ದಶಕಗಳ ಹಳೆಯದಾದ ಗಡಿ ಸಂಘರ್ಷಕ್ಕೆ ಅಂತ್ಯ ಹಾಡಿದ ಗೃಹ ಸಚಿವ ಅಮಿತ್ ಶಾ

 

*ದಶಕಗಳ ಹಳೆಯದಾದ ಗಡಿ ಸಂಘರ್ಷಕ್ಕೆ ಅಂತ್ಯ ಹಾಡಿದ ಗೃಹ ಸಚಿವ ಅಮಿತ್ ಶಾ*

ಸುಮಾರು 800 ಕಿ.ಮೀ ಉದ್ದದ ವಿಸ್ತಾರ ಹೊಂದಿರುವ ಅಸ್ಸಾಂ-ಅರುಣಾಚಲ ಪ್ರದೇಶದ ಅಂತರರಾಜ್ಯ ಗಡಿ ಒಪ್ಪಂದಕ್ಕೆ ಗುರುವಾರ ಸಹಿ ಹಾಕಿದ್ದು, ಗೃಹ ಸಚಿವ ಅಮಿತ್ ಶಾ ಅವರ ಈಶಾನ್ಯ ರಾಜ್ಯಗಳ ಅಭಿವೃದ್ಧಿಯ ಪರ್ವಕ್ಕೆ ಮತ್ತೊಂದು ಗರಿ ಮೂಡಿದೆ. ಈ ಐತಿಹಾಸಿಕ ಒಪ್ಪಂದವು ಎರಡು ನೆರೆಯ ರಾಜ್ಯಗಳ ನಡುವೆ ದೀರ್ಘಾವಧಿಯ ಒಪ್ಪಂದವನ್ನು ಖಚಿತಪಡಿಸುವುದಲ್ಲದೇ, ಕೆಲವು ವರ್ಷಗಳಿಂದ ಕಳೆದುಹೋಗಿದ್ದ ವೈಭವವನ್ನು ಮರಳಿ ಪಡೆಯಲು, ಮತ್ತು ಇಡೀ ಈಶಾನ್ಯ ಪ್ರದೇಶದ ಪ್ರಗತಿಗೆ ಮತ್ತಷ್ಟು ಉತ್ತೇಜನ ನೀಡಲಿದೆ.

ಕೇಂದ್ರ ಗೃಹ ಸಚಿವ ಅಮಿತ್ ಶಾರವರ ಕನಸಿನ ಕೂಸಾದ ಈ ಒಪ್ಪಂದವು, ಯಾವುದೇ ಪ್ರದೇಶ ಅಥವಾ ಗ್ರಾಮಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಉಭಯ ರಾಜ್ಯಗಳ ನಡುವೆ ಯಾವುದೇ ಭವಿಷ್ಯದಲ್ಲಿ ಭಿನ್ನಾಭಿಪ್ರಾಯವನ್ನು ಹೆಚ್ಚಿಸುವ ಅವಕಾಶವನ್ನು ಶಾಶ್ವತವಾಗಿ ತೆಗೆದುಹಾಕುತ್ತದೆ. ಕಳೆದ ನಾಲ್ಕು ವರ್ಷಗಳಲ್ಲಿ ಈಶಾನ್ಯ ರಾಜ್ಯಗಳಲ್ಲಿ ಮಾಡಿದ ಎಂಟನೇ ಒಪ್ಪಂದವಾಗಿದ್ದು, ಆರ್ಥಿಕ ಅಭಿವೃದ್ಧಿಗೆ ಅಗಾಧವಾದ ಸಾಮರ್ಥ್ಯವನ್ನು ಹೊಂದಿರುವ ಈ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಶಾಶ್ವತಗೊಳಿಸುವ ಗುರಿಯನ್ನು ಹೊಂದಿದೆ.

ಶಾರವರ ಸಮ್ಮುಖದಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಗಿದ್ದು, ಅವರು ಶಾಂತಿಯಿಲ್ಲದೆ ಅಭಿವೃದ್ಧಿಯನ್ನು ಸಾಧಿಸಲು ಸಾಧ್ಯವಿಲ್ಲ ಎಂದು ಬಲವಾಗಿ ನಂಬಿದ್ದಾರೆ. ಶಾರವರ ಪ್ರಕಾರ, ಅಭಿವೃದ್ಧಿಗೆ ಸಹಕಾರ ಮತ್ತು ಶ್ರದ್ಧೆ ಬೇಕು, ಆಂದೋಲನ ಅಥವಾ ಭಿನ್ನಾಭಿಪ್ರಾಯವಲ್ಲ.

ಈ ಸಂದರ್ಭದಲ್ಲಿ ಮಾತನಾಡಿದ ಶಾ, ಹಿಂದಿನ ಸರ್ಕಾರಗಳ ನಿಷ್ಕ್ರಿಯ ಕುರಿತು ಟೀಕಿಸುತ್ತಾ, ಅವರು ಈ ರೀತಿ ನಿರುತ್ಸಾಹ ತೋರಿಸದಿದ್ದರೆಮ ಇಂತಹ ವಿವಾದಗಳು ಅಂತ್ಯಗೊಳ್ಳುತ್ತಿದ್ದವು. ಆದಾಗ್ಯೂ, ಅಸ್ಸಾಂ-ಅರುಣಾಚಲ ಒಪ್ಪಂದವು ಖಂಡಿತವಾಗಿಯೂ ಈ ಇಡೀ ಪ್ರದೇಶದ ಭವಿಷ್ಯದ ಅಭಿವೃದ್ಧಿಗೆ ದಾರಿ ಮಾಡಿಕೊಡಲಿದೆ ಎಂದು ಶಾ ಹೇಳಿದರು.

ಒಂದು ಕಾಲದಲ್ಲಿ ಅಭಿವೃದ್ಧಿ ಹೊಂದುತ್ತಿರುವ ವ್ಯಾಪಾರ ಮತ್ತು ಆರ್ಥಿಕ ಕೇಂದ್ರವಾಗಿ, ಅಷ್ಟಲಕ್ಷ್ಮಿ (ಎಂಟು ರಾಜ್ಯಗಳು) ಎಂದೇ ಕರೆಯಲ್ಪಡುವ ಈಶಾನ್ಯ ಪ್ರದೇಶವು ಆಂದೋಲನ, ಜನಾಂಗೀಯ ಸಂಘರ್ಷ, ಅಶಾಂತಿ, ಉಗ್ರಗಾಮಿತ್ವ ಮತ್ತು ಪ್ರತ್ಯೇಕತಾವಾದದಿಂದ ತನ್ನ ತೆರೆಮರೆಗೆ ಸರಿಯಿತು. 2014 ರಲ್ಲಿ ಅಧಿಕಾರ ವಹಿಸಿಕೊಂಡ ತಕ್ಷಣ, ತನ್ನ “ಆಕ್ಟ್ ಈಸ್ಟ್ ಪಾಲಿಸಿ” ಅಡಿಯಲ್ಲಿ ಈ ಪ್ರದೇಶದಲ್ಲಿ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಯ ಶಾಶ್ವತ ವಾತಾವರಣವನ್ನು ತರುವ ಕಾರ್ಯವನ್ನು ಭಾಜಪ ಸರ್ಕಾರ ಮಾಡಿತು.

ಅಮಿತ್ ಶಾ ನೇತೃತ್ವದಲ್ಲಿ ಈ ಸಮಸ್ಯೆಗಳ ಪರಿಹಾರಕ್ಕಾಗಿ ತ್ರಿಸೂತ್ರಗಳನ್ನು ಅಳವಡಿಸಿಕೊಂಡರು.ಮೊದಲನೆಯದಾಗಿ ಸ್ಥಳೀಯ ಆಡುಭಾಷೆಗಳು, ನೃತ್ಯ, ಸಂಗೀತ, ಆಹಾರ ಮತ್ತು ಸಂಸ್ಕೃತಿಗಳನ್ನು ಕಾಪಾಡುವುದು ಮತ್ತು ಅವುಗಳನ್ನು ಭಾರತದಾದ್ಯಂತ ಪ್ರಚಾರ ಮಾಡುವುದು. ಎರಡನೇಯದಾಗಿ ಈಶಾನ್ಯ ರಾಜ್ಯಗಳಲ್ಲಿನ ಎಲ್ಲಾ ಸಂಘರ್ಷಗಳಿಗೆ ಅಂತ್ಯ ಹಾಡಿ, ಅಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಹೆಚ್ಚಿಸುವುದು. ಮೂರನೇಯದು ಈ ರಾಜ್ಯಗಳ ಸಮಗ್ರ ಅಭಿವೃದ್ಧಿ.

ಅಮಿತ್ ಶಾ ಅವರ ನೇತೃತ್ವದಲ್ಲಿ, ಗೃಹ ಸಚಿವಾಲಯವು ಈ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಉತ್ತೇಜಿಸಲು ಶ್ರದ್ಧೆಯಿಂದ ಕೆಲಸ ಮಾಡಿದೆ, ಮತ್ತು “ಪೂರ್ಣ ಸರ್ಕಾರದ” ವಿಧಾನದೊಂದಿಗೆ ಪ್ರದೇಶದ ಘನತೆ, ಸಂಸ್ಕೃತಿ, ಭಾಷೆ, ಸಾಹಿತ್ಯ ಮತ್ತು ಸಂಗೀತಕ್ಕೆ ಮಹತ್ವ ನೀಡಿದೆ. ಬಹಳ ಸಮಯದಿಂದ ದೆಹಲಿಯ ನಿರ್ಲಕ್ಷ್ಯ ಮತ್ತು ಮಲತಾಯಿ ಧೋರಣೆಗೆ ಬಲಿಯಾದ ಈಶಾನ್ಯವು ಈಗ ಹಿಂಸಾಚಾರ ಮತ್ತು ಉಗ್ರಗಾಮಿತ್ವವನ್ನು ದೂರವಿಟ್ಟು ಅಭಿವೃದ್ಧಿಯ ಮುಖ್ಯವಾಹಿನಿಗೆ ಮರಳಲು ಪ್ರಾರಂಭಿಸಿದೆ.

ಪ್ರಸ್ತುತ ಸರ್ಕಾರವು ಈ ಪ್ರದೇಶದಲ್ಲಿ ಆರ್ಥಿಕ ಅಭಿವೃದ್ಧಿಗೆ ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ. ಬಜೆಟ್ ಬೆಂಬಲವನ್ನು ದೊಡ್ಡ ರೀತಿಯಲ್ಲಿ ಹೆಚ್ಚಿಸುವುದರ ಜೊತೆಗೆ ಈಶಾನ್ಯ ಕೇಂದ್ರಿತ ವಿವಿಧ ಯೋಜನೆಗಳನ್ನು ಕೈಗೆತ್ತಿಕೊಳ್ಳುವುದರ ಹೊರತಾಗಿ, ಸರ್ಕಾರವು ಇತ್ತೀಚೆಗೆ ಈ ಪ್ರದೇಶಕ್ಕಾಗಿ ರೂ 4,800 ಕೋಟಿ ವೆಚ್ಚದಲ್ಲಿ ವೈಬ್ರೆಂಟ್ ವಿಲೇಜ್ ಪ್ರೋಗ್ರಾಂ (ವಿವಿಪಿ) ಅನ್ನು ಪ್ರಾರಂಭಿಸಿದೆ. ಮೂಲಸೌಕರ್ಯ ಅಭಿವೃದ್ಧಿ ಕಾರ್ಯಕ್ರಮಕ್ಕೆ 2.66 ಲಕ್ಷ ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದೆ. ‘DoNER’ ಸಚಿವಾಲಯದ ಬಜೆಟ್ ಅನ್ನು ಸಹ ಗಣನೀಯವಾಗಿ ಹೆಚ್ಚಿಸಲಾಗಿದೆ.

2014 ಕ್ಕೆ ಹೋಲಿಸಿದರೆ, 2022 ರಲ್ಲಿ ಹಿಂಸಾಚಾರದ ಘಟನೆಗಳು 67% ರಷ್ಟು ಕಡಿಮೆಯಾಗಿದೆ. ಅದೇ ಅವಧಿಯಲ್ಲಿ, ಭದ್ರತಾ ಪಡೆಗಳಲ್ಲಿನ ಸಾವುನೋವುಗಳು 60% ರಷ್ಟು ಕಡಿಮೆಯಾಗಿದೆ, ನಾಗರಿಕರ ಸಾವುಗಳು 85% ರಷ್ಟು ಕಡಿಮೆಯಾಗಿದೆ ಮತ್ತು 8,000 ಉಗ್ರಗಾಮಿಗಳು ಮುಖ್ಯವಾಹಿನಿಗೆ ಬಂದು ಶರಣಾಗಿದ್ದಾರೆ.

ಅಂತೆಯೇ, ಈಶಾನ್ಯದಲ್ಲಿ ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯಿದೆ (AFSPA) ಪರಿಧಿಯನ್ನು ಕಡಿಮೆ ಮಾಡಲಾಗಿದೆ ಮತ್ತು ತೊಂದರೆಗೊಳಗಾದ ಪ್ರದೇಶಗಳು ಈಗ ಮಹತ್ವಾಕಾಂಕ್ಷೆಯ ವಲಯಗಳಾಗಿ ಬದಲಾಗುತ್ತಿವೆ.

Leave a Reply

Your email address will not be published. Required fields are marked *