ರಾಜ್ಯ ವಾಲ್ಮೀಕಿ ಶಿಕ್ಷಕರ ಸಂಘದಿಂದ ಕನ್ನಡ ರಾಜ್ಯೋತ್ಸವ, ಮತ್ತು ಕನಕದಾಸ ಜಯಂತಿ ಅಭಿನಂದನಾ ಕಾರ್ಯಕ್ರಮ

ನಂದಿನಿ ಮೈಸೂರು

ರಾಜ್ಯ ವಾಲ್ಮೀಕಿ ಶಿಕ್ಷಕರ ಸಂಘದಿಂದ ಕನ್ನಡ ರಾಜ್ಯೋತ್ಸವ, ಮತ್ತು ಕನಕದಾಸ ಜಯಂತಿಯ ಪ್ರಯುಕ್ತ ಸಮಾಜ ಸೇವಕರಿಗೆ ಹಾಗೂ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಅಭಿನಂದಿಸಲಾಯಿತು.

ರಾಜ್ಯ ಅಧ್ಯಕ್ಷರಾದ ನಾಗಲಿಂಗಪ್ಪ ರವರು ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ
ಮೈಸೂರು ತಾಲೂಕು ಉತ್ತಮ ಶಿಕ್ಷಕ ಪ್ರಶಸ್ತಿ ಕೆಂಚೇಗೌಡ, ಸಮಾಜ ಸೇವೆಗೆ ಕಳಲೆ ಕಾಳನಾಯಕ ಹಾಗೂ ಕನ್ನಡಲ್ಲಿ 125 ಕ್ಕೆ 125 ಅಂಕ ಪಡೆದ ಮಕ್ಕಳನ್ನು ಅಭಿನಂದಿಸಿದರು.

ಕಾರ್ಯಕ್ರಮದಲ್ಲಿ ಸರ್ಕಾರಿ ನೌಕರ ಸಂಘದ ಜಿಲ್ಲಾ ಕಾರ್ಯದರ್ಶಿ ರೇವಣ್ಣ, ಹಿರಿಯ ಉಪಾಧ್ಯಕ್ಷರಾದ ಮಾಲಂಗಿ ಸುರೇಶ್ ,ಮೈಸೂರು ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಖಜಾಂಚಿ ಮಹಾದೇವ ರವರು ಕನ್ನಡ ಚಳುವಳಿ ಹೋರಾಟಗಾರರು ಶಿವಶಂಕರ್ ರವರು ಮೈಸೂರು ತಾಲೂಕು ಪ್ರಾಥಮಿಕ ಶಾಲೆ ಶಿಕ್ಷಕರ ಸಂಘದ ನಿರ್ದೇಶಕರಾದ ಕೆಂಚೇಗೌಡ ಮತ್ತು ಮಹೇಶ್ ಹೋಬಳಿ ಕಾರ್ಯದರ್ಶಿ ಶ್ರೀ ಗೋಪಾಲ್ ಕೃಷ್ಣ ಸದಾಶಿವಪ್ಪ ರವರು ಶಿಕ್ಷಕ ವೃಂದದವರು ಹಾಜರಿದ್ದರು.

Leave a Reply

Your email address will not be published. Required fields are marked *