ಕನ್ನಡ ರಾಜ್ಯೋತ್ಸವ ಪ್ರಯುಕ್ತ ಆರಕ್ಷಕ ರತ್ನ ಮತ್ತು ಆಪತ್ಬಾಂಧವ ಪ್ರಶಸ್ತಿ ಪ್ರದಾನ

ನಂದಿನಿ ಮೈಸೂರು

ಕರ್ನಾಟಕ ರಾಜ್ಯ ಜನಜಾಗೃತಿ ವೇದಿಕೆ ವತಿಯಿಂದ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಆರಕ್ಷಕ ರತ್ನ ಮತ್ತು ಆಪತ್ಬಾಂಧವ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಅಸ್ಮತ್ ಷರೀಫ್ ನೇತೃತ್ವದಲ್ಲಿ ಆಯೋಜಿಸಲಾಗಿತ್ತು.

ಮೈಸೂರಿನ ಟೌನ್ ಹಾಲ್ ನಲ್ಲಿ ನಡೆದ ಕಾರ್ಯಕ್ರಮವನ್ನು ಭುವನೇಶ್ವರಿ ತಾಯಿ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು .

ಕಾರ್ಯಕ್ರಮದಲ್ಲಿ ಮೈಸೂರು ಭಾಗದ ಹಲವು ಪೋಲಿಸ್ ಸಿಬ್ಬಂದಿಗಳಿಗೆ ಆರಕ್ಷಕ ರತ್ನ ಮತ್ತು ಕೆಲವು ಮಾಧ್ಯಮ ಮಿತ್ರರಿಗೆ ಕೋವಿಡ್ ೧೯ ರ ಸಂಧರ್ಭದಲ್ಲಿ ಮಾಡಿದಂತ ಸೇವೆ ಪರಿಗಣಿಸೆ ಆಪತ್ಬಾಂಧವ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಎಸ್ ಡಿ ಪಿ ಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್, ಜಿಲ್ಲಾಧ್ಯಕ್ಷ ರಫತ್ ವುಲ್ಲಾ ಖಾನ್ , ಅಜೀಜ್ ವುಲ್ಲ ( ಅಜ್ಜು), ಮೊಹಮದ್ ಶರೀಪ್, ಶಫಿ ಅಹಮದ್, ಮುತಾಯಿರ್ ಪಾಷಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *