ಕಾವೇರಿ ಉಳಿವಿಗಾಗಿ ಕರ್ನಾಟಕ ಬಂದ್ ಕರೆಗೆ ಕೇರಳ ಮೂಲದ ಮಲಯಾಳಿಗಳ ಬೆಂಬಲ

ನಂದಿನಿ ಮೈಸೂರು

ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ಖಂಡಿಸಿ ಇಂದು ಕರ್ನಾಟಕ ಬಂದ್ ಗೆ ಕರೆ ನೀಡಲಾಗಿದ್ದು ಕೇರಳ ಮೂಲದ ಮಲಯಾಳಿಗಳು ಕರ್ನಾಟಕ ಬಂದ್ ಗೆ ಬೆಂಬಲ ಸೂಚಿಸಿದ್ದಾರೆ.

ಮೈಸೂರು ಮಲಯಾಳಿ ಒಕ್ಕೂಟದ ಬ್ಯಾನರ್ ನ ಅಡಿಯಲ್ಲಿ ಕೇರಳ ಮೂಲದ ಎಲ್ಲ ಸಂಘ ಸಂಸ್ಥೆಯ ಮೈಸೂರಿನ ನಿವಾಸಿಗಳು ಜಿಲ್ಲಾಧಿಕಾರಿ ಕಚೇರಿ ಬಳಿ ಒಟ್ಟುಗೂಡಿ‌ ಕರ್ನಾಟಕ ಬಂದ್ ಗೆ ಬೆಂಬಲಿಸಿದರು.

ಪ್ರತಿಭಟನೆಯಲ್ಲಿ ಕೇರಳದ ಮಲಯಾಳಿಗಳು ಮಾತನಾಡಿ
ಕರ್ನಾಟಕ ರಾಜ್ಯದಲ್ಲಿ ಕೇರಳ ಮೂಲದ ಮಲಯಾಳಿಗಳು ಲಕ್ಷಾಂತರ ಜನ ವಾಸವಾಗಿ ಇದ್ದೇವೆ. ಮೈಸೂರು ನಗರದಲ್ಲೂ ಕೂಡಾ ಸಾವಿರಾರು ಸಂಖ್ಯೆಯಲ್ಲಿ ನೆಲೆಸಿದ್ದೇವೆ. ಕರ್ನಾಟಕದ ಎಲ್ಲಾ ಕನ್ನಡಿಗರ ಜೊತೆ ನಾವು ಕೂಡ ಕನ್ನಡಿಗರು ಎಂಬ ಭಾವನೆಯೊಂದಿಗೆ ಈ ಒಂದು ಹೋರಾಟಕ್ಕೆ ನಮ್ಮ ಬೆಂಬಲವನ್ನು ಸೂಚಿಸುತ್ತೇವೆ ಎಂದರು.

Leave a Reply

Your email address will not be published. Required fields are marked *