ಸಂಸದರಿಂದ ಕನ್ನಡದ ಪ್ರಮಾಣ ವಚನಕ್ಕೆ ಗುರುಪಾದಸ್ವಾಮಿ ಮೆಚ್ಚುಗೆ

ನಂದಿನಿ ಮೈಸೂರು

*ಸಂಸದರಿಂದ ಕನ್ನಡದ ಪ್ರಮಾಣ ವಚನಕ್ಕೆ ಗುರುಪಾದಸ್ವಾಮಿ ಮೆಚ್ಚುಗೆ*

ಮೈಸೂರು: ಕರ್ನಾಟಕದಿಂದ ಸಂಸತ್ತಿಗೆ ಆಯ್ಕೆಯಾಗಿರುವ ಸಂಸದರೆಲ್ಲರೂ ಮಾತೃಭಾಷೆ ಕನ್ನಡದಲ್ಲಿಯೇ ಪ್ರಮಾಣವಚನ ಸ್ವೀಕರಿಸುತ್ತಿರುವುದು ಕನ್ನಡ ಭಾಷೆಯ ಅಭಿಮಾನ ಮತ್ತು ಗೌರವವನ್ನು ದಿಲ್ಲಿಯ ಸಂಸತ್ ಭವನದಲ್ಲಿ ಎತ್ತಿ ಹಿಡಿದಿದ್ದಾರೆ ಎಂದು ಬಿಜೆಪಿ ಮುಖಂಡರಾದ
ಗುರುಪಾದಸ್ವಾಮಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ
ಮೈಸೂರು ಮತ್ತು ಕೊಡಗು ಲೋಕಸಭಾ ಸದಸ್ಯರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರು,
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸಂಸದ ಡಾ.ಮಂಜುನಾಥ್ ಹಾಗೂ ಕೇಂದ್ರ ಸಚಿವರಾದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ವಿ.ಸೋಮಣ್ಣ ಮೊದಲಾದ ಹಿರಿಯ ಸಂಸದರು ಕೂಡ ತಮ್ಮ ನೂತನ ಆಯ್ಕೆಯ ಪ್ರಮಾಣ ವಚನವನ್ನು ಕನ್ನಡ ಭಾಷೆಯಲ್ಲಿಯೇ ಅನುವಾದ ಮಾಡಿಕೊಂಡು ಸಂಸತ್ ನಲ್ಲಿ ಪ್ರತಿಜ್ಞಾವಿಧಿ ಸ್ವೀಕರಿಸಿದ್ದು, ಹೆಮ್ಮೆ ತರುವ ವಿಚಾರ. ಕರ್ನಾಟಕದಿಂದ ಆಯ್ಕೆಯಾಗಿರುವ ಎಲ್ಲಾ ಸಂಸದರು ಕನ್ನಡ ಭಾಷೆ ಮತ್ತು ಕನ್ನಡ ಪ್ರಾಂತ್ಯಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತನ್ನು ನೀಡಬೇಕು ಎಂದು ಮನವಿ ಮಾಡಿದ್ದಾರೆ. ನೂತನ ಸಂಸದರ ಕನ್ನಡ ಪ್ರಮಾಣ ವಚನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದೆ.

 

Leave a Reply

Your email address will not be published. Required fields are marked *