5ನೇ ವರ್ಷದ “ಜೋಡಿ ಎತ್ತಿನ‌ಗಾಡಿ ಓಟದ ಸ್ಪರ್ಧೆ”

ಸಿದ್ದಲಿಂಗಪುರ :21 ಫೆಬ್ರವರಿ  2022

ನಂದಿನಿ ಮೈಸೂರು

ಚಂದ್ರಮೌಳೇಶ್ವರ ಯುವಕ ರೈತ ಕನ್ನಡ ಸಂಘದ ವತಿಯಿಂದ ಇಂದು ಮೈಸೂರು ಸಿದ್ದಲಿಂಗಪುರ ಗ್ರಾಮದ ಶ್ರೀ ಚಂದ್ರಮೌಳೇಶ್ವರ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ 5ನೇ ವರ್ಷದ “ಜೋಡಿ ಎತ್ತಿನ‌ಗಾಡಿ ಓಟದ ಸ್ಪರ್ಧೆ”ಗೆ ಚಾಮುಂಡೇಶ್ವರಿ ಕ್ಷೇತ್ರದ ಶಾಸಕರಾದ ಜಿ ಟಿ ದೇವೇಗೌಡರು ಹಾಗೂ ಮೈಸೂರು ದಸರಾ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷರಾದ ಹೇಮಂತ್ ಕುಮಾರ್ ಗೌಡ ಅವರ ಜೊತೆಗೂಡಿ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಸಿದ್ದಲಿಂಗಪುರದ ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ಕೆ. ಶಕುಂತಲ ಸೋಮಣ್ಣ, ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷರಾದ ಮರೀಗೌಡ, ಸಮಿತಿಯ ಸದಸ್ಯರು ಸೇರಿದಂತೆ ಹಲವರು ಉಪಸ್ಥಿತರಿದ್ದರು.

 

Leave a Reply

Your email address will not be published. Required fields are marked *