ಮಳೆ ಬರದೇ ಇದ್ದರೂ ಬೇಸಿಗೆಯಲ್ಲಿ ಭತ್ತ ಬೆಳೆದು ಸೈ ಎನ್ನಿಸಿಕೊಂಡ ರೈತ ಸುತ್ತೂರು ಲಿಂಗರಾಜು

ನಂದಿನಿ ಮೈಸೂರು

ಕೈ ಕೆಸರಾದರೇ ಬಾಯಿ ಮೊಸರು ಎಂಬ ಗಾದೆಯಂತೆ ವರ್ಷದಲ್ಲಿ ಯಾವ ಕಾಲದಲ್ಲಾದರೂ ಮಳೆ ಬರದೇ ಇದ್ದರೂ ಬೇಸಿಗೆ ಕಾಲದಲ್ಲಿ ಉತ್ತಮ ಫಸಲು ಬೆಳೆಯಬಹುದು ಎಂಬುದನ್ನ ರೈತ ತೋರಿಸಿಕೊಟ್ಟಿದ್ದಾನೆ.

ಭತ್ತ ಕಟಾವೂ ಮಾಡಿಸುತ್ತಿರುವ ಈ ರೈತನ ಹೆಸರು ಸುತ್ತೂರು ಲಿಂಗರಾಜು.ಇವರು ಬೇಸಿಗೆ ಬೆಳೆಯಲ್ಲಿ ಉತ್ತಮ ಫಸಲು ಹಾಗೂ ಉತ್ತಮ ಇಳುವರಿ ಪಡೆದಿದ್ದಾರೆ.

ಕಬಿನಿ ನದಿ ವ್ಯಾಪ್ತಿಯಲ್ಲಿರುವ ಸುತ್ತೂರು,ಹುಲ್ಲಳ್ಳಿ,ರಾಂಪುರ ನಾಲೆಗಳಲ್ಲಿ ಈ ಬಾರಿ ಬೇಸಿಗೆ ಬೆಳೆ ಬೆಳೆಯಲಾಗಿತ್ತು. ರೈತರು ಬೆಳೆದ ಭತ್ತದ ಫಸಲಿಗೆ ಕೀಟ ಬಾದೆಯಿಂದ ಯಾವ ರೋಗವು ಕಾಣದೆ ಉತ್ತಮ ಇಳುವರಿ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ರಾಜ್ಯದಲ್ಲಿ ಈ ಬಾರಿ ಕಡಿಮೆ ಮಳೆಯಾದರೂ ಭತ್ತದ ಹಾಗೂ ಇತರ ಫಸಲಿಗೆ ಯಾವ ರೋಗವು ಕಾಣದೆ.ಉತ್ತಮ ಬೆಳೆ ಬಂದಿದೆ.ಇಂದು ಕಟಾವು ಮಾಡಿ ಒಕ್ಕಣೆ ಮಾಡುತ್ತಿದ್ದೇವೆ.
ಅಲ್ಲದೆ ಭತ್ತದ ಬೆಳೆಗೆ ಉತ್ತಮ ಬೆಲೆಯೂ ಇದೆ.1 ಕ್ವಿಂಟಾಲ್ ಭಕ್ತಕ್ಕೆ 2700. ರೂಗಳು ಸಿಗುತ್ತದೆ ಎಂದು ಸಂತಸ ಹಂಚಿಕೊಂಡಿದ್ದಾರೆ.

 

Leave a Reply

Your email address will not be published. Required fields are marked *