ನಂದಿನಿ ಮನುಪ್ರಸಾದ್ ನಾಯಕ್
ಚಾಮರಾಜ ಕ್ಷೇತ್ರದ ಇಂದಿರಾ ಗಾಂಧಿ ಅರಸ್ ಬ್ಲಾಕ್ ಅಧ್ಯಕ್ಷರಾಗಿ ವೆಂಕಟೇಶ್.ಟಿ ನೇಮಕ
ಮೈಸೂರು:ಕರ್ನಾಟಕ ಪ್ರದೇಶ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷರಾದ ಶ್ರೀ ವಿನಯ್ ಕುಮಾರ್ ಸೊರಕೆ ಮತ್ತು ಉಪಾಧ್ಯಕ್ಷರು ಹಾಗೂ ಮೈಸೂರು ವಿಭಾಗೀಯ ಉಸ್ತುವರಿಗಳಾದ ಎಂ ಶಿವಣ್ಣ ಹಾಗೂ ಮೈಸೂರು ನಗರ (ಜಿಲ್ಲಾ) ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಆರ್.ಮೂರ್ತಿ ಹಾಗೂ ಶಾಸಕರಾದ ಕೆ. ಹರೀಶ್ ಗೌಡ ರವರ ಆದೇಶದ ಮೇರೆಗೆ ನಿಮ್ಮನ್ನು ಮೈಸೂರು ನಗರ (ಜಿಲ್ಲಾ) ಕಾಂಗ್ರೆಸ್ ಪ್ರಚಾರ ಸಮಿತಿಯ ವ್ಯಾಪ್ತಿಗೆ ಬರುವ ಚಾಮರಾಜ ಕ್ಷೇತ್ರದ ಇಂದಿರಾಗಾಂಧಿ ಅರಸ್ ಬ್ಲಾಕ್ ಅಧ್ಯಕ್ಷರ ರಾಗಿ ವೆಂಕಟೇಶ್.ಟಿ ರವರು ಈ ತಕ್ಷಣದಿಂದ ಜಾರಿಗೆ ಬರುವಂತೆ ನೇಮಕಾತಿ ಮಾಡಿ ಆದೇಶಿಸಿರುತ್ತೇನೆ.
ತಮಗೆ ನೀಡಿರುವ ಜವಬ್ದಾರಿಯನ್ನು ವಹಿಸಿಕೊಂಡು ಪಕ್ಷದ ಸೂಚನೆ ಹಾಗೂ ಸ್ಥಳೀಯ ನಾಯಕರುಗಳ ಸಹಕಾರದೊಂದಿಗೆ ಪಕ್ಷದ ಸಬಲೀಕರಣದಲ್ಲಿ ತೊಡಗಿಸಿಕೊಂಡು, ಮುಂಬರುವ ವಿಧಾನಸಭಾ ಬನಾವಣೆಯಲ್ಲಿ ಪಕ್ಷದ ಸಂಘಟನೆ & ಬಲರ್ವದನೆಗೆ ಶ್ರಮಿಸಬೇಕೆಂದು ಕೋರುತ್ತಾ, ತಮ್ಮಗೆಲ್ಲರಿಗೂ ಹೆಚ್ಚಿನ ಯಶಸ್ಸು ಸಿಗಲೆಂದು ಹಾರೈಸುತ್ತೇನೆ.