ಆನೆಯ ಮೆರವಣಿಗೆ ಮೂಲಕ ವಿಶ್ವ ಹಾಲು ದಿನ ಆಚರಣೆ

ನಂದಿನಿ ಮನುಪ್ರಸಾದ್ ನಾಯಕ್

 ಮೈಮುಲ್‌ ನಿಂದ ವಿಶ್ವ ಹಾಲು ದಿನದ ಅಂಗವಾಗಿ “ಹೈನೋದ್ಯಮದ ಪ್ರಾಬಲ್ಯ ಸಂಭ್ರಮಿಸೋಣ” ಎಂಬ ದ್ಯೇಯದೊಂದಿಗೆ ಹಾಲಿನ ಉತ್ಪನ್ನಗಳು ಮತ್ತು ಹಾಲಿನ ಮಹತ್ವ, ಅದರ ಅನೂಕೂಲಗಳ ಬಗ್ಗೆ ಕುರಿತು ಪ್ರಚಾರ ಮಾಡುವ ಮೆರವಣಿಗೆಯಲ್ಲಿ ಹಾಲಿನ ಅಂಬಾರಿ ಆಕರ್ಷಣೆಯಾಗಿತ್ತು.

ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ( ಮೈಮುಲ್)ದಿಂದ ಮೊಟ್ಟ ಮೊದಲ ಬಾರಿಗೆ ಆನೆಯ ಮೆರವಣಿಗೆ ಮೂಲಕ ವಿಶ್ವ ಹಾಲು ದಿನವನ್ನು ಆಚರಿಸಿ ಗಮನ ಸೆಳೆದರು.

ಹಾಲಿನ ಉತ್ಪನ್ನಗಳ ಚಿತ್ರವನ್ನು ಹೊತ್ತ ಆನೆಯ ನಡಿಗೆ ಕಂಡು ಒಂದು ಕ್ಷಣ ಜಂಬೂ ಸವಾರಿ ಬಂದೇ ಬಿಟ್ಟಿತೇ ಎಂದು ತಿರುಗಿ ನೋಡುತ್ತಿದ್ದ ಸಾರ್ವಜನಿಕರ ಕೂತೂಹಲದ ಕೇಂದ್ರ ಬಿಂದುವಾಯಿತು.

ಮೊಟ್ಟ ಮೊದಲ ಬಾರಿಗೆ ತುಮಕೂರು ಜಿಲ್ಲೆಯ ನೊಣವಿನ ಕೆರೆಯ ಕಾಡು ಸಿದ್ದೇಶ್ವರ ಮಠದ ಸಾಕಾನೆಯ ಮೇಲೆ ನಂದಿನಿ ಹಾಲಿನ ಉತ್ಪನ್ನವನ್ನು ಮಾದರಿ ಅಂಬಾರಿ ಮೇಲೆ ಇರಿಸಿ ಆನೆಯೊಂದಿಗೆ ಮೆರವಣಿಗೆ ಮಾಡಲಾಯಿತು.
ಆಲನಹಳ್ಳಿ ಕೇಂದ್ರದಿಂದ ಹೊರಟ ಹಾಲಿನ ಅಂಬಾರಿಗೆ ಅಧ್ಯಕ್ಷ ಹಾಗೂ ಆಡಳಿತ ಮಂಡಳಿಯವರು ಬಲೂನ್‌ ಹಾರಿ ಬಿಡುವ ಮೂಲಕ ಚಾಲನೆ ನೀಡಿದರು. ಬಳಿಕ ಟೆರಿಷಿಯನ್‌ ಕಾಲೇಜು ವೃತ್ತ, ಬನ್ನೂರು ಮುಖ್ಯರಸ್ತೆಯ ನೂತನ ಜಿಲ್ಲಾಧಿಕಾರಿ ಕಚೇರಿ ಮಾರ್ಗವಾಗಿ ನಜರ್‌ಬಾದ್‌ನ ಶಿಕ್ಷಕರ ಭವನದವರೆಗೆ ಮೆರೆವಣಿಗೆ ನಡೆಯಿತು. ಈ ವೇಳೆ ರಸ್ತೆಯ ಅಕ್ಕಪಕ್ಕದಲ್ಲಿ ನಿಂತಿದ್ದ ಜನರೆಲ್ಲರೂ ಆನೆಯನ್ನು ವೀಕ್ಷಿಸಿ ಜಂಬೂ ಸವಾರಿ ನೆನಪಿಸಿಕೊಂಡರಲ್ಲದೆ, ವಿಶ್ವ ಹಾಲಿನ ದಿನದ ಬಗ್ಗೆಯೂ ಅರಿಯುವಂತಾಯಿತು. ಆ ಮೂಲಕ ಮೆರವಣಿಗೆ ಜಂಬೂ ಸವಾರಿ ಮಾದರಿಯಲ್ಲಿ ಎಲ್ಲರೂ ಸಂಭ್ರಮಿಸಿದರು.

ನಂದಿನಿ ಗ್ರಾಹಕರಿಗೆ ಶೇ.೧೫ರಷ್ಟು ರಿಯಾಯಿತಿಯಡಿಯಲ್ಲಿ ಹಲವು ಉತ್ಪನ್ನಗಳನ್ನು ನೀಡಲಾಗುತ್ತಿದ್ದು, ಇದರ ಸದುಪಯೋಗಪಡಿಸಿಕೊಳ್ಳುವಂತೆ ಮೈಸೂರು ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ( ಮೈಮುಲ್) ಅಧ್ಯಕ್ಷ ಆರ್.ಚೆಲುವರಾಜು‌ ಹೇಳಿದರು. ಮುಂದುವರೆದು ಮಾತನಾಡಿದ ಅವರು ವಿಶ್ವಸಂಸ್ಥೆ ೨೦೦೧ರಲ್ಲಿ ಆಹಾರ ಮತ್ತು ಕೃಷಿ ಸಂಸ್ಥೆಯಿಂದ ವಿಶ್ವ ಮಟ್ಟದಲ್ಲಿ ಹಾಲು ದಿನ ಆಚರಿಸುತ್ತಿದ್ದೇವೆ. ವಿಶ್ವ ಹಾಗೂ ರಾಜ್ಯದ ಮಟ್ಟದಲ್ಲಿ ಹಾಲಿನ ಉತ್ಪನ್ನಗಳು ತನ್ನದೇ ಆದ ರೀತಿಯಲ್ಲಿ ಪ್ರಚಾರ ಪಡೆದುಕೊಂಡಿವೆ. ನಂದಿನಿಯ ೬೮ ಉತ್ಪನ್ನಗಳ ಜತೆಗೆ ಅನೇಕ ಉತ್ಪನ್ನಗಳನ್ನು ಬಿಡುಗಡೆ ಮಾಡಿದ್ದೇವೆ. ಇಡೀ ದೇಶದಲ್ಲಿ ನಂದಿನಿ ಮಾರಾಟ ಮಾಡುತ್ತಿದ್ದೇವೆ. ದೇಶದಲ್ಲಿ ಎಷ್ಟು ಉತ್ಪನ್ನಗಳಿವೆಯೋ ಅದೆಲ್ಲದಕ್ಕಿಂತಲೂ ಕಡಿಮೆ ದರದಲ್ಲಿ ನಂದಿನಿ ಹಾಲಿನ ದರವಿದೆ. ಯಾವುದೇ ಅತಿಯಾದ ಲಾಭದ ಆಸೆ ಇಲ್ಲದೆ, ಗ್ರಾಹಕರು ಹಾಗೂ ರೈತರ ಹಿತದೃಷ್ಠಿಯಿಂದ ಕೆಎಂಎಫ್‌ ನಿಭಾಯಿಸಿಕೊಂಡು ಹೋಗುತ್ತಿದೆ ಎಂದರು.
ಎಲ್ಲರೂ ನಂದಿನಿ ಉತ್ಪನ್ನಗಳ ಬಳಕೆಗೆ ತಿಳಿಸಬೇಕು. ಇದಕ್ಕಾಗಿಯೇ ಇಂದಿನಿಂದ ಗ್ರಾಹಕರಿಗಾಗಿ ಮ್ಯಾಂಗೋಲಸ್ಸಿ, ರಾಗಿ ಅಂಬಲಿ, ಬಯೋಟಿಕ್‌ ಮಜ್ಜಿಗೆ, ಪ್ರೊ ಬಯೋಟಿಕ್‌ ಮೊಸರು, ಬರ್ಫಿ, ಸಮೃದ್ಧಿ ಹಾಲು, ಸಿಹಿ ಲಸ್ಸಿ, ಗೋಧಿ ಲಡ್ಡು ಇಷ್ಟು ಉತ್ಪನ್ನಗಳ ಮೇಲೆ ಶೇ.೧೫ರಷ್ಟು ರಿಯಾಯಿತಿ ನೀಡುತ್ತಿದ್ದೇವೆ. ಸಾರ್ವಜನಿಕರು ಹಾಗೂ ಗ್ರಾಹಕರು ಇದರ ಸದುಪಯೋಪಡಿಸಿಕೊಂಡು ಬೇರೆ ಉತ್ಪನ್ನಗಳ ಮೇಲೆ ವ್ಯಾಮೋಹ ಆಗದೇ ನಂದಿನಿ ಉತ್ಪನ್ನಗಳನ್ನೇ ಹೆಚ್ಚೆಚ್ಚು ಬಳಸಿ ಎಂದು ಕರೆ ನೀಡಿದರು.

ಜಿಲ್ಲಾ ಹಾಲು ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ. ವ್ಯವಸ್ಥಾಪಕ ನಿರ್ದೇಶಕರಾದ ಕೆ.ಎನ್.ಸುರೇಶ್ ನಾಯ್ಕ್ ಪ್ರಸ್ತಾವಿಕವಾಗಿ ಮಾತನಾಡಿ, ಈಗಾಗಲೇ ಮೈಮುಲ್‌ ರೈತ ಹಾಗೂ ಗ್ರಾಹಕ ಸ್ನೇಹಿಯಾಗಿ ಅನೇಕ ರಿಯಾಯಿತಿಗಳನ್ನು ಘೋಷಣೆ ಮಾಡಿದೆ. ಈಗ ನೂತನ ಉತ್ಪನ್ನಗಳನ್ನು ಸಹ ವಿಶ್ವ ಹಾಲು ದಿನದಂದು ಬಿಡುಗಡೆ ಮಾಡಿದ್ದು, ಗ್ರಾಹಕರು ಇದರ ಸದುಪಯೋಗಪಡಿಸಿಕೊಂಡು ರೈತರನ್ನು ಪ್ರೋತ್ಸಾಹಿಸುವ ಕೆಲಸ ಮಾಡಬೇಕೆಂದು ಹೇಳಿದರು.

ಕೆ.ಆರ್.ನಗರ ಪಶುವೈದ್ಯಾಧಿಕಾರಿ ಡಾ.ಮಂಜುನಾಥ್, ಅಪೊಲೋ ಆಸ್ಪತ್ರೆ ಪ್ರಸೂತಿ ತಜ್ಞೆ ಕವಿತಾ, ಕಾವೇರಿ‌ ಮಲ್ಟಿಸೆಷಾಲಿಟಿ ಆಸ್ಪತ್ರೆಯ ಪೌಷ್ಠಿಕ ತಜ್ಞೆ ಶಶಿಕಲಾ ಹಾಲಿನ ಮಹತ್ವ ಕುರಿತು ಮಾತನಾಡಿದರು.

ಮಕ್ಕಳ ತಜ್ಞ ಗೋಪಾಲಗೌಡ,
ನಿರ್ದೇಶಕರಾದ ಎ.ಟಿ.ಸೋಮಶೇಖರ್, ಕೆ.ಜಿ.ಮಹೇಶ್, ಕೆ.ಉಮಾಶಂಕರ್, ಸಿ.ಓಂ.ಪ್ರಕಾಶ್, ಕೆ.ಈರೇಗೌಡ, ದ್ರಾಕ್ಷಯಿಣಿ ಬಸವರಾಜಪ್ಪ, ಲೀಲಾ ಬಿ.ಕೆ.ನಾಗರಾಜು, ನೀಲಾಂಬಿಕೆ ಮಹೇಶ್ ಕುರಹಟ್ಟಿ, ಶಿವಗಾಮಿ ಷಣ್ಮುಗಂ, ಗುರುಸ್ವಾಮಿ ಬಿ, ಬಿ.ಎ. ಪ್ರಕಾಶ್, ಎ.ಬಿ. ಮಲ್ಲಿಕಾ ರವಿಕುಮಾರ್, ಪಶುಸಂಗೋಪನಾ ಇಲಾಖೆ ನಿರ್ದೇಶಕ ಮತ್ತು ಮೈಮುಲ್‌ ಪದನಿಮಿತ್ತ ನಿರ್ದೇಶಕ ಡಾ.ನಾಗರಾಜು, ಒಕ್ಕೂಟದ ಹಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಇನ್ನಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *