಮೈಸೂರು ಜಿಲ್ಲಾ ಘಟಕದಿಂದ ಪ್ರತಿ ವರ್ಷ
ವಾರ್ಷಿಕ ಮಹಾಸಭೆ ನಡೆಸುತ್ತಾ ಬಂದಿದ್ದು ಸಂಘದಲ್ಲಿ 175 ಮಂದಿ ಸದಸ್ಯರಿದ್ದಾರೆ. ಪ್ರತಿ ವರ್ಷದಂತೆ ಇಂದು ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ
ಅತೀ ಹೆಚ್ಚು ಅಂಕ ಪಡೆದ
20 ಜನ ಪ್ರತಿಭಾ ವಿದ್ಯಾರ್ಥಿಗಳಿಗೆ ಪುರಸ್ಕಾರ ಮಾಡಲಾಯಿತು.ಬಡ್ತಿ ಹೊಂದಿದಿದ 8 ಜನರಿಗೆ ಹಾಗೂ17 ಮಂದಿ ನಿವೃತ್ತ ಇಂಜಿನಿಯರ್‌ಗಳಿಗೆ ಸನ್ಮಾನಿಸಲಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಸಂಘದ ಸದಸ್ಯರು ಜೊತೆಗಿದ್ದರು.

Leave a Reply

Your email address will not be published. Required fields are marked *