411ನೇ ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾಗೆ ಅಧಿಕೃತ ಚಾಲನೆ ನೀಡಿದ ಎಸ್.ಎಂ.ಕೃಷ್ಣ

 

ಮೈಸೂರು:7 ಅಕ್ಟೋಬರ್ 2021

ನ@ದಿನಿ

                    411 ನೇ ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾಗೆ ಇಂದು ಅಧಿಕೃತ ಚಾಲನೆ ದೊರೆಯಿತು.

                     9 ದಿನಗಳ ಕಾಲ ನಡೆಯುವ ಸಾಂಪ್ರದಾಯಕ ದಸರೆಗೆ ಚಾಮುಂಡಿ ಬೆಟ್ಟದಲ್ಲಿ ತುಲಾ ಲಗ್ನದಲ್ಲಿ ಭ್ರಾಮಿ ಅಲಂಕಾರದಲ್ಲಿ ಕುಳಿತಿದ್ದ ಚಾಮುಂಡೇಶ್ವರಿ ತಾಯಿಗೆ ಪುಷ್ಪಾರ್ಚನೆಗೈಯುವ ಮೂಲಕ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಮಾಜಿ ಸಚಿವ ಎಸ್​.ಎಂ.ಕೃಷ್ಣ ಚಾಲನೆ ನೀಡಿದರು.

                 ಉದ್ಘಾಟಕರಾದ ಎಸ್.ಎಂ.ಕೃಷ್ಣ ರವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರು ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿದರು.

                        ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬೊಮ್ಮಾಯಿರವರ ಪತ್ನಿ ಚೆನ್ನಮ್ಮ ಬಸವರಾಜ ಬೊಮ್ಮಾಯಿ, ಸಚಿವರಾದ ಎಸ್​.ಟಿ.ಸೋಮಶೇಖರ್​, ಮೇಯರ್ ಸುನಂದ ಪಾಲನೇತ್ರ,ಆರ್​.ಅಶೋಕ್​, ನಾರಾಯಣಗೌಡ, ಸಂಸದರಾದ ಪ್ರತಾಪ್​ ಸಿಂಹ,ಭೈರತಿ ಬಸವರಾಜು, ಬಿಸಿ ಪಾಟೀಲ್, ಶಶಿಕಲಾಜೊಲ್ಲೆ, ಸುನೀಲ್ ಕುಮಾರ್, ಶಾಸಕರಾದ ನಾಗೇಂದ್ರ, ಜಿ.ಟಿ.ದೇವೇಗೌಡ, ಅರವಿಂದ ಬೆಲ್ಲದ್​, ಎಸ್.ಎ.ರಾಮದಾಸ್ ತನ್ವೀರ್​ ಸೇಠ್​, ಹೆಚ್. ವಿಶ್ವನಾಥ್​, ರಾಜೀವ್, ಜಿಲ್ಲಾಧಿಕಾರಿಗಳಾದ ಡಾ.ಬಗಾದಿ ಗೌತಮ್ ಹಾಗೂ ಪೊಲೀಸ್ ಆಯುಕ್ತರಾದ ಡಾ.ಚಂದ್ರಗುಪ್ತ,ಡಿಸಿಪಿ ಪ್ರದೀಪ್ ಗುಂಟಿ,ಗೀತಾ ಪ್ರಸನ್ನ,ಎಸ್ಪಿ ಚೇತನ್ ಸೇರಿದಂತೆ​ ಅಧಿಕಾರಿಗಳು ಉಪಸ್ಥಿತರಿದ್ದರು.

                     ಇನ್ನು ಕೊರೊನಾ ಹಿನ್ನೆಲೆ ಈ ಬಾರಿಯ ದಸರಾ ಸರಳವಾಗಿ ನಡೆಯಿತ್ತಿದ್ದು, ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿಲ್ಲ.ದಸರಾ ಉದ್ಘಾಟನಾ ಕಾರ್ಯಕ್ರಮ ವೀಕ್ಷಣೆಗೆ ವಚ್ಯುವಲ್ ವ್ಯವಸ್ಥೆ ಮಾಡಲಾಗಿದೆ.

 

Leave a Reply

Your email address will not be published. Required fields are marked *