ಎಡೆಬಿಡದೆ ಸುರಿಯುತ್ತಿರುವ ಮಳೆ ಯಲಾದಹಳ್ಳಿ ಗ್ರಾಮದಲ್ಲಿ ಕುಸಿದ ಮನೆಗಳು,ಮನೆಯೊಳಗೆ ತುಂಬಿಟ್ಟಿದ್ದ ತಂಬಾಕು ಬೆಳೆ ನಾಶ

ಸಾಲಿಗ್ರಾಮ:15 ನವೆಂಬರ್ 2021

ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಸಾಲಿಗ್ರಾಮ ತಾಲೂಕು ಕರ್ಪೂರವಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಯಲಾದಹಳ್ಳಿ ಗ್ರಾಮದಲ್ಲಿ ಮನೆ ಕುಸಿದಿದೆ.

ಯಲಾದಹಳ್ಳಿ ಗ್ರಾಮದ ವೆಂಕಟಸ್ವಾಮಿ ಎಂಬುವರಿಗೆ ಸೇರಿದ ಮನೆಯಾಗಿದೆ. ಮನೆಯ ಒಳಗಡೆ ಹಾಗೂ ಹೊರಗಡೆ ಇದ್ದ ಗೋಡೆಗಳು ಕುಸಿದು ಬಿದ್ದಿವೆ. ಈ ಮನೆಯ ಒಳಗಡೆ ಇದ್ದ ಹದಮಾಡಿದ ತಂಬಾಕು ಹಾಳಾಗಿದ್ದು ಕಷ್ಟಪಟ್ಟು ಸಾಲಸೋಲ ಮಾಡಿ ತಂಬಾಕು ಬೆಳೆದಿದ್ದ ಬೆಳೆಯೂ ಹಾಳಾಗುವ ಮೂಲಕ ಅಪಾರ ನಷ್ಟವಾಗಿದೆ ಎಂದು ವೆಂಕಟಸ್ವಾಮಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ವೆಂಕಟಸ್ವಾಮಿ

ಸ್ಥಳಕ್ಕೆ ಗ್ರಾಮ ಪಂಚಾಯತಿ ಸದಸ್ಯ ರಾಂಪುರ ಲೋಕೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಸರ್ಕಾರ ನೊಂದವರಿಗೆ ಪರಿಹಾರ ನೀಡುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

 

Leave a Reply

Your email address will not be published. Required fields are marked *