ಪಾಲಿಕೆ ಅಧಿಕಾರಿಗಳು ಕಾಲ ಕಾಲಕ್ಕೆ ತೆರಿಗೆ ವಸೂಲಿ ಮಾಡದೇ ಬಡ್ಡಿಗೆ ಚಕ್ರ ಬಡ್ಡಿ ಹಾಕಿ ಜನರಿಗೆ ತೊಂದರೆ ನೀಡಿತ್ತಿದ್ದಾರೆ:ಸಂದೇಶ್ ಸ್ವಾಮಿ

ಮೈಸೂರು:22 ಮಾರ್ಚ್ 2022

ನಂದಿನಿ ಮೈಸೂರು

ಕುಡಿಯುವ ನೀರು ಸಾರ್ವಜನಿಕ ಮೂಲಭೂತ ಹಕ್ಕು.ಅಧಿಕಾರಿಗಳು ನೀರಿನ ಬಿಲ್ ಪಾವತಿಸಲಾಗದ ಮನೆಗಳ ನೀರಿನ ಸಂಪರ್ಕ ಕಡಿದ ಮಾಡಿದ್ದಾರೆ ಎಂದು ಮಾಜಿ ಮೇಯರ್ ಸಂದೇಶ್ ಸ್ವಾಮಿ ತಿಳಿಸಿದರು.

ಇಂದು ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು ಮೈಸೂರಿನ ವಾಣಿವಿಲಾಸ್ ವಾಟರ್ ನಿಂದ ಎಲ್ಲಾ ಮನೆಗಳಲ್ಲಿ ನೀರಿನ ಸಂಪರ್ಕ ಕಡಿತಗೊಳಿಸಿದ್ದಾರೆ.ಮೈಸೂರು ಮಹಾರಾಜರು,ಮಹಾರಾಣಿರು ಕಾವೇರಿ ನೀರನ್ನ ಉಚಿತವಾಗಿ ನೀಡಿದ್ರು.ತೆರಿಗೆ ಕಡ್ಡಾಯ ಇದೆ.ಅಧಿಕಾರಿಗಳು ಕಾಲ ಕಾಲಕ್ಕೆ ತೆರಿಗೆ ವಸೂಲಿ ಮಾಡಬೇಕು.ಬಡ್ಡಿಗೆ ಬಡ್ಡಿ ಚಕ್ರ ಬಡ್ಡಿ ಹಾಕಿ ಜನರಿಗೆ ತೊಂದರೆ ನೀಡಿತ್ತಿದ್ದಾರೆ. ಬಡ್ಡಿ ವಸೂಲಿ ಮಾಡಲು ಕಾಯ್ದೆ ಇಲ್ಲ.ನಗರ ಪಾಲಿಕೆಗೆ ಸರ್ಕಾರ ಬಡ್ಡಿ ತೆಗೆದುಕೊಳ್ಳಬೇಡಿ ಎಂದು ಹೇಳಿದೆ ಆದ್ರೇ ಅಧಿಕಾರಿಗಳು ಬಡ್ಡಿ ತೆಗೆದುಕೊಳ್ಳಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.

Leave a Reply

Your email address will not be published. Required fields are marked *