ಆರ್.ಸಿ.ಬಿ ಗೆಲುವಿಗಾಗಿ ಹೊಸ ಕಾರಿಗೆ ಆರ್.ಸಿ.ಬಿ ಸ್ಟಿಕ್ಕರ್ ಅಂಟಿಸಿದ ಮೈಸೂರಿನ ಅಭಿಮಾನಿಗಳು

ನಂದಿನಿ ಮನುಪ್ರಸಾದ್ ನಾಯಕ್

ಸಾಂಸ್ಕೃತಿಕ ನಗರೀ ಮೈಸೂರಿನ
ಆರ್.ಸಿ.ಬಿ ಅಭಿಮಾನಿಗಳು ಈ ಬಾರಿ ಕಪ್ ನಮ್ದೇ ಅಂತ ಆಟಗಾರರಿಗೆ ಉತ್ಸಾಹ ತುಂಬಲು 2 ತಿಂಗಳ ಹಿಂದೆ ಖರೀದಿಸಿದ ಹೊಸ ಕಾರಿಗೆ ಆರ್.ಸಿ.ಬಿ ಸ್ಟಿಕರ್ ಅಂಟಿಸುವ ಮೂಲಕ ಖ್ಯಾತ ಉದ್ಯಮಿ ಪ್ರಸಾದ್, ಶ್ರೇಯಸ್,ಪ್ರಣೀತ್ ,ದೀಪಕ್ ತುಮಕೂರು,ಉದ್ಯಮಿ ಸುರೇಶ್ ಗಮನ ಸೆಳೆದಿದ್ದಾರೆ.

ಮೈಸೂರಿನ ಹೆಬ್ಬಾಳ ಕೈಗಾರಿಕಾ ಪ್ರದೇಶದಲ್ಲಿರುವ ಕಾರ್ಮೆಡ್ ಸಂಸ್ಥೆ ಕಾರ್ ವರ್ಕ್ ನಲ್ಲಿ
ಆರ್.ಸಿ.ಬಿ ಮಾಯಾವಾಗಿರುವ ಕಾರಿಗೆ ಚಾಲನೆ ನೀಡಲಾಯಿತು.

ಕಳೆದ 18 ವರ್ಷಗಳಿಂದ ಆರ್.ಸಿ.ಬಿ ಗೆಲುವಿಗಾಗಿ ಪ್ರಾರ್ಥಿಸುತ್ತಾ ಬಂದಿದ್ದೇವೆ.
ಈ ಬಾರಿ ಆರ್.ಸಿ.ಬಿ ಕಪ್ ಗೆಲ್ಲಬೇಕು.ಆಗಾಗಿ ನಾವು ಆರ್.ಸಿ.ಬಿ ಅಭಿಯಾನಿಗಳಾಗಿ ನಮ್ಮ ಕಾರಿನ ಮೇಲೆ ಕ್ರಿಕೆಟ್ ಆಟಗಾರರ ಭಾವಚಿತ್ರ ಹಾಗೂ ಕನ್ನಡದಲ್ಲಿ ಆರ್.ಸಿ.ಬಿ ಪದಗಳನ್ನ ಅಂಟಿಸಿದ್ದೇವೆ‌.ಎರಡು ದಿನ Rcb ಸ್ಟಿಕ್ಕರ್ ಅಂಟಿಸುವ ಕೆಲಸ ನಡೆದಿದೆ.
ಆರ್.ಸಿ. ಬಿ ಗೆಲ್ಲಲಿ ಅಂತ ನಾಡ ಅಧಿದೇವತೆ
ಚಾಮುಂಡಿ ಬೆಟ್ಟಕ್ಜೆ ತೆರಳಿ ದೇವಿಗೆ ಪ್ರಾರ್ಥಿಸಿ ಪೂಜೆ ಮಾಡಿಸುತ್ತೇವೆ.
ಬಳಿಕ ಇಡೀ ಮೈಸೂರಿನ ಸುತ್ತ ಒಂದು ರೌಂಡ್ ಹಾಕುತ್ತೇವೆ.ನಂತರ ಬೆಂಗಳೂರಿಗೆ ತೆರಳಿ ಮ್ಯಾಚ್ ನೋಡುತ್ತೇವೆ ಎಂದರು.

Leave a Reply

Your email address will not be published. Required fields are marked *